ಉಗಮ ಶ್ರೀನಿವಾಸ್
ಕುವೆಂಪು ಅವರ `ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಮತ್ತೆ ಓದಲಿಕ್ಕೆ ಇಟ್ಟುಕೊಂಡಿದ್ದೇನೆ. ಈಗಾಗಲೇ ಐದು ಬಾರಿ ಓದಿ ಮುಗಿಸಿದ್ದೇನೆ. ಪ್ರತಿ ಬಾರಿ ಓದಿದಾಗಲೂ ನನಗೆ ಹೊಸ ಹೊಸ ಅಥ೯ವನ್ನು ಕೊಡುತ್ತಲೇ ಇರುತ್ತದೆ. ಬಹುಶಃ ಶ್ರೇಷ್ಟ ಲೇಖಕರ ಶ್ರೇಷ್ಟ ಕೃತಿ ಕಾಲದ ಜತೆ ಸಂವಾದಿಯಾಗುತ್ತಲೇ ಇರುತ್ತೆ.
ಆ ಕಾಡು ಮೇಡು, ನಾಯಿಗುತ್ತಿ, ಐತ ಮತ್ತು ಪೀಂಚಲು ಕಾದಂಬರಿಯಲ್ಲಿನ ಆ ಪಾತ್ರಗಳನ್ನು ನೆನಪಿಸಿಕೊಂಡರೆ ಎಂಥದ್ದೋ ಅನುಭವ. ಸುಮಾರು 500 ಪುಟಗಳ ಈ ಕಾದಂಬರಿಯನ್ನು ಓದಿ ಮುಗಿಸಿದರೆ ಕುವೆಂಪು ಅವರ ಕುಪ್ಪಳ್ಳಿ, ಮಲೆನಾಡು, ಅಲ್ಲಿನ ಸಂಸ್ಕೃತಿ, ಆಧ್ಯಾತ್ಮ.. ಹೀಗೆ ಥರೇವಾರಿ ಅನುಭವ ಖಚಿತ. ಓದದಿದ್ದರೆ ಕೂಡಲೇ ಓದಿ, ಓದಿದ್ದರೇ ಮತ್ತೊಮ್ಮೆ ಓದಿ.!








0 Comments