ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಗಮನಿಗೊಂದು ನಾಟಕ ಬೇಕು..

ನಾನು ಸೇರಿದಂತೆ ನನ್ನ ಒಂದಷ್ಟು ಗೆಳೆಯರಿಗೆ ನಾಟಕದಲ್ಲಿ ಅಭಿನಯಿಸುವ ಉಮೇದು ಬಂದಿದೆ. ಒಂದೂವರೆ ತಿಂಗಳು ತಾಲೀಮು ನಡೆಸಿ ತುಮಕೂರಿನಲ್ಲಿ ಪ್ರದಶ೯ನ ನೀಡುವುದು ಸದ್ಯದ ಉದ್ದೇಶ. ಈಗಾಗಲೇ ನಾಟಕ ಕೃತಿಯ ಹುಡುಕಾಟಕ್ಕೆ ಇಳಿದಿದ್ದೇವೆ.

ಯಾವ ಕೃತಿಯನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲ ಕೂಡ ಇದೆ. ನೀವು ಓದಿದ, ತಟ್ಟಿದ, ಕಾಡಿದ ನಾಟಕ ಕೃತಿ ಇದ್ದರೆ ತಿಳಿಸಿ. ಸುಮಾರು ಒಂದೂವರೆ ಗಂಟೆ ಅವಧಿಯ ನಾಟಕ ಇದ್ದರೆ ಚೆಂದ. ನೀವೊಂದು ಹೆಸರು ಸೂಚಿಸಿದರೆ ನಮ್ಮ ಕೆಲಸ ಅಧ೯ ಸಲೀಸು..

ಉಗಮ ಶ್ರೀನಿವಾಸ್

‍ಲೇಖಕರು G

26 February, 2011

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. ಡಾ.ಬಿ.ಆರ್.ಸತ್ಯನಾರಾಯಣ

    ತೇಜಸ್ವಿಯವರ ಚಿದಂಬರ ರಹಸ್ಯ ನನ್ನ ಆಯ್ಕೆ. ಅದನ್ನು ರಂಗಭೂಮಿಗೆ ಇಳಿಸುವುದು ನಿಮಗೊಂದು ಸವಾಲು!

  2. jogimane

    ಉಗಮ, ನಿಮ್ಮ ಬೇಡಿಕೆಯೇ ಚೆನ್ನಾಗಿದೆ. ನನ್ನ ತಂಗಿಗೊಂದು ಗಂಡು ಕೊಡಿ ಎಂಬಂತೆ! ನಿಮಗೆ ನಾಟಕ ಸೂಚಿಸುತ್ತೇನೋ ಇಲ್ಲವೋ, ಉಗಮನಿಗೊಂದು ನಾಟಕ ಬೇಕು ಅನ್ನೋ ಹೆಸರಿನ ಕತೆಯನ್ನಂತೂ ಬರೆಯುತ್ತೇನೆ.

  3. ಕವಿಸ್ವರ,ಶಿಕಾರಿಪುರ

    ಲಂಕೇಶರ ಗುಣಮುಖ ಅಥವಾ ಸಂಕ್ರಾಂತಿ… ಪ್ರೇಕ್ಷಕರನ್ನು ತೀವ್ರವಾಗಿ ಕಾಡುವ ನಾಟಕ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading