“ಸಾವ ಕದ ತಟ್ಟಿದ ಈ ಮಗು ಚಿರಾಯುವಾಗಲಿ”
ಶಿವಪ್ರಸಾದ್
ಈ ಮೇಲಿನ ಚಿತ್ರದಲ್ಲಿ ಇರುವ ಮಗುವಿನ ಹೆಸರು ರೇವತಿ ಅಲಿಯಾಸ್ ಲೇವತಿ
ಜೀ ಕನ್ನಡದ ಡ್ರಾಮ ಜೂನಿಯರ್ ನಲ್ಲಿ ಭಾಗವಹಿಸುತ್ತಿದ್ದಾಳೆ
ಈ ಮಗು ತಾಯಿ ಗರ್ಭದಲ್ಲಿ ಇದ್ದಾಗ ಇಡೀ ಕುಟುಂಬ ಕೆ ಆರ್ ಎಸ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಮನಸ್ಸು ಬದಲಾಯಿಸಿ ವಾಪಸ್ಸು ಬಂದರಂತೆ
ನಂತರ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಲು ಹೋಗಿದ್ದಾಗ ಆ ಪುಟಾಣಿ ಅಜ್ಜಿ ತಡೆದರಂತೆ
ನಮ್ಮ ಮುಂದೆ ನಿಂತಿರುವ ಈ ಮಗು ಚಿರಾಯುವಾಗಲಿ
ನಿನ್ನೆಯ ಡ್ರಾಮಾ ಜೂನಿಯರ್ ಶೋ ಖಂಡಿತವಾಗಿಯೂ ಒಂದೊಳ್ಳೆ ಅತ್ಯದ್ಭುತ ಕಾರ್ಯಕ್ರಮವೆನಿಸಿತ್ತು.
ಆ ಪುಟ್ಟ ಪುಟಾಣಿ ರೇವತಿಯವರ ತಾಯಿ ಒಡಲಾಳದ ವ್ಯಥೆಯಲ್ಲಿ ಮುಚ್ಚಿಟ್ಟ ಕಹಿ ಸತ್ಯವನ್ನು ಹೊರಹಾಕಿದಾಗ ನೋಡುತ್ತಿರುವ ಪ್ರೆಕ್ಷರ ಕಣ್ಣಂಚಲಿ ಹನಿ ನೀರು ಸುರಿಸಿತ್ತು..
ಆ ಕಷ್ಟವನ್ನು ಸಹಿಸಿಕೊಂಡು ಆ ಪುಟಾಣಿ ಮಗುವನ್ನು ಬೆಳೆಸದಿದ್ದರೆ ಈ ಪುಟಾಣಿ ಕಲಾವಿದೆಯನ್ನು ನಾವು ಡ್ರಾಮಾ ಜೂನಿಯರ್ ಕಾರ್ಯಕ್ರಮದಲ್ಲಿ ನೋಡಲು ಆಗುತ್ತಿರಲಿಲ್ಲ.
ಆ ಪುಟಾಣಿ ರೇವತಿಯ ತಾಯಿ, ತಂದೆ ಮತ್ತು ಬದುಕನ್ನು ಬದಲಾಯಿಸಿದ ಆ ಅಜ್ಜಿಗೆ ಆ ದೇವರು ಒಳಿತನ್ನು ಮಾಡಲಿ.
ಆ ಪುಟಾಣಿ ಕಲಾವಿದೆ ರೇವತಿ ಇನ್ನು ಸಾಧನೆಯಲ್ಲಿ ಎತ್ತರೆತ್ತರಕ್ಕೆ ಬೆಳೆಯಲಿ.
ಈ ಪೋಸ್ಟ್ ನ್ನು ಓದಿದ ಓದುಗ ಮಿತ್ರರೆಲ್ಲರು ಒಂದು ಬದಲಾವಣೆಯನ್ನು ಬಯಸಲಿ. ಈ ಹೆಣ್ಣು ಭ್ರೂಣ ಹತ್ಯೆಯ ಕರ್ಮಕಾಂಡಗಳು ಈ ಸಮಾಜದಿಂದ ಮುಕ್ತವಾಗಲಿ.
ಎಲ್ಲ ಹೆಣ್ಣುಮಕ್ಕಳಿಗೆ ನನ್ನ ಶುಭ ನಮನಗಳು.
Amen.