ಸಂತೋಷ ಉಂಡಾಡಿ, ಬೆಳಗಾವಿ
ಗೆದ್ದೇ ಬಿಟ್ಟೆ! ಕೃತಿ ಕೊಳ್ಳಲು- 70191 82729
ಅಥವಾ http://bahuroopi.in
—-
‘ಗೆದ್ದೇ ಬಿಟ್ಟೆ’ ಪುಸ್ತಕ ಈಗ ತಾನೇ ಓದಿ ಮುಗಿಸಿದೆ.
ಸಾಯಂಕಾಲ 7 ರ ಸುಮಾರಿಗೆ ಶುರು ಮಾಡಿದ್ದೆ, ಒಂದೇ ಸಿಟ್ಟಿಂಗ್ ನಲ್ಲಿ ಓದಿ ಮುಗಿಯುತ್ತಿತ್ತು, ಇನ್ನೇನು ಮುಗಿಯಿತು ಎನ್ನುವಾಗ ಕಾಲ್ ಬಂದು ತೊಂದರೆ ಆಯ್ತು. ಕೊನೆಯ ಐದಾರು ಪುಟ ಈಗ ಓದಿದೆ.
ಪುಸ್ತಕ ಓದುಗರ ಕುತೂಹಲ ಪುಟದಿಂದ ಪುಟಕ್ಕೆ ಹೆಚ್ಚಿಸುತ್ತಾ ಹೋಗುತ್ತೆ. ಪುಸ್ತಕ ಮಕ್ಕಳಿಗೆ ಅಂತಿದ್ದರು, ಹಿರಿಯರು ಕೂಡ ಓದಿ ಖುಷಿ ಪಡಬಹುದು.
ನಿಮ್ಮ ಅನುವಾದದ ಭಾಷೆಯು ಸಹಜವಾಗಿದೆ. ಕಥೆಯಲ್ಲಿ ಸ್ಥಳದ ಹೆಸರು ಹೊರತು ಪಡಿಸಿದರೆ ಕನ್ನಡದ್ದೆ ಕಥೆ ಎನ್ನುವಷ್ಟು ಸಹಜ, ಸುಭಗ ಮತ್ತು ಆಕರ್ಷಕವಾಗಿದೆ ನಿಮ್ಮ ಅನುವಾದ.
ಕಥೆಯ ಮಧ್ಯದಲ್ಲಿ ಎಲ್ಲರಿಗೂ ಬೇಕಾಗುವ ಒಂದು ನೈತಿಕ ಚೌಕಟ್ಟು ಇದೆ . ಮಾತಿನಲ್ಲಿರಬೇಕಾದ ಸೌಜನ್ಯ, ಜೊತೆಗೆ ಕಾರ್ಯದಲ್ಲಿರಬೇಕಾದ ಉತ್ಸಾಹ, ಮುಖ್ಯವಾಗಿ ಹೋರಾಟ ಮತ್ತು ಛಲ. ಬದುಕಿನಲ್ಲಿ ಬರುವ ಹಿನ್ನಡೆ, ಅಪಸವ್ಯ, ದೈಹಿಕ ನ್ಯೂನತೆಗಳನ್ನು ಮೆಟ್ಟಿ ನಿಲ್ಲುವ ಮನೋಭಾವ ಪರಿಣಾಮಕಾರಿಯಾಗಿ ಮೂಡಿಬಂದಿದೆ.
ತಮಿಳುನಾಡಿನಲ್ಲಿ ಈ ಕಥೆಯ ಪಾತ್ರಗಳಾದ ಅಂಬಿಕಾ ಮತ್ತು ದಿವ್ಯಾ ನಿಜವಾಗಿಯೂ ಇರುವರೆಂಬ ಮಾಹಿತಿ ಅವರ ಕುರಿತು ಹೆಮ್ಮೆ ಮೂಡಿಸಿತು. ಮೂಲ ಲೇಖನವನ್ನು ಓದುವೆ.
ಒಂದು ಒಳ್ಳೆಯ ಪುಸ್ತಕ ಓದಿದ ಖುಷಿ ನನ್ನದಾಯ್ತು. ಟೈಟಲ್ ನೋಡಿಯೇ ಈ ಪುಸ್ತಕ ಕೊನೆಯ ಗಳಿಗೆಯಲ್ಲಿ ತಗೊಂಡಿದ್ದೆ. ಚೆನ್ನಾಗಿದೆ.
ನನ್ನ ಮಕ್ಕಳಿಗೆ ಈ ಕಥೆ ನಿರೂಪಿಸಿದೆ. ದೊಡ್ಡ ಮಗಳು ಓದುವಳೆಂಬ ಭರವಸೆ ಇದೆ. ಮತ್ತೊಮ್ಮೆ ತಮಗೆ ಧನ್ಯವಾದಗಳು. ಮೂಲ ಲೇಖಕರಿಗೂ ನನ್ನ ವಂದನೆ ತಿಳಿಸಿ.
ಈಕೆ ಅಕ್ಷರಾ ಉಂಡಾಡಿ (ಶ್ರೀ ಸಂತೋಷ ಉಂಡಾಡಿಯವರ ಮಗಳು) ೪ ನೇ ತರಗತಿ ಓದುತ್ತಿದ್ದಾಳೆ. ಮಕ್ಕಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗುತ್ತಿರುವ ಇವತ್ತಿನ ಸಂದರ್ಭದಲ್ಲಿ ಇಂಥ ಮಕ್ಕಳು ತುಂಬಾ ವಿಶೇಷ ಎನಿಸುತ್ತಾರೆ.
ಅವಳು ಪುಸ್ತಕ ಓದಿ, ಅಭಿಪ್ರಾಯ ಬರೆದಿದ್ದಾಳೆ-ಇಲ್ಲಿ ಹಾಕಿದ್ದೇನೆ.
ನನಗೆ ಬಂದ ವಿಮರ್ಶೆಗಳಲ್ಲಿ ಅತೀ ವಿಶಿಷ್ಟವಾದ ವಿಮರ್ಶೆ ಇದು. ಮಕ್ಕಳಿಗಾಗಿ ಬರೆದ ಪುಸ್ತಕವನ್ನು ಮಕ್ಕಳೇ ಓದಿ, ಅಭಿಪ್ರಾಯ ಹೇಳುವುದು ನಿಜಕ್ಕೂ ಶ್ಲಾಘನೀಯ.
ಅಕ್ಷರಾಳಿಗೆ ನನ್ನ ಧನ್ಯವಾದ. ಬಹುಶಃ ಅವಳಿಗೆ ಅಕ್ಷರಗಳು ಒಲಿದಂತಿವೆ, ಮುದ್ದಾದ ಬರವಣಿಗೆ.. ಹೀಗೇ ಸಾಗಲಿ ಅವಳ ಅಕ್ಷರ ಪ್ರೀತಿ…..
Thank you very much dear for reading and opining about a book. It’s very important to read and express your honest opinion. I am glad to learn that you enjoyed reading a book and especially loved Ambika’s character.
Keep reading…..
All the best
ತಾವೂ ಓದಿ, ಕಥೆ ನಿರೂಪಿಸಿ, ಮಗಳಿಗೂ ಓದುವಂತೆ ಪ್ರೇರೇಪಿಸಿದ ಶ್ರೀ ಸಂತೋಷ ಉಂಡಾಡಿ ಯವರಿಗೆ ವಿಶೇಷ ಧನ್ಯವಾದ.
0 ಪ್ರತಿಕ್ರಿಯೆಗಳು