ವಿವೇಕಾನಂದ ತೋವಿನಕೆರೆ
ಗೆಳೆಯ ಆರ್. ಜಿ. ಹಳ್ಳಿ ನಾಗರಾಜ್ ಹಿರಿಯರಾದ ಪ್ರೊ. ಎನ್. ಎಸ್. ಲಕ್ಷೀನಾರಾಯಣ ಭಟ್ಟರ ಇತ್ತೀಚಿನ ಪುಸ್ತಕ ಕನ್ನಡ ಸಾಹಿತ್ಯ ಚರಿತ್ರೆ ಬಗ್ಗೆ ಅಸಮಾಧಾನ ಸೂಚಿಸಿ ತಮ್ಮ Time Line ನಲ್ಲಿ ಬರೆದಿದ್ದಾರೆ.
ಏನೆಂದು ಕೇಳಿದ್ದಕ್ಕೆ…. ಅಲ್ಲಿ ಶಾಂತರಸ, ಬೆಸಗರಹಳ್ಳಿ ರಾಮಣ್ಣ, ಹೆಚ್. ಎಂ. ಚನ್ನಯ್ಯ, ರಹಮತ್ ತರೀಕೆರೆ, ಸಿ.ಪಿ.ಕೆ ಯೇ ಮೊದಲಾದವರ ಬಗ್ಗೆ ಅರ್ಧ, ಒಂದು ಸಾಲಿನ ಪ್ರಮ್ತಾಪವಿದೆ. ಹೆಚ್. ಎಲ್. ನಾಗೇಗೌಡ, ಕೊ.ಚ. ಸರಜೂ ಕಾಟ್ಕರ್ ಮೊದಲಾದ ನೂರಾರು ದಲಿತ, ಶೂದ್ರ, ಮುಸ್ಲೀಂ ಬರಹಗಾರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಸ್ವತಹ ಅವರದೇ ಹೆಸರಿನ ಪ್ರಸ್ತಾಪ 17 ಕಡೆ ಇದೆ, ಹಲವಾರು ಪ್ಯಾರಾಗಳಲ್ಲಿ. ಇದೆಂಥ ಕನ್ನಡ ಸಾಹಿತ್ಯ ಚರಿತ್ರೆ ಎಂದು ಕಿಡಿಗಾರಿದರು. ಅದಕ್ಕೆ ನಾನು ನನ್ನದೊಂದು ಚುಟುಕು ಹೇಳಿದೆ… ಅದರ ಹೆಸರು
“ತನ್ನ ಚರಿತ್ರೆ”
ಚರಿತ್ರೆ ಬರೆಯಲು ಕುಳಿತ
ಪಂಡಿತನೊಬ್ಬ
ದೇವರ ಖಾಸಾಮಗನೇ
ಆದರೂ
ಬರೆಯುವುದು ಮಾತ್ರ
ಅವನ ಚರಿತ್ರೆ’!
ಏನನ್ನುತ್ತೀರಿ?







0 Comments