ಎಲ್ ಸಿ ನಾಗರಾಜ್
ಇದನ್ನ ಎಲ್ಲಿ ಓದಿದೆ ಅಂತಾ ನೆನಪಾಗ್ತಿಲ್ಲ, ಇದು ಶುದ್ಧೀಕರಣ ಕುರಿತ ಒಂದು ಜಾನಪದ ಕತೆ ;
ಶರಣ ಮಡಿವಾಳ ಮಾಚಿದೇವರು ಮತ್ತು ಅಲ್ಲಮಪ್ರಭು ನಡುವೆ ನಡೆದ ಒಂದು ಪ್ರಸಂಗ:
ಅಲ್ಲಮನ ಬಗ್ಗೆ ಅಪಾರ ಗೌರವ ಹೊಂದಿದ್ದ ಮಡಿವಾಳ ಮಾಚಿದೇವರು ಕಾಯಕ ನಿಷ್ಟೆಯ ಶರಣ ; ಒಂದು ದಿನ ಅಲ್ಲಮಪ್ರಭುವಿನ ಬಟ್ಟೆಗಳನ್ನ ತೊಳೆಯಲು ನದಿ ಹತ್ತಿರ ತೆಗೆದುಕೊಂಡು ಹೋಗುತ್ತಾರೆ. ಆದರೆ ಅಲ್ಲಮಪ್ರಭುವಿನ ಬಟ್ಟೆಗಳಲ್ಲಿ ಹೇನುಗಳಿರುವುದನ್ನ ಕಂಡು, ತೊಳೆದರೆ ಅವು ಸಾಯಬಹುದೆಂದು ತೊಳೆಯದೇ ತರುತ್ತಾರೆ ; ಅಲ್ಲಮ ಏನನ್ನೂ ಮಾತಾಡುವುದಿಲ್ಲ
ಶುದ್ಧೀಕರಣ ಎನ್ನುವುದು ಒಬ್ಬರ ಮನಸಿಗೆ ಸಾಂಸ್ಕೃತಿಕವಾಗಿ ನೋವು ಮಾಡುವಂತಹದು ; ಇಂತಹ ಹಿಂಸೆಯಿಂದ ಮಾಡುವ ಶುದ್ಧೀಕರಣ ಪವಿತ್ರವಲ್ಲ ; ಅದು ಜೀವಘಾತುಕ
ಈ “ಶುದ್ಧೀಕರಣ ” ಎಂಬುದಕ್ಕೆ ” ನಿರ್ಮೂಲನ ” ಎಂಬ ಅರ್ಥ ಕೂಡ ಇದೆ.
ಉಧಾಹರಣೆಗೆ ‘ ಜನಾಂಗೀಯ ನಿರ್ಮೂಲನ- ethnic cleansing ಗೆ ಜನಾಂಗೀಯ ಶುದ್ಧೀಕರಣ ಎಂಬ ಅರ್ಥ .
ಅಂದರೆ ಒಂದು ಜನಾಂಗವನ್ನ ನಿರ್ಮೂಲನ ಮಾಡುವ ಘಾತುಕತೆಯಿಂದ ಒಂದು ಜನಾಂಗದ ಶುದ್ಧೀಕರಣ ಮಾಡಿಕೊಳ್ಳುವ ಕ್ರಿಯೆ
ಅಂದರೆ ಒಂದು ನಿರ್ಧಿಷ್ಟ ಜನಾಂಗದ ಅಸ್ತಿತ್ವ ಅಥವಾ ಇರುವಿಕೆಯೇ ಇನ್ನೊಂದು ಜನಾಂಗದ ಪರಿಶುದ್ಧತೆಗೆ ಮಾರಕ ಎಂಬ ಘಾತುಕ ಪರಿಕಲ್ಪನೆ. ಮನಶಾಸ್ತ್ರದಲ್ಲಿ ಇದು Xenophobia
ಯುದ್ಧ ಅಪರಾಧ ( war crimes ) ಗಳ ಕುರಿತ ಕೆಲವು ಸಾಕ್ಷಿಗಳನ್ನ ಅನುವಾದಿಸುವಾಗ Ethnic cleansing ಎಂಬ ಶಬ್ಧ ಬಳಕೆಯನ್ನ ‘ ಜನಾಂಗೀಯ ಶುದ್ಧೀಕರಣ ‘ ಅಂತಾ ಅನುವಾದಿಸಿದ್ದೆ
ನನ್ನ ಗೆಳೆಯ ‘ ಅದು ಜನಾಂಗೀಯ ನಿರ್ಮೂಲನ ‘ ಅಂತಿರಬೇಕಿತ್ತು ಅಲ್ವಾ ?’ ಅಂತಾ ಕೇಳಿದ್ದ ‘ ಅದೂ ಸರಿ , ಆದರೆ ಒಂದು ಜನಾಂಗದ ಶುದ್ಧೀಕರಣ ಎಂದರೆ ಇನ್ನೊಂದು ಜನಾಂಗದ ನಿರ್ಮೂಲನೆಯಿಂದ ಎಂಬ ಅರ್ಥ ಕೂಡ ಇದೆ ‘
ಜರ್ಮನಿ, ಪ್ಯಾಲೆಸ್ಟೈನ್ , ರುವಾಂಡ , ಒಡೆದು ಹೋದ ಯುಗೊಸ್ಲಾವಿಯಾ , ಅಮೇರಿಕದ ಮೂಲನಿವಾಸಿ ಇಂಡಿಯನ್ನರ ಸಾಂಸ್ಕೃತಿಕ ನಾಶ , ಆಸ್ಟ್ರೇಲಿಯಾದ ಮೂಲನಿವಾಸಿಗಳ ಸಾಂಸ್ಕೃತಿಕ ಹತ್ಯೆ ಹೀಗೆ ಚರಿತ್ರೆ ಶುದ್ಧೀಕರಣದ , ನಿರ್ಮೂಲನೆಯ ದುರಂತ ಕತೆಗಳಿಂದ ತುಂಬಿ ಹೋಗಿದೆ
ಕೊನೆಗೂ ಫಲವತ್ತಾದ ಭೂಮಿಯಿರುವ ರುವಾಂಡ ಮಾತ್ರ ‘ ವೃಕ್ಷನ್ಯಾಯ ‘ ( ಗಕಾಕ್ಕ ) ವನ್ನ ಕಂಡುಕೊಳ್ಳದೇ ಬೇರೆ ದಾರಿಯಿರಲಿಲ್ಲ ; ಅಂದರೆ ಕೊಂದವನು ಪಶ್ಚಾತ್ತಾಪ ಪಟ್ಟು ಕಣ್ಣೀರಿಡುವ ಮೂಲಕ ತನ್ನ ಅಪರಾಧವನ್ನ ಒಪ್ಪಿಕೊಳ್ಳುವುದು ಮತ್ತು ಈ ಮೂಲಕ ಶುದ್ಧಗೊಳ್ಳುವುದು ವೃಕ್ಷನ್ಯಾಯದ ಕಲ್ಪನೆ
ಗಂಜಲದ ಮೂಲಕ ಶುದ್ಧೀಕರಣ ಮಾಡುವುದು , ವೃಕ್ಷನ್ಯಾಯದಂತ ಉದಾತ್ತ ಕಲ್ಪನೆಯೇನೂ ಅಲ್ಲ ;ಬದಲಾಗಿ ಅದರಲ್ಲಿ ಒಂದು ಉದಾತ್ತ ನ್ಯಾಯದ ಕಲ್ಪನೆಯನ್ನೇ ಹತ್ಯೆ ಮಾಡುವ ಒಳಸಂಚುಗಳಿವೆ
ನಿಮ್ಮ ಲೇಖನದ ಕೊನೆಯ ಮಾತುಗಳು ಅರ್ಥಪೂರ್ಣ ಹಾಗೂ ಮಾರ್ಮಿಕವಾಗಿವೆ