ಇದು ಶುದ್ಧೀಕರಣ ಕುರಿತ ಒಂದು ಜಾನಪದ ಕತೆ

 

 

 

ಎಲ್ ಸಿ ನಾಗರಾಜ್

 

 

 

 

ಇದನ್ನ ಎಲ್ಲಿ ಓದಿದೆ ಅಂತಾ ನೆನಪಾಗ್ತಿಲ್ಲ‌,  ಇದು ಶುದ್ಧೀಕರಣ ಕುರಿತ ಒಂದು ಜಾನಪದ ಕತೆ ;

ಶರಣ ಮಡಿವಾಳ ಮಾಚಿದೇವರು ಮತ್ತು ಅಲ್ಲಮಪ್ರಭು ನಡುವೆ ನಡೆದ ಒಂದು ಪ್ರಸಂಗ:

ಅಲ್ಲಮನ ಬಗ್ಗೆ ಅಪಾರ ಗೌರವ ಹೊಂದಿದ್ದ ಮಡಿವಾಳ ಮಾಚಿದೇವರು ಕಾಯಕ ನಿಷ್ಟೆಯ ಶರಣ ; ಒಂದು ದಿನ ಅಲ್ಲಮಪ್ರಭುವಿನ ಬಟ್ಟೆಗಳನ್ನ ತೊಳೆಯಲು ನದಿ ಹತ್ತಿರ ತೆಗೆದುಕೊಂಡು ಹೋಗುತ್ತಾರೆ. ಆದರೆ ಅಲ್ಲಮಪ್ರಭುವಿನ ಬಟ್ಟೆಗಳಲ್ಲಿ ಹೇನುಗಳಿರುವುದನ್ನ ಕಂಡು, ತೊಳೆದರೆ ಅವು ಸಾಯಬಹುದೆಂದು ತೊಳೆಯದೇ ತರುತ್ತಾರೆ ; ಅಲ್ಲಮ ಏನನ್ನೂ ಮಾತಾಡುವುದಿಲ್ಲ

ಶುದ್ಧೀಕರಣ ಎನ್ನುವುದು ಒಬ್ಬರ ಮನಸಿಗೆ ಸಾಂಸ್ಕೃತಿಕವಾಗಿ ನೋವು ಮಾಡುವಂತಹದು ; ಇಂತಹ ಹಿಂಸೆಯಿಂದ ಮಾಡುವ ಶುದ್ಧೀಕರಣ ಪವಿತ್ರವಲ್ಲ ; ಅದು ಜೀವಘಾತುಕ

ಈ “ಶುದ್ಧೀಕರಣ ” ಎಂಬುದಕ್ಕೆ ” ನಿರ್ಮೂಲನ ” ಎಂಬ ಅರ್ಥ ಕೂಡ ಇದೆ.

ಉಧಾಹರಣೆಗೆ ‘ ಜನಾಂಗೀಯ ನಿರ್ಮೂಲನ-  ethnic cleansing ಗೆ ಜನಾಂಗೀಯ ಶುದ್ಧೀಕರಣ ಎಂಬ ಅರ್ಥ .

ಅಂದರೆ ಒಂದು ಜನಾಂಗವನ್ನ ನಿರ್ಮೂಲನ ಮಾಡುವ ಘಾತುಕತೆಯಿಂದ ಒಂದು ಜನಾಂಗದ ಶುದ್ಧೀಕರಣ ಮಾಡಿಕೊಳ್ಳುವ ಕ್ರಿಯೆ

ಅಂದರೆ ಒಂದು ನಿರ್ಧಿಷ್ಟ ಜನಾಂಗದ ಅಸ್ತಿತ್ವ ಅಥವಾ ಇರುವಿಕೆಯೇ ಇನ್ನೊಂದು ಜನಾಂಗದ ಪರಿಶುದ್ಧತೆಗೆ ಮಾರಕ ಎಂಬ ಘಾತುಕ ಪರಿಕಲ್ಪನೆ. ಮನಶಾಸ್ತ್ರದಲ್ಲಿ ಇದು Xenophobia

ಯುದ್ಧ ಅಪರಾಧ ( war crimes ) ಗಳ ಕುರಿತ ಕೆಲವು ಸಾಕ್ಷಿಗಳನ್ನ ಅನುವಾದಿಸುವಾಗ Ethnic cleansing ಎಂಬ ಶಬ್ಧ ಬಳಕೆಯನ್ನ ‘ ಜನಾಂಗೀಯ ಶುದ್ಧೀಕರಣ ‘ ಅಂತಾ ಅನುವಾದಿಸಿದ್ದೆ

ನನ್ನ ಗೆಳೆಯ ‘ ಅದು ಜನಾಂಗೀಯ ನಿರ್ಮೂಲನ ‘ ಅಂತಿರಬೇಕಿತ್ತು ಅಲ್ವಾ ?’ ಅಂತಾ ಕೇಳಿದ್ದ ‘ ಅದೂ ಸರಿ , ಆದರೆ ಒಂದು ಜನಾಂಗದ ಶುದ್ಧೀಕರಣ ಎಂದರೆ ಇನ್ನೊಂದು ಜನಾಂಗದ ನಿರ್ಮೂಲನೆಯಿಂದ  ಎಂಬ ಅರ್ಥ ಕೂಡ ಇದೆ ‘

ಜರ್ಮನಿ,  ಪ್ಯಾಲೆಸ್ಟೈನ್ , ರುವಾಂಡ , ಒಡೆದು ಹೋದ ಯುಗೊಸ್ಲಾವಿಯಾ , ಅಮೇರಿಕದ ಮೂಲನಿವಾಸಿ ಇಂಡಿಯನ್ನರ ಸಾಂಸ್ಕೃತಿಕ ನಾಶ , ಆಸ್ಟ್ರೇಲಿಯಾದ ಮೂಲನಿವಾಸಿಗಳ ಸಾಂಸ್ಕೃತಿಕ ಹತ್ಯೆ ಹೀಗೆ ಚರಿತ್ರೆ  ಶುದ್ಧೀಕರಣದ , ನಿರ್ಮೂಲನೆಯ ದುರಂತ ಕತೆಗಳಿಂದ ತುಂಬಿ ಹೋಗಿದೆ

ಕೊನೆಗೂ ಫಲವತ್ತಾದ ಭೂಮಿಯಿರುವ ರುವಾಂಡ ಮಾತ್ರ ‘ ವೃಕ್ಷನ್ಯಾಯ ‘ ( ಗಕಾಕ್ಕ ) ವನ್ನ ಕಂಡುಕೊಳ್ಳದೇ ಬೇರೆ ದಾರಿಯಿರಲಿಲ್ಲ ; ಅಂದರೆ ಕೊಂದವನು ಪಶ್ಚಾತ್ತಾಪ ಪಟ್ಟು ಕಣ್ಣೀರಿಡುವ ಮೂಲಕ ತನ್ನ ಅಪರಾಧವನ್ನ ಒಪ್ಪಿಕೊಳ್ಳುವುದು ಮತ್ತು ಈ ಮೂಲಕ ಶುದ್ಧಗೊಳ್ಳುವುದು ವೃಕ್ಷನ್ಯಾಯದ ಕಲ್ಪನೆ

ಗಂಜಲದ ಮೂಲಕ ಶುದ್ಧೀಕರಣ ಮಾಡುವುದು , ವೃಕ್ಷನ್ಯಾಯದಂತ ಉದಾತ್ತ ಕಲ್ಪನೆಯೇನೂ ಅಲ್ಲ ;ಬದಲಾಗಿ  ಅದರಲ್ಲಿ ಒಂದು ಉದಾತ್ತ ನ್ಯಾಯದ ಕಲ್ಪನೆಯನ್ನೇ ಹತ್ಯೆ ಮಾಡುವ ಒಳಸಂಚುಗಳಿವೆ

‍ಲೇಖಕರು Avadhi GK

January 18, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Anasuya M R

    ನಿಮ್ಮ ಲೇಖನದ ಕೊನೆಯ ಮಾತುಗಳು ಅರ್ಥಪೂರ್ಣ ಹಾಗೂ ಮಾರ್ಮಿಕವಾಗಿವೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: