ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಸಂಜೆ ಎ ಡಿ ಎ ರಂಗಮಂದಿರದಲ್ಲಿ..

ನಮಸ್ಕಾರ.. ಕೋಟಿಗಾನಹಳ್ಳಿ ರಾಮಯ್ಯನವರು ‘ಆದಿಮ’ದ ಮೊದಲ ನಾಟಕವಾದ ‘ಏಕಲವ್ಯ ಉವಾಚ’ವನ್ನು ಬೆಂಗಳೂರಿನಲ್ಲಿ ಪ್ರದರ್ಶಿಸಲು ಹಾಗೂ ಆ ನಾಟಕದ ತಂಡವನ್ನು ಕೊಲಂಬಿಯಾಗೆ ಕಳಿಸಲು ಪಡುತ್ತಿರುವ ಶ್ರಮವನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು.

ಈ ನಾಟಕ ಪ್ರದರ್ಶನದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ರಾಮಯ್ಯ ಈ ಕೆಳಗಿನ ಪದ್ಯವನ್ನು ಬರೆದಿದ್ದಾರೆ

ಆಹಾ ಎಂಥಾ ಪಾಠವಯ್ಯಾ..

ಉಳಿವಿನ ಕೊನೆಯರಸಿ ಬಂದರೆ

ಅರಸಿಯರ ಅಂತಃಕರಣ ಕಾಣದೆ..

ಅರಸರ ಅರಸಹೀನತನ ಕಾಣದೆ..

ಸಿರಿತನಕ ಗರ ಬಡಿಯದಿರಲಿ ಎಂದು ಬಯಸಿದೆ

ಯಾವ ಮನೆಬಾಗಲಿಗೆ ಹೋಗದಿರುವಂತೆ

ಯಾರ ಎದೆಕದವನ್ನು ತಟ್ಟದಿರುವಂತೆ

ಎಚ್ಚರಿಸಿತು ಒಳದನಿ

ಥ್ಯಾಂಕ್ಸ್ ಬಂಧುಗಳೇ.. ಕೈಹಿಡಿದು ನಡೆಸುವ ಶಕ್ತಯಿರುವವರೇ…

ಶಕ್ತಿಹೀನನಾಗಿದ್ದರೂ ನಿಮ್ಮೊಳಗಿನ ಶಕ್ತಿ ಇರುವವನೊಬ್ಬ

ಕೈಹಿಡಿಯುವವನೆಂಬ ನಂಬಿಕೆಯೊಂದಿದೆ ನನಗೆ

ನಿಮ್ಮ ಎದೆಕದದಾಚೆಗಿನ ಒಳಗೆ…

ಇಂದು (21.07.2011) ಎಡಿಎ ರಂಗಮಂದಿರದಲ್ಲಿ ನಡೆಯುವ ನಾಟಕಕ್ಕೆ ಕುಟುಂಬದೊಂದಿಗೆ ಬನ್ನಿ.. ರಾಮಯ್ಯನವರ ಕೆಲಸದಲ್ಲಿ ಕೈ ಜೋಡಿಸೋಣ.

 

ಹುಲಿಕುಂಟೆ ಮೂರ್ತಿ

 

‍ಲೇಖಕರು G

21 July, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading