ಆಕೆಯ ಹೆಜ್ಜೆ ಗೆಜ್ಜೆ ಸದ್ದು ಕೇಳದೇ..

ನಾಗರಾಜ ಹರಪನಹಳ್ಳಿ  

-1-
ಎರಡು ಬಾಗಿಲು ಮುಚ್ಚಿದವು
ಇಷ್ಟೇ ತೆರೆದ ಕಿಟಕಿಗಳು
ಅಲ್ಲಿ ಶಬ್ದಗಳು
ಮೊಳೆಯಲಿಲ್ಲ

-2-
ಬಾಗಿಲಿಲ್ಲದ ಊರಲ್ಲಿ
ಬೀಗಗಳು ಕಳೆದು ಹೋಗಿವೆ
ಶಬ್ದಗಳ ಕಳಕೊಂಡವರು
ದಿಕ್ಕು ದಿಶೆಯಿಲ್ಲದೇ
ನಡೆಯುತ್ತಿದ್ದಾರೆ
ಎಂದೂ ಸಿಗದ ಕೊನೆಗೆ

-3-
ಕಾಲಿಲ್ಲದವರನ್ನು
ಕೈಯಿಲ್ಲದವರು ಕುಣಿಸಿದರು
ಅನಾಥ ಬೀದಿಗಳಲ್ಲಿ
ಮೆದುಳಿಲ್ಲದವರನ್ನು
ಕಣ್ಣಿಲ್ಲದವರು ಕೂಗಾಡಿಸಿದರು
ಹೃದಯ ಕಳೆದುಕೊಂಡ
ದೊರೆಯ ಮಹಲಿನ  ಮುಂದೆ


-4-
ಮುಗಿಲ
ದುಃಖ
ಭೂಮಿಯ
ಬಾಯಾರಿಕೆ
ಮುಗಿಯುವಂತಹದ್ದಲ್ಲ

-5-
ಭಾವನೆಗಳಿಂದ ಬಿಡಿಸಿದ ಬಣ್ಣದ ಚಿತ್ರಕ್ಕೆ
ಯಾರೋ ಕಲ್ಲು ಎಸೆದರು
ಆಗ ತಾನೆ ಮೂಡಿದ ಕಾಮನ ಬಿಲ್ಲ
ನೋಡಿ  ಸಹಿಸದಾದರು
ಬದುಕಿನ  ಚಿತ್ರವ ಕೆಡಿಸಿದರು
ಆದರೂ
ಭಾವದ ರೇಖೆಗಳು ಅಳಲಿಲ್ಲ
ಎಂದಾದರೊಂದು ದಿನ ಕೂಡಬಹುದು
ಚಿತ್ರಕ್ಕೆ ಅರ್ಥ ಹುಟ್ಟಬಹುದೆಂದು
ಅವರು
ಕಾದು ಕುಳಿತರು
ವಿರಹದ ನೋವು ಹೊದ್ದು

-6-
ಮನಸ್ಸು ಖಾಲಿ ಖಾಲಿಯಾಗಿದೆ
ಆಕೆಯ ಹೆಜ್ಜೆ ಗೆಜ್ಜೆ ಸದ್ದು ಕೇಳದೇ
ಹರಿವ ನದಿಗೂ ಕಳೆಯಿಲ್ಲ
ಸಮುದ್ರ ಸೇರಿಯೂ ಸಂಭ್ರಮಿಸದ ಆಕೆಯಂತೆ

-7-
ಹಿಡಿಯಷ್ಟು ಬದುಕಿನಲ್ಲಿ
ಕಡಲಿನ ಪ್ರೀತಿಯ ಅರಿಯಲಾಗಲಿಲ್ಲ
ದಿನವೂ ಸೂರ್ಯ ಬೆಳಗಿದರೂ
ಮನುಷ್ಯ ಮನದ
ಕತ್ತಲು ಅಳಿಸಲಿಲ್ಲ

‍ಲೇಖಕರು avadhi

June 22, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ದೊಡ್ಡಕಲ್ಲಹಳ್ಳಿ ನಾರಾಯಣಪ್ಪ

    ನಾಗರಾಜ ಹರಪನಹಳ್ಳಿ ಅವರ ಕವಿತೆ ಮನೋಜ್ಞವಾಗಿದೆ.ಮನುಷ್ಯನ
    ಮನದ ಕತ್ತಲೆಯನ್ನು ಅಳಿಸಲು ಯತ್ನಿಸುತ್ತಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: