ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಕೆಯ ಋತುಸ್ನಾನ..

ಉಷಾ ಕಟ್ಟೆಮನೆ ನಿನ್ನೆ ’ಕೆಡ್ಡಸ’ದ ಎರಡನೆಯ ದಿನ. ತುಳುನಾಡಿನ ವಿಶಿಷ್ಟ ಆಚರಣೆಯಿದು. ಭೂಮಿಯನ್ನು ಸ್ತ್ರೀಗೆ ಹೋಲಿಸಿದ ನಮ್ಮ ಪೂರ್ವಜರು, ಅವಳು ಕೂಡಾ ವರ್ಷಕ್ಕೊಮ್ಮೆ ರಜಸ್ವಲೆಯಾಗುತ್ತಾಳೆ ಎಂದುಕೊಂಡು ಆ ನಾಲ್ಕು ದಿನಗಳನ್ನು ಹಬ್ಬವನ್ನಾಚರಿಸುತ್ತಾರೆ. ಆಕೆಯ ಋತುಸ್ನಾನ [ಸೋಮವಾರ]ದಂದು ಮನೆಯ ಅಂಗಳವನ್ನು ಸೆಗಣಿ ನೀರಿನಿಂದ ಸಾರಿಸಿ ಮಣೆಯ ಮೇಲೆ ಕಳಶವನ್ನಿರಿಸಿ, ಬಳೆ-ಕುಂಕುಮ,ಬಾಚಣಿಗೆಯನ್ನಿಟ್ಟು, ಎದುರಲ್ಲಿ ಮಾವು, ಹಲಸು ಸರಳಿ ಎಲೆಗಳನ್ನಿಟ್ಟು ಕುರ್ದಿ ನೀರನ್ನು ಸಿಂಪಡಿಸಿ, ಗರಿಕೆಯ ಹುಲ್ಲಿನಿಂದ ಭೂಮಾತೆಗೆ ಹಾಲನ್ನೆರೆದು, ಬಳಿಕ ಎಣ್ಣೆಯನ್ನು ಬಿಡುತ್ತಾರೆ. ತುಳುನಾಡಿನಲ್ಲಿ ಹುಡುಗಿ ಋತುಮತಿಯಾದಾಗ ಮತ್ತುಕೆಡ್ಡಸದಲ್ಲಿ ’ನನ್ನೆರಿ’ ಎಂಬ ತಿಂಡಿ ಮಾಡುವುದು ಸಂಪ್ರದಾಯ. ಈ ನಾಲ್ಕು ದಿನಗಳಲ್ಲಿ ಆಕೆಗೆ ಯಾವ ರೀತಿಯಲ್ಲೂ ನೋವಾಗಬಾರದೆಂದು ಯಾವುೇ ಕೃಷಿ ಚಟುವಟಿಕೆಗಳನ್ನು ನಡೆಸುವುಇದಿಲ್ಲ. ಪುಷ್ಫವತಿಯಾದ ಭೂತಾಯಿ ಫಲವತಿಯಾಗಲು ಹೊರಟಾಗ ಮಕ್ಕಳು ಸಂಭ್ರಮ ಪಡುವ ಪರಿಯಿದು  ]]>

‍ಲೇಖಕರು G

12 February, 2012

1 Comment

  1. D.RAVI VARMA

    ಈ ಜಗತ್ತಿನಲ್ಲಿ ಎಸ್ತೆಸ್ತು ವಿಚಿತ್ರ, ವಿಭಿನ್ನ ಆಚರಣೆಗಳಿವೆ ,ನಿಜಕ್ಕೂ ಆಶ್ಚರ್ಯವಾಗುತ್ತದೆ ,ನಿಮ್ಮ ಈ ಸಂಪ್ರದಾಯದ ಬಗ್ಗೆ ನನಗೆ ತಿಳಿದಿರಲಿಲ್ಲ . ಅಥವಾ ಈವರೆಗಿನ ತುಳು ಪುಸ್ತಿಕೆಗಳಲ್ಲಿ ಕೂಡ ಇದರ ಬಗ್ಗೆ ಪ್ರಸ್ತಾಪವಿಲ್ಲ. ನಿಮ್ಮ ಹುಡುಕಾಟದ ಮನಸು,ಬದುಕಿನ ಬಗೆಗಿರುವ ಅದಮ್ಯ ಪ್ರೀತಿ ಇದೆಲ್ಲವನ್ನು ಗ್ರಹಿಸಲು, ಅನುಭವಿಸಲು ಸಾದ್ಯವಗಿದೇನೋ …………
    ರವಿ ವರ್ಮ ಹೊಸಪೇಟೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading