ಅವನೊಬ್ಬನಿದ್ದ “ಜಂತು”

ವಿದ್ಯಾಭ್ಯಾಸಕ್ಕಾಗಿ ಪರಶುರಾಮನಲ್ಲಿಗೆ ಹೋದ ಕರ್ಣ ತನ್ನ ಹುಟ್ಟಿನ ವಿಚಾರವನ್ನು ಮರೆಮಾಚಿದ್ದ. ಒಂದಿನ ಕರ್ಣನ ತೊಡೆಯ ಮೇಲೆ ತಲೆಯಿಟ್ಟು ಪರಶುರಾಮ ನಿದ್ದೆ ಹೋಗಿದ್ದಾಗ ದುಂಬಿಯ ರೂಪದಲ್ಲಿ ಬಂದ ದೇವೇಂದ್ರ, ಕರ್ಣನ ತೊಡೆಯನ್ನೇ ಕೊರೆದ. ಗುರುವಿಗೆ ನಿದ್ರಾಭಂಗವಾಗಬಾರದೆಂದು ಕರ್ಣ ಆ ನೋವನ್ನು ಸಹಿಸಿಕೊಂಡ. ಅಲ್ಲೇ ಎಡವಟ್ಟಾಯಿತು. ಎಚ್ಚರವಾದ ನಂತರ ಪರಶುರಾಮ, ಕರ್ಣನ ತೊಡೆಯಿಂದ ನೆತ್ತರು ಸೋರುತ್ತಿರುವುದನ್ನು ನೋಡಿದ. ಇಂಥ ನೋವನ್ನು ಸಹಿಸಿಕೊಂಡಿದ್ದಾನೆಂದ ಮೇಲೆ ಆತ ಕ್ಷತ್ರಿಯನೇ ಎಂಬುದು ಖಚಿತವಾಯಿತು. ಶಾಪವಿತ್ತ. ವಿದ್ಯೆ ವ್ಯರ್ಥವಾಯಿತು.

ಕರ್ಣ ಇಷ್ಟೊಂದು ಗಟ್ಟಿಗನಾದರೆ, ಸಣ್ಣದೊಂದು ನೋವನ್ನು ಕೂಡ ಸಹಿಸಲಾಗದವರೂ ರಾಜವಂಶದಲ್ಲಿದ್ದರೆಂಬುದಕ್ಕೆ ಪುರಾಣದಲ್ಲಿ ಉದಾಹರಣೆಗಳು ಸಿಗುತ್ತವೆ.

ಅಂಥ ಒಬ್ಬನೆಂದರೆ “ಜಂತು”. ಆತ ಸೋಮಕ ಎಂಬ ರಾಜನ ಪುತ್ರ. ಒಮ್ಮೆ ಆತನನ್ನು ಇರುವೆಯೊಂದು ಕಚ್ಚಿತಂತೆ. ಆ ನೋವನ್ನು ತಡೆಯಲಾರದೆ ಆತ ಅಳತೊಡಗಿದನಂತೆ. ಇರುವೆ ಕಚ್ಚಿದ್ದಕ್ಕೇ ಅಳುವವನನ್ನು ನೋಡಿ ಆತ ನಿಷ್ಪ್ರಯೋಜಕನೆಂದು ಬಗೆದ ರಾಜ, ಆತನನ್ನೇ ಯಜ್ಞಪಶುವನ್ನಾಗಿ ಅಗ್ನಿಗೆ ಆಹುತಿ ಕೊಟ್ಟನೆಂದು ಪುರಾಣದಲ್ಲಿ ಬರುತ್ತದೆ.

‍ಲೇಖಕರು avadhi

July 7, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: