ಅಭಿಜ್ಞಾ ಪಿ ಎಮ್ ಗೌಡ ಕವಿತೆ- ಸದ್ದಡಗಿ ಕುಳಿತಿದೆ ನ್ಯಾಯ…

ಅಭಿಜ್ಞಾ ಪಿ ಎಮ್ ಗೌಡ

ನಿರ್ಭೀತಿ ನಿರ್ಮುಕ್ತ
ನಿರ್ಭಯಗಳೆಲ್ಲ ಅಸದೃಶ್ಯ
ಹೆತ್ತೊಡಲ ಅಳಲು
ಅತಿವೃಷ್ಠಿ ಅನಾವೃಷ್ಠಿಗಳಂತೆ
ಭೀಭತ್ಸ ಭೋರ್ಗರೆತ
ಅನಾವರಣದಂತೆ
ಒಳಗೊಳಗೆ ಹೆಣ್ಕೂಸುಗಳ
ನರಳುತಿರುವ ಮೊರೆತ…

ನಿಸ್ತೇಜ ಸೃಷ್ಟಿಸಿದೆ
ನಿರ್ಲಜ್ಜೆಗಳ ವರ್ತನೆ
ಬೇಲಿಯೆ ಎದ್ದು ಹೊಲ ಮೇಯ್ದಂತೆ
ತಳಭಾಗವೆ ಕೊಳೆತಿರಾಗ
ಮೇಲ್ಭಾಗ ಚಿಗುರಲುಂಟೆ.?
ಅತಿರೇಕದ ವರ್ತನೆ
ಅವಮಾನಗಳಾಗುತಿದ್ದರು
ಕಪ್ಪುಹಣವೆಂಬ ಕಾಲ್ಚೆಂಡಿನ
ಕೈಚಳಕದಡಿ ಅನ್ಯಾಯಗಳು ನಿಶ್ಯಬ್ಧ
ನ್ಯಾಯಗಳು ಮೌನದಲಿ ಬಂಧ..!

ಶಿಷ್ಟರ ರಕ್ಷಕ ದುಷ್ಟರ
ಭಕ್ಷಕರಾಗಬೇಕಾದವರು
ನೀಚಕೃತ್ಯದಲಿ ತೊಡಗಿದರೆ
ಉಂಟೆ ಕಲಿಕಾರ್ಥಿಗಳಿಗೆ ರಕ್ಷಣೆ..?
ಪೋಷಕರಿಗುಂಟೆ ನೆಮ್ಮದಿ.?
ಸುಜ್ಞಾನಿಗಳೆ ನೀಚಕೃತ್ಯ
ಎಸಗುವಷ್ಟು ಅಜ್ಞಾನಿಗಳಾದಾಗ
ಸಮಾಜಕ್ಕೇನಿದೆ ಅವರಿಂದ
ಸಂದೇಶ.?
ನಿಜಕ್ಕೂ ಇದೊಂದು
ಅತ್ಯಂತ ನಿರ್ಘೃಣವೆ ಸರಿ.!

ಸಚ್ಚಾರಿತ್ರವೆಂಬ
ಮುಖವಾಡಗಳ ಅನಾವರಣ
ಸದ್ಗುಣಗಳ್ಹಿಂದೆ
ದುರ್ಗುಣಗಳ ರೌದ್ರಾವತಾರ.!
ಅಲ್ಲಲ್ಲಿ ಆರ್ಭಟಿಸುತಿದೆ
ಒಳ್ಳೆತನವೆಂಬ
ಸೋಗಿನಲ್ಲಿರುವವರ ದುಷ್ಕೃತ್ಯ
ಬುಗಿಲೇಳುತಿರುವ ಕಾಮವೆಂಬ
ಪೈಶಾಚಿಕತೆಯ ತುಲಾಭಾರದ
ತುಳಿತದಡಿ ಹೈರಾಣಾಗುತಿವೆ
ಹೆಣ್ಕೂಸುಗಳು..!

ಅದ್ಯಾವಾಗ
ನಿರ್ಗಮನವೊ ಅವರೊಳಗಿರೊ
ಈ ಕಾಮತೃಷೆಯೆಂಬ ಪಿಡುಗು
ಭ್ರಷ್ಟತೆಗಳೆ ತುಳುಕುತಿವೆ
ದೈವ ರೂಪವೆಂದು
ಬಿಂಬಿಸಿದವರ ನಿಕೃಷ್ಟ ವರ್ತನೆ
ಅಸಹ್ಯವೆನಿಸುತಿವೆ
ಕಳ್ಳ ಕಪಟರಿಂದಲೆ ನಿಷ್ಕಲ್ಮಶ
ನಿಸ್ವಾರ್ಥಿಗಳಿಗಿಲ್ಲ ಬೆಲೆ..

ಹಣ ಅಧಿಕಾರದಿಂದ
ಎಲ್ಲವೂ ಖುಲಾಸು
ಸಮಾಜವನ್ನೊಮ್ಮೆ ಅವಲೋಕಿಸಿ
ಮನುಷ್ಯತ್ವದಿಂದಿಡಿದು
ಕೊನೆಗೆ ಜೀವ ಜೀವನದವರೆಗೂ
ಎಲ್ಲವೂ ಮಾರಾಟಕ್ಕಿವೆ
ಇನ್ನೆಲ್ಲಿದೆ ಘನತೆ ಗೌರವಗಳು
ಸರ್ವವು ಹಣಮದ
ಅಧಿಕಾರದ ಮದ
ದನಿಯೆತ್ತುವವರಿಲ್ಲದೆ
ಹೆಣ್ಕೂಸುಗಳ ಕೂಗು ವ್ಯರ್ಥ.

‍ಲೇಖಕರು Admin

September 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: