ಅಮ್ಮನ ನಿಜದ ಕಥೆ ಹೇಳಿದ ನಂತರ ಈಗ ಮಣಿಕಾಂತ್ ಅಕ್ಕಶದಂತಹ ಅಪ್ಪನ್ನ ಪರಿಚಯ ಮಾಡಿಸ್ತಾ ಇದಾರೆ!
ಎ ಆರ್ ಮಣಿಕಾಂತ್ ಅವರ ಹೊಸ ಪುಸ್ತಕ ಮತ್ತು ಅವರ ಮಾತು ಇಲ್ಲಿದೆ :
ಪ್ರಿಯರೆ,
ಈ ಹಿಂದೆ ಒಮ್ಮೆ ತಿಳಿಸಿದ್ದೇನೆ.ಫೆಬ್ರವರಿ ೧೭ ರ ಭಾನುವಾರ ನನ್ನ ಹೊಸ ಪುಸ್ತಕ “ಅಪ್ಪ ಅಂದ್ರೆ ಆಕಾಶ “ಬಿಡುಗಡೆ ಆಗಲಿದೆ.ಅಂದು ಮಧುರ ಭಾವಗೀತೆಗಳ ಗಾಯನ ಕಾರ್ಯಕ್ರಮ ಇರುತ್ತದೆ.ಬೆಳಗ್ಗೆ ೧೦.೩೦ ಕ್ಕೆ ಕಾರ್ಯಕ್ರಮ ಶುರು.ನೀವು ಅವತು ದಯವಿಟ್ಟು ಬರಬೇಕು..ಬರಲೇಬೇಕು.
೯ ವರ್ಷದ ಹಿಂದೆ ನಡೆದ ಸುನಾಮಿ ದುರಂತದಲ್ಲಿ ೩ ಮಕ್ಕಳು ಮತ್ತು ೮ ಜನ ಬಂಧಗಳನ್ನು ಕಳೆದುಕೊಂಡ ನಂತರ ೩೮ ಅನಾಥ ಮಕ್ಕಳಿಗೆ ಅಪ್ಪ ಅಮ್ಮ ಆದವರು ನಾಗಪಟ್ಟಣಂ ನ ಪರಮೇಶ್ವರನ್-ಚೂಡಾಮಣಿ ದಂಪತಿ. ಇವರ ಬದುಕಿನ ಕಥೆ ಕೂಡ ಬಿಡುಗಡೆ ಆಗಲಿರುವ ಪುಸ್ತಕದಲ್ಲಿದೆ. ಅವರಿಗೆ ಪುಸ್ತಕದ ಮೊದಲ ಪ್ರತಿ ಕೊಡಬೇಕು ಎಂಬುದು ನನ್ನ ಆಸೆ-ಕನಸು…ಈ ಸಂಗತಿಯನ್ನು ಅವರಿಗೆ ತಿಂಗಳ ಹಿಂದೆಯೇ ತಿಳಿಸಿದ್ದೆ..ಮೊನ್ನೆ ಏನಾಯಿತು ಅಂದರೆ…ಕಾರ್ಯಕ್ರಮ ಇರುವುದು ಜನವರಿಯಲ್ಲಿ ಎಂದು ಕನ್ಫ್ಯೂಸ್ ಮಾಡಿಕೊಂಡು ಆ ದಂಪತಿ ಬೆಂಗಳೂರಿಗೆ ಬಂದೇ ಬಿಟ್ಟಿದ್ದರು . ಆ ದಂಪತಿಯ ಪ್ರೀತಿ,ತ್ಯಾಗ,ಕಾಳಜಿ ಕಂಡು ನನಗಂತೂ ಮಾತು ಹೊರಡಲಿಲ್ಲ. ಮುಂದಿನ ತಿಂಗಳು ದಯವಿಟ್ಟು ಬನ್ನಿ ಎಂದು ಮತ್ತೆ ಮತ್ತೆ ವಿನಂತಿಸಿ ಅವರನ್ನು ಬೀಳ್ಕೊಟ್ಟೆ .
ಇಲ್ಲಿ ಪುಸ್ತಕದ ಮುಖಪುಟದ ಸ್ಯಾಂಪಲ್ ಇದೆ. ಒಮ್ಮೆ ಗಮನಿಸಿ…
ಇಲ್ಲಿ ಪುಸ್ತಕದ ಮುಖಪುಟದ ಸ್ಯಾಂಪಲ್ ಇದೆ. ಒಮ್ಮೆ ಗಮನಿಸಿ…
ಪುಸ್ತಕ ಬಿಡುಗಡೆ ದಿನಾಂಕ ೧೭ ಫೆಬ್ರವರಿ ೨೦೧೩.ದಯವಿಟ್ಟು ನೆನಪಿಟ್ಟುಕೊಳ್ಳಿ.
ಪ್ರೀತಿಯಿಂದ..
ಮಣಿಕಾಂತ್.






ಎಲ್ಲಿ?
ravindra kalakshetradalli kaaryakrama…
dayamaadi gamanisi…
manikanth
congrats olleyadaagali…