ಎಂ ಎಸ್ ಮೂರ್ತಿ ಸದಾ ಹೊಸತನಕ್ಕೆ ತುಡಿಯುವವರು. ಅವರ ಸಾತ್ವಿಕ ಆಕ್ರೋಶವೇ ಅವರನ್ನು ಸದಾ ಕ್ರಿಯಾಶೀಲವಾಗಿರಿಸಿದೆ. ರಾಷ್ಟ್ರೀಯ ಕಲಾ ಗ್ಯಾಲರಿಯ ಉದ್ಘಾಟನಾ ಸಮಾರಂಭದಲ್ಲಿ ತಮ್ಮೊಳಗಿನ ಬೇಗುದಿಯನ್ನು ಅವರು ಹೊರಹಾಕಿದ ಬಗೆ ನಿಮಗೆಲ್ಲರಿಗೂ ಗೊತ್ತು . ಮೂರ್ತಿ ತಮ್ಮೊಳಗಿನ ಕ್ರಿಯಾಶೀಲತೆಗೆ ಒಂದು ಹೊಸ ದಾರಿ ಹುಡುಕಿಕೊಳ್ಳುತ್ತಲೇ ಇರುತ್ತಾರೆ.
ಅವರ ಇಂತಹ ಒಂದು ಕನಸು ಈಗ ನನಸಾಗುತ್ತಿದೆ. ಅದೇ ‘ದೃಶ್ಯ’ ಕಾದಂಬರಿ. ಅವರೇ ಹೇಳುವ ಪ್ರಕಾರ ಎಲ್ಲಿಂದ ಎಲ್ಲಿಗೆ ಬೇಕಾದರೂ ಓದಬಹುದಾದ ಕಾದಂಬರಿ. ವಿವರ ಇಲ್ಲಿಯೇ ಇದೆ. ಓದಿ, ಕೊಳ್ಳಿ-

ಅದೇ 'ದೃಶ್ಯ' ಕಾದಂಬರಿ..
ನಿಮಗೆ ಇವೂ ಇಷ್ಟವಾಗಬಹುದು…





Reader Digest ಮತ್ತು India Today ಕಾಯಿಲೆಗಳು ಎಂ.ಎಸ್.ಮೂರ್ತಿಯವರಿಗೂ ತಗುಲಿಕೊಂಡಂತಿದೆ.
ಮೂರ್ತಿಯವರೇ ತಮ್ಮ ಅಮೂಲ್ಯ ಸಾಹಿತ್ಯವನ್ನು ಅಷ್ಟೊಂದು ದುಡ್ಡು ತೆತ್ತು ಓದುವಷ್ಟು ಕನ್ನಡಿಗರು ಶ್ರೀಮಂತರಲ್ಲವೇನೋ. ಈ ಬಡ ಇಂಡಿಯಾದಲ್ಲೂ ಡಾಲರ್ ಲೆಕ್ಕದಲ್ಲಿ ಪುಸ್ತಕ ಮಾರಾಟ ಮಾಡಲು
ಹೊರಟಿರುವ ನಿಮ್ಮ ಮಾರ್ವಾಡಿ ಜಾಣತನವನ್ನು ಮೆಚ್ಚಲೇಬೇಕು.
ಅಂತೂ ಇಂತೂ ಕಲೆಗೂ ಕಲಾವಿದನಿಗೂ ಬೆಲೆ ಬಂತು… ನಾನು complimentary copy ಕೇಳಲು
ಹೊರಟಿಲ್ಲ, ಅಮೇರಿಕೆಯೋ ಲಂಡನ್ನಿನಲ್ಲೋ ಮಾರಬೇಕಾದ ಪುಸ್ತಕವನ್ನು ಪಾಪ ಮೂರ್ತಿಯವರು ದಾರಿತಪ್ಪಿ
ಈ ಬಡಾ ದೇಶದಲ್ಲಿ ಮಾರಲು ಬಂದಂತಿದೆ ಎಂದು ಹೇಳಲು ಬಂದೆ ಅಷ್ಟೇ.