
ಲಕ್ಷ್ಮಣ ಕೊಡಸೆ ಪ್ರಜಾವಾಣಿಯಲ್ಲಿ ಬರೆಯುತ್ತಿರುವ ಅಂಕಣ ‘ಹಾಯಿ ದೋಣಿ’. ಕನ್ನಡದಲ್ಲಿ ಅಂಕಣ ಸಾಹಿತ್ಯ ವಿಫುಲವಾಗಿದೆ. ಆದರೆ ಕೊಡಸೆ ಬರವಣಿಗೆಗೆ ಇರುವ ನೋಟ ಈ ಅಂಕಣವನ್ನು ಭಿನ್ನವಾಗಿಸಿದೆ. ಅಂಕಣಗಳು ಬೌದ್ದಿಕ ಕಸರತ್ತಿನಂತೆ ಕಾಣುತ್ತಿರುವ ಈ ದಿನಗಳಲ್ಲಿ ಕೊಡಸೆ ತಾವು ಎದುರಾದ ಪುಟ್ಟ ಘಟನೆಯನ್ನೇ ಬೇಕಾದರೆ ಎಲೆಯಾಗಿಟ್ಟುಕೊಂಡು ದೊಡ್ಡ ಜಾಗತೀಕರಣವನ್ನೂ ಮಂಡಿಸುತ್ತಾರೆ.
ಲಕ್ಷ್ಮಣ ಕೊಡಸೆ ಕ್ರೈಸ್ಟ್ ಕಾಲೇಜಿಗಾಗಿ ಸಂಪಾದಿಸಿದ ‘ಕ್ರಿಸ್ತಾಂಜಲಿ’ ಬಹುಷಃ ಕ್ರಿಸ್ತನ ಬಗ್ಗೆ ಕನ್ನಡದಲ್ಲಿ ಬಂದಿರುವ ಅತ್ಯುತ್ತಮ ಸಂಕಲನಗಳಲ್ಲಿ ಒಂದು. ಪತ್ರಿಕೋದ್ಯಮವೆಂಬ ಗಿರಣಿ ಬರಹಗಾರರನ್ನು ನುಂಗಿ ಹಾಕುತ್ತಿರುವಾಗ ಲಕ್ಷ್ಮಣ ಕೊಡಸೆ ಪಟ್ಟು ಬಿಡದಂತೆ ಕಥೆ, ಪ್ರಭಂದ ಬರೆಯುತ್ತಲೇ ಬಂದರು. ಈಗ ಆ ಎಲ್ಲವೂ ಪುಸ್ತಕಗಳಾಗಿ ಹೊರಬಂದಿದೆ.
ಇವರ ವಿಶೇಷತೆ ಅರಿಯಲು ತೇಜಸ್ವಿಯವರನ್ನು ಸಂದರ್ಶಿಸಿದ ಬರಹವೊಂದೇ ಸಾಕು.
ಹಾಯಿ ದೋಣಿಯಲ್ಲಿ ಲಕ್ಷ್ಮಣ ಕೊಡಸೆ
ನಿಮಗೆ ಇವೂ ಇಷ್ಟವಾಗಬಹುದು…





can you please post a sample of his writing in the blog?