
ಪ್ರತಿಷ್ಠಿತ ‘ಸಿದ್ದವನಹಳ್ಳಿ ಕೃಷ್ಣಶರ್ಮ ಪುಸ್ತಕ ಪ್ರಶಸ್ತಿ’ ಗೆ ಕೃತಿಗಳನ್ನು ಆಹ್ವಾನಿಸಲಾಗಿದೆ.
ಖ್ಯಾತ ಪತ್ರಕರ್ತ, ಸಾಹಿತಿ ಸಿದ್ಧವನಹಳ್ಳಿ ಕೃಷ್ಣಶರ್ಮ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಸ್ಮಾರಕ ಸಂಸ್ಥೆಯು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.
ಈ ಸಂಸ್ಥೆ ಹಲವಾರು ವರ್ಷಗಳಿಂದ ಗಾಂಧಿ ವಿಚಾರ, ರಾಷ್ಟ್ರ ಚಿಂತನೆ, ಸಾಮಾಜಿಕ ತತ್ವ ಮುಂತಾದ ವಿಷಯಗಳನ್ನಾಧರಿಸಿದ ಪುಸ್ತಕಗಳಿಗೆ ಇಪ್ಪತ್ತು ಸಾವಿರ ರೂಪಾಯಿಗಳ ನಗದು ಮತ್ತು ಫಲಕವನ್ನು ನೀಡುತ್ತಾ ಬಂದಿದೆ.
ಈ ಸಾಲಿನ ಪ್ರಶಸ್ತಿಗಾಗಿ 2014 ಮತ್ತು 2015ರಲ್ಲಿ ಪ್ರಕಟವಾದ ಪುಸ್ತಕಗಳನ್ನು ಆಹ್ವಾನಿಸಿದೆ.
ಆಸಕ್ತರು ಪುಸ್ತಕಗಳ 2 ಪ್ರತಿಗಳನ್ನು ಜೆ. ಕೆ. ಅನಂತರಾಮಯ್ಯ, 106, ರೆನೆಸಾನ್ಸ್ ಪಾರ್ಕ್, 2, ಮಲ್ಲೇಶ್ವರಂ ಪಶ್ಚಿಮ, ಬೆಂಗಳೂರು 55 (ದೂ- 961166738) ಇವರಿಗೆ ಫೆಬ್ರವರಿ 25, 2016ರೊಳಗೆ ಕಳುಹಿಸಿ ಕೊಡಬೇಕು.
ಈ ಪ್ರಶಸ್ತಿಯನ್ನು ಈ ಹಿಂದೆ ಕುಸುಮಾ ಶಾನಭಾಗ್, ಶ್ರೀಧರ ಹೆಗಡೆ ಭದ್ರನ್, ಜಿ ಎನ್ ಮೋಹನ್ ಅವರಿಗೆ ನೀಡಿ ಗೌರವಿಸಲಾಗಿತ್ತು





0 Comments