ಸಮುದಾಯ ಸಾಂಸ್ಕೃತಿಕ ಸಂಘಟನೆಯನ್ನು ಕಟ್ಟಿ ಬೆಳಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ಎಂ ಜಿ ವೆಂಕಟೇಶ್ ಇನ್ನಿಲ್ಲ.
ಇಂದೇ ಅವರ ಹುಟ್ಟುಹಬ್ಬ ಕೂಡಾ ಆಗಿತ್ತು
ಖ್ಯಾತ ನಿರ್ದೇಶಕ ಪ್ರಸನ್ನ ಅವರ ಮೂಲಕ ಸಮುದಾಯ ಪ್ರವೇಶಿಸಿದ ವೆಂಕಟೇಶ್ ನಟರಾಗಿ ಅಲ್ಲಿನ ಹಲವು ನಾಟಕಗಳಲ್ಲಿ ಪಾತ್ರವಹಿಸಿದ್ದರು. ಉಟ್ಟ,ಆ ಸಂಘಟಕರೂ ಆಗಿದ್ದ ಅವರು ಸಾಂಸ್ಕೃತಿಕ ಸಂಘಟನೆಗೂ ಕಾರ್ಮಿಕ ಸಂಘಟನೆಗೂ ನೀಡಿದ ಕೊಡುಗೆ ಮಹತ್ವದ್ದು.

ಇತ್ತೀಚಿಗೆ ತಾನೇ ಅವರು ಸುಧನ್ವ ದೇಶಪಾಂಡೆ ಅವರು ರಚಿಸಿದ ರಂಗಕರ್ಮಿ ಸ್ಫದರ್ ಹಶ್ಮಿ ಕುರಿತ ಹಲ್ಲಾ ಬೋಲ್ ಕೃತಿಯನ್ನು ಸಮರ್ಪಕವಾಗಿ ಕನ್ನಡಕ್ಕೆ ಅನುವಾದಿಸಿದ್ದರು.






0 Comments