ಕನ್ನಡ ರಾಜ್ಯೋತ್ಸವದ ಪ್ರಯುಕ್ತ ‘ಸಪ್ನ ಬುಕ್ ಹೌಸ್’ನಲ್ಲಿ ‘ಪುಸ್ತಕ ಜಾತ್ರೆ’ ಹಮ್ಮಿಕೊಳ್ಳಲಾಗಿತ್ತು.
‘ಸೆಲ್ಫಿ ಮತ್ತು ಸಹಿ- ಪುಸ್ತಕ ಮತ್ತು ಸಿಹಿ’ ಎನ್ನುವ ಘೋಷಣೆಯೊಂದಿಗೆ ಜರುಗಿದ ಕಾರ್ಯಕ್ರಮದುದ್ದಕ್ಕೂ ಸಂಭ್ರಮ ಮನೆ ಮಾಡಿತ್ತು. ಖ್ಯಾತ ಲೇಖಕರು, ಓದುಗರು, ಪ್ರಕಾಶಕರು ಸುಮಾರು ಮೂರು ಗಂಟೆಗಳ ಕಾಲ ಸಪ್ನ ಮಳಿಗೆಯುದ್ದಕ್ಕೂ ಓಡಾಡಿ ಆನಂದಿಸಿದರು.
ಸಪ್ನ ಬುಕ್ ಹೌಸ್ ನ ವ್ಯವಸ್ಥಾಪಕ ನಿರ್ದೇಶಕರಾದ ನಿತಿನ್ ಷಾ, ಕನ್ನಡ ವಿಭಾಗದ ಮುಖ್ಯಸ್ಥರಾದ ಆರ್ ದೊಡ್ಡೇಗೌಡ ಹಾಗೂ ಇಡೀ ಷಾ ಕುಟುಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು.
ʻಕನ್ನಡತಿʻ ಧಾರಾವಾಹಿ ಹಾಗೂ ʻಕತೆ ಡಬ್ಬಿʻಯ ಮೂಲಕ ಹೆಸರಾದ ರಂಜನಿ ರಾಘವನ್ ದೀಪ ಬೆಳಗಿಸಿದರು.
ನಾಡೋಜ ದಂಪತಿಗಳಾದ ಪ್ರೊ ಹಂಪನಾ, ಕಮಲಾ ಹಂಪನಾ, ದೊಡ್ಡರಂಗೇಗೌಡ, ಎಚ್ ಎಸ್ ವೆಂಕಟೇಶ ಮೂರ್ತಿ, ನರಹಳ್ಳಿ ಬಾಲಸುಬ್ರಹ್ಮಣ್ಯ, ಮಲ್ಲೇಪುರಂ ವೆಂಕಟೇಶ್, ಬಿ ಆರ್ ಲಕ್ಷ್ಮಣ ರಾವ್, ಎಂ ಎಸ್ ನರಸಿಂಹಮೂರ್ತಿ ಎಂ ಎಸ್ ಆಶಾದೇವಿ, ರಾ ನಂ ಚಂದ್ರಶೇಖರ್, ವಸುಂಧರಾ ಭೂಪತಿ, ಜೋಗಿ, ಬಿ ಬಿ ಅಶೋಕ್ ಕುಮಾರ್, ಎಸ್ ಕೆ ಉಮೇಶ್, ಎನ್ ರಾಮನಾಥ್, ಜಿ ಎನ್ ಮೋಹನ್, ಮೇಘನಾ ಸುಧೀಂದ್ರ ಪುಸ್ತಕ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದರು.
ಲೇಖಕರ ಸಮ್ಮಿಲನ ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ
0 ಪ್ರತಿಕ್ರಿಯೆಗಳು