ಕೆ.ವಿ. ತಿರುಮಲೇಶ್
ಅಮೀರ್ ಖಾನ್ ಅವರ ಎರಡನೇ ಕಂತು ಸಹಾ ನಮ್ಮ ಸಮಾಜಕ್ಕೆ ಅತ್ಯಗತ್ಯದ ವಿಷಯವನ್ನು ಒಳಗೊಂಡಿದೆ. ಈ ಸರಣಿಯನ್ನು ಯೋಜಿಸಿದ್ದು ಅಮೀರ್ ಖಾನ್ ಆದರೂ ಅವರು ಹಲವು ಚಿಂತಕರ ಸಹಾಯ ಪಡೆದುಕೊಂಡಿದ್ದಾರೆ ಎನ್ನುವುದು ಇದರ ಋಜುತ್ವವನ್ನು ಮತ್ತು ಮಾನ್ಯತೆಯನ್ನು ಹೆಚ್ಚಿಸಿದೆ. ಅಮೀರ್ ಮಕ್ಕಳಿಗಾಗಿ ನಡೆಸಿಕೊಟ್ಟ ಚಿಕ್ಕ ವರ್ಕ್ ಶಾಪ್ ಅಂತೂ ಎಲ್ಲರೂ ಶ್ಲಾಘಿಸುವಂಥದು. ಇಲ್ಲಿ ನನ್ನ ಒಂದೆರಡು ಸೂಚನೆಗಳೆಂದರೆ: ೧. ದೇಹದ ಅಪಾಯದ ಜಾಗಗಳಲ್ಲಿ ಬಾಯಿ ಕೂಡಾ ಒಂದು; ಆದ್ದರಿಂದ ಮೂರರ ಜತೆ ಇದನ್ನೂ ಸೇರಿಸಿದರೆ (ಸೇರಿಸಲೇ ಬೇಕು) ನಾಲ್ಕು ಆಗುತ್ವೆ. ೨. ಶಾಲೆಗಳಲ್ಲೂ ಈ ತರದ ವರ್ಕ್ ಶಾಪುಗಳನ್ನ ನಡೆಸಲು ಏರ್ಪಾಡು ಮಾಡಬೇಕು. (ದುರ್ದೈವವೇ! ಕೆಲವು ಶಾಲಾ ಅಧ್ಯಾಪಕರೇ ಪೆಡೋಫೈಲ್ಸ್!) ೩. ಪಠ್ಯ ಪುಸ್ತಕಗಳಲ್ಲಿ ಈ ತರದ ವಿಷಯಗಳನ್ನು ಸೇರಿಸಿ ಪಾಠದಲ್ಲಿ ಅಳವಡಿಸುವುದು ಅಗತ್ಯ. (ಇದೇ ತರದ ವರ್ಕ್ ಶಾಪುಗಳನ್ನು ಎಳೆ ಹರೆಯದ ಸ್ತ್ರೀಯರಿಗೋಸ್ಕರವೂ ನಡೆಸುವುದು ಸಾಧ್ಯ: ಅತ್ಯಾಚಾರಿಯೊಬ್ಬನನ್ನು ಎದುರಿಸುವುದು ಹೇಗೆ? ) ಇದನ್ನು ನೇರ ಅಮೀರ್ ಖಾನಿಗೇ ತಿಳಿಸೋಣವೆಂದು ವೆಬ್ ಸೈಟಿಗೆ ಹೋದರೆ ಅದು ಅದ್ಭುತ ಸಂಖ್ಯೆಯ ಪ್ರತಿಸ್ಪಂದನಗಳಿಂದಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ತಿಳಿದುಬರುತ್ತದೆ. ಆದರೆ ಜನಾಭಿಪ್ರಾಯ ರೂಪಿಸುವುದೂ ಒಳ್ಳೆಯ ಕೆಲಸ ಎಂದುಕೊಂಡು ಈ ಪತ್ರ ಅವಧಿಗೆ ಬರೆಯುತ್ತಿದ್ದೇನೆ.
]]>






super program and super review