ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶೇಣಿ ಭಟ್ಟರು ಹೇಳಿದ್ದು..

ನಾಗರಾಜ ಮತ್ತಿಗಾರು

  ಶೇಣಿ ಭಟ್ಟರು ಹೇಳಿದ್ದು….ಒಂದು ತರ್ಕ…ಯಕ್ಷಗಾನ ಯಾವುದು ಎಂಬುದು ನೆನಪಿಲ್ಲ…ಅವರ ಪಾತ್ರದ ಹೆಸರು ಮಾದೇವ ಭಟ್ಟ ಅಂತಿರಬೇಕು…. `ನನಗೆ ಎಲ್ಲರೂ ಅಂತಾರೆ ಮುದುಕನ ಮಗ ಎಂದು….ತಪ್ಪೇನು…ನನ್ನ ಅಪ್ಪ ಅರ್ಧ ಆಯಸ್ಸು ಕಳೆದ ಮೇಲೆ ಲಗ್ನವಾಗಿ ಹುಟ್ಟಿದವ ನಾನು… ಬಲಿತ ಮರದಿಂದ ಬಿದ್ದು ಹುಟ್ಟುವ ಸಸಿ ಸದೃಢವಾದ ಮರವಾಗುತ್ತದೆ….ಉತ್ತಮವಾಗಿ ಬೆಳೆಯುತ್ತದ. ಎಳೆ ಮರದ ಜೀಜ ಇನ್ನೇಷ್ಟು ಪ್ರಬಲವಾಗಿದ್ದಿತ್ತು…ಅದಕ್ಕೆ ಅಲ್ಲವೇ ಹಿರಿಯರು…ಯಾವುದೇ ಬೆಳೆ ಬೆಳೆಯುವಾಗ ವಯಸ್ಸಾದ ಮರ ಬೀಜವನ್ನೇ ಆಯ್ಕೆ ಮಾಡಿ ಸಸಿ ಮಾಡುತ್ತಿದ್ದರು. ಈಗಿನ ಕೆಲವು ಮಂದಿ ಬುದ್ಧಿ ಬಲಿಯುವ ಮುನ್ನವೇ ಮದುವೆಯಾಗಿ ಬಿಡುತ್ತಾರೆ…ಇನ್ನು ಅವರಿಗೆ ಹುಟ್ಟುವ ಮಕ್ಕಳು ಹೇಗಿದ್ದಾರು? ನೀವೆ ಯೋಚಿಸಿ…ಈ ಕಾರಣದಿಂದಾಗಿ ನನಗೆ ಮುದುಕನ ಮಗ ಎಂದರೂ ಬೇಜಾರಿಲ್ಲ…ನನ್ನ ಹುಟ್ಟು ಸರಿಯಾಗಿದೆಯಲ್ಲ..  ]]>

‍ಲೇಖಕರು G

22 June, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading