ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಾಂತ ಬರೆದ ನ್ಯಾನೋ ಕಥೆಗಳು

ಕಿರುಗತೆಗಳು

ಶಾಂತ


ಆಕಸ್ಮಿಕವೋ?

ಅವಳಿಗೂ ಇವಳಿಗೂ ಮದ್ಯೆ ತುಂಬಾ ಪ್ರೀತಿ ಇದೆ. ಆದರೆ ಅವರಿಬ್ಬರೂ ಸದಾ ಜಗಳ ಆಡುತ್ತಾ  ಇರುತ್ತಾರೆ. ಇವಳು ಬೈದಾಗ ಅವಳು ಬಾಲ್ಕನಿಯ ತುದಿಗೆ ಹೋಗಿ ನಿಲ್ಲುತ್ತಾಳೆ , ಇಲ್ಲ, ಸೀಲಿಂಗ್ ಫ್ಯಾನ್ ನನ್ನು ದಿಟ್ಟಿಸುತ್ತಿರುತ್ತಾಳೆ . ಮೊನ್ನೆ ಅವಳು ಬಸ್ ಚಕ್ರಕ್ಕೆ ಸಿಕ್ಕಿ ಸತ್ತು ಹೋದಳು. ಅದು ಆಕಸ್ಮಿಕವಲ್ಲ ಅಂತ ನನ್ನ ಅನಿಸಿಕೆ.

*

ಕಾಯುವಿಕೆಗಿಂತ …

ಅವನು ರಮೇಶನಿಗೆ ಒಂದು ಸಾವಿರ ರೂಪಾಯಿ ಸಾಲ ಕೊಟ್ಟಿದ್ದ . ದಿನವೂ ನೋಡಿದರೂ ವಾಪಾಸ್ ಕೊಡುವ ಮಾತೇ ಬರುತ್ತಿರಲಿಲ್ಲ . ರಮೇಶ ಸಾವಿರ ರೂಪಾಯಿ ವಾಪಸ್ ಕೊಟ್ಟಿದ್ದರೆ ಅವನು ‘ಇಟ್ಟುಕೊಂಡಿರು , ಮತ್ತೆ  ಯಾವಾಗಲಾದರೂ ಇಸ್ಕೊತಿನಿ’ ಅಂತ ಹೇಳಬೇಕು ಅಂತ ಇದ್ದ. ಇದ್ದಾನೆ .

*

ಬಿಗಿಯುಸಿರು

ರೆಸ್ಟೋರೆಂಟಿಗೆ  ಹೋದಾಗ ಮುಂದೆ ಇದ್ದ ಗಂಡ -ಹೆಂಡತಿ ಇವಳು ಯಾಕೆ ಒಂಟಿಯಾಗಿ ಬಂದು ಊಟ ಮಾಡ್ತಾ ಇದ್ದಾಳೆ ಅಂತ ಕೇಳಲೂ ಇಲ್ಲ ಮಾತಾಡಿಕೊಳ್ಳಲೂ ಇಲ್ಲ . ಅವಳೇ ಬೇಗ ಬೇಗ ಊಟ ಮುಗಿಸಿ ಹೊರಗೆ ಬಂದು ಉಸಿರಾಡಿದಳು.

*

ಸಾತ್ವಿಕ ಅಹಂಗೊಂದು ಪೆಟ್ಟು

ಕೆಳಗಿನ ಮನೆಯವರಿಗೆ ಇವರನ್ನು ನೋಡಿ ಹೊಟ್ಟೆ ಉರಿ. ಹತ್ತು-ಹಲವು ಬಗೆಯ ಕಿರುಕುಳ ಕೊಟ್ಟಿದ್ದರು.  ಉರಿ ಕಡಿಮೆ ಮಾಡಲು ಇವರು ಅವರಿಗೆ ಊಟ-ಐಸ್ ಕ್ರೀಮ್ ಕೊಡಿಸಿದರು. ಅವರ ಮಗನಿಗೆ ಬಹುಮಾನ ಸಹ ಕೊಟ್ಟರು. ಮಾರನೆ ದಿನ ಇವರ ಕಾರ್ ಟೈಯರ್ ಪಂಚರ್ ಆಗಿತ್ತು .

*


ನಿಟ್ಟುಸಿರಿನಲ್ಲೆನಿದೆ?

ಅವಳು ಅಪರೂಪಕ್ಕೊಮ್ಮೆ ತನ್ನ ಪ್ರೀತಿಯನ್ನು ಅವನ ಮೈದಡವಿ, ನೇವರಿಸಿ ವ್ಯಕ್ತಪಡಿಸಿದರೆ ಅವನು ಉದ್ರೇಕಗೊಳ್ಳುತ್ತಾನೆ . ಅವನ ಏದುಸಿರು ಅವಳ ನಿಟ್ಟುಸಿರು ಒಮ್ಮೆಗೇ ಹೊರಹೊಮ್ಮತ್ತವೆ.

*

ಆಕ್ಸಿಡೆಂಟ್

ಮೂರು  ಜನ ಹುಡುಗರು ಒಂದೇ ಬೈಕನ್ನೇರಿ ಸ್ಪೀಡಾಗಿ ಬಂದು ಗೋಡೆಗೆ ಹೊಡೆದು ಸತ್ತದನ್ನು ನೋಡಿ ಆ ಇನ್ಸಪೆಕ್ಟರ್  ರಾತ್ರಿ ಮನೆಗೆ ಬಂದಾಗ ಅವರ ಅಪಾರ್ಟ್ ಮೆಂಟ್ ನ ಮೂರು ಹುಡುಗರು  ಒಂದೇ ಬೈಕ್ ಹತ್ತಿ ಕೂತಿದ್ರು.

*

ಭಯ-ಭಕ್ತಿ-ಮುಕ್ತಿ
ತೀರ್ಥಯಾತ್ರೆಗೆ ಹೋದ ದೋಣಿಯು ಮುಳುಗಿದಾಗ ಅದರಲ್ಲಿದ್ದ ಭಕ್ತರಿಗೆ ಶಿವನ ಪಾದ ಸೇರುವ ಇಚ್ಛೆ ಇರಲಿಲ್ಲ .

 

‍ಲೇಖಕರು avadhi

15 February, 2014

1 Comment

  1. nagraj.harapanahalli

    ನಿಜಕ್ಕೂ ಇಷ್ಟವಾದವು. 10-15 ನಿಮಿಷ ಸಮಯ ತೆಗೆದುಕೊಂಡು ಕೊನೆಗೆ ಹೊರಡುವ ಅರ್ಥವ್ಯಾಪಕತೆ, ಪರಿಣಾಮವನ್ನು ನಾಲ್ಕು ಸಾಲಿನ ನ್ಯಾನೋ ಕತೆಗಳು ನೀಡುತ್ತಿವೆ. ಪ್ರಯೋಗ ಇಷ್ಟವಾಯಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading