ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಂಕೇಶ್ ಮತ್ತು ಅಶ್ವಥ್ ಬಗ್ಗೆ ಟಿ ಎನ್ ಸೀತಾರಾಂ ಬರೀತಾರೆ

ಟಿ ಎನ್ ಸೀತಾರಾಂ

ಜಾಣ್ಮೆಯನ್ನು ಒಳಗೊಂಡಿದ್ದ ತತ್ವದ ಪದಗಳು, ವಿಷಾದ ಮತ್ತು ಅಧ್ಯಾತ್ಮದ ಕಾವ್ಯವಾಗಿದ್ದು ಅವರ ಮೋಹದ ಹೆಂಡತಿ ತೀರಿದ ಬಳಿಕ….

ತಾತ್ವಿಕ ಭಿನ್ನಾಭಿಪ್ರಾಯವನ್ನು ಕೆಲವು ಬಾರಿ ನನ್ನ ಗುರುಗಳಾದ ಲಂಕೇಶರೂ ಮತ್ತು ನನ್ನ ಅತ್ಯಂತ ಪ್ರೀತಿಯ ಮಿತ್ರನಾದ ಸಿ . ಅಶ್ವಥ್ ಪರಸ್ಪರ ವೈಯಕ್ತಿಕ ದ್ವೇಷದ ಮಟ್ಟಕ್ಕೆ
ಇಳಿಸಿಕೊಂಡಿದ್ದ ದಿನಗಳು ಇದ್ದವು…ಲಂಕೇಶರು ಸಮಾಜವಾದಿ ಮತ್ತು ಅಶ್ವಥ್ ಸ್ವಲ್ಪ R S S… ಅವರ ಮಧ್ಯದ ಈ ದ್ವೇಷ ಅವರಿಬ್ಬರ ತಿಕ್ಕಲುತನಗಳಿಂದಾಗಿ ನೋವಿನ ಜತೆಗೆ ತಮಾಷೆಯ ಘಟನೆಗಳಾಗಿ ನಮಗೆಲ್ಲಾ ಕಂಡಿದ್ದೂ ಇತ್ತು.

ಆದರೆ ಅಶ್ವಥ್ ಶಿಶುನಾಳ ಶರೀಫ್ ಅವರ ತತ್ವಪದಗಳಿಗೆ ಸಂಗೀತ ಸಂಯೋಜಿಸಿ , ಅನುಭಾವದ ಹುಚ್ಚಿನಿಂದ ಹಾಡಿ ಕ್ಯಾಸೆಟ್ ಮಾಡಿದಾಗ ಅದು ತೀವ್ರವಾಗಿ ತಟ್ಟಿದ್ದು ಲಂಕೇಶರಿಗೆ… ಆಗ ಲಂಕೇಶ್ ಪತ್ರಿಕೆ ಎಲ್ಲರ ಬುದ್ಧಿ ಮತ್ತು ಮನಸುಗಳನ್ನು ರೂಪಿಸುತ್ತಿದ್ದ ಅತ್ಯಂತ ಜನಪ್ರಿಯ ವಾರಪತ್ರಿಕೆ… ಲಂಕೇಶರಿಗೆ ಅಶ್ವಥ್ ರ ಕ್ಯಾಸೆಟ್ ಎಷ್ಟು ಇಷ್ಟವಾಯಿತೆಂದರೆ ತಮ್ಮ ದ್ವೇಷವನ್ನು ಮೀರಿ ಅಶ್ವಥ್ ರ ಚಿತ್ರವನ್ನು ತಮ್ಮ ಪತ್ರಿಕೆಯ coverpage ಮಾಡಿ ಶರೀಫ್ ರ ಜ್ಞಾನವನ್ನು ಗಾನದ ಮೋಡಿ ಯಾಗಿ ಎಲ್ಲರಿಗೆ ತಂದುಕೊಟ್ಟ ಗಾನಯೋಗಿ ಎಂದು ಅಶ್ವಥ್ ಬಗ್ಗೆ ಹೇಳಿದ್ದರು… ಮೋಹದ ಹೆಂಡತಿ ತೀರಿದ ಬಳಿಕ ಒಮ್ಮೆ ಅನೇಕ ಸಾರಿ ಪದೇ ಪದೇ ಕೇಳಿ ಭಾವುಕರಾಗುತ್ತಿದ್ದುದು ನನಗೆ ನೆನಪಿದೆ.
ಅಶ್ವಥ್ ಗೆ ಅತಿ ಹೆಚ್ಚು ಜನಪ್ರಿಯತೆ ಬಂದಿದ್ದು ಆ ದಿನಗಳ ನಂತರ…
ಇಷ್ಟಾದ ಮೇಲೂ ಅವರಿಬ್ಬರ ಮಧ್ಯದ ಭಾಂಧವ್ಯ ಸುಮಧುರವಾಗಲಿಲ್ಲ.. !!
ಈಗಲೂ ನನ್ನ ಅತಿ ಇಷ್ಟದ CD ಗಳಲ್ಲಿ ಅದೂ ಕೂಡ ಒಂದು…
ಜುಲೈ ೩ ಶರೀಫ್ ಅವರು ತೀರಿಕೊಂಡ ದಿನವೆಂದು ನೆನಪು… ಇಸ್ವಿ ನೆನಪಿಲ್ಲ… ಹಾಗಾಗಿ ಇದೆಲ್ಲಾ ನೆನಪು ಬಂತು… ಆ ಮೂರು ಜನವೂ ಈಗ ಇಲ್ಲ….
ನೆನಪುಗಳು ಕೊಂಚ ಭಾವುಕತೆಯನ್ನೂ ಹೊತ್ತು ತರುತ್ತದೆ
 

‍ಲೇಖಕರು G

5 July, 2014

2 Comments

  1. bm basheer

    ಶರೀಫ ರಂಥಹ ಮಹಾತ್ಮರ ಹಾಡುಗಳನ್ನು ಬಳಸಿಕೊಂಡು ಹೆಸರು, ಹಣ ಎಲ್ಲವನ್ನು ಮಾಡಿಕೊಂಡರು. ಆದರೆ ಬದುಕಿನಲ್ಲಿ ಮಾತ್ರ ಅಶ್ವಥ್, ಲಕ್ಷ್ಮಿನಾರಾಯಣ ಭಟ್ಟರಿಗೆ ಸಂತ ಶರೀಫ ರ ಮೌಲ್ಯಗಳು ಬೇಡವಾಗಿತ್ತು. ಬದಲಿಗೆ ಅರೆಸ್ಸೆಸ್ ನ ದ್ವೇಷ ರಾಜಕಾರಣ, ಜಾತೀಯತೆಯನ್ನು ಇಬ್ಬರು ಒಳಗೊಳಗೇ ಮೆಚ್ಚಿಕೊಳ್ಳುತ್ತಿದ್ದರು. ಇದು ಲಂಕೇಶ್ ಸಿಟ್ಟಿಗೆ ಕಾರಣವಾಗಿತ್ತು. ಅಶ್ವಥ್, ಭಟ್ಟರ ಈ ಆಷಾಢ ಭೂತಿತನದ ಬಗ್ಗೆ ಪತ್ರಿಕೆಯಲ್ಲಿ ಬರೆದೂ ಇದ್ದರು

  2. M A Sriranga

    Very nice article.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading