facebook ನಲ್ಲಿ
ಈ ರಂಗಶಂಕರದ ಮಹಾನುಭಾವರಿಗೆ ಇಂತಹ ದೇಸಿ ಪರಿಕಲ್ಪನೆ ಹೊಳೆದದ್ದಕ್ಕೆ ಮೊದಲೊಂದು ಥ್ಯಾಂಕ್ಸ್ ಹೇಳಬೇಕು….
ಇಡೀ ದಿನವನ್ನು ಬಹ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು…’ಆಲಿಬಾಬ’ ಮಕ್ಕಳ ನಾಟಕ, ಲಾವಣಿ, ಒಳ್ಳೆಯ ಉತ್ತರ ಕರ್ನಾಟಕದ ಊಟ, “ಕರಿಮಾಯಿ” ನಾಟಕ, ಕಾವ್ಯ ವಾಚನ, ‘ಚಾಳೇಶ’ ನಾಟಕ ಹಾಗು ಕಂಬಾರರೊಂದಿಗೆ ಸಂವಾದ..ಇದು ದಿನಚರಿ..
ನಾನು ತುಂಬಾ inspireಆಗಿದ್ದು..”ಕರಿಮಾಯಿ”ನಾಟಕ…ಬಿ.ಜಯಶ್ರೀ ರವರ ಅಧ್ಬುತ ನಿರ್ದೇಶನ..ಅಬ್ಬ ಒಂಥರಾ ultimate excitement ….ಎಷ್ಟೊಂದು ಮುಖ್ಯ ವಿಚಾರಗಳನ್ನ ಬಿಂಬಿಸುವ ಕಂಬಾರರ ಮಹಾಕೃತಿ…..ಹಳೆಯದರ ಮಧ್ಯೆ ಹೊಸ ಸಂಸ್ಕೃತಿಯ,ಆರ್ಥಿಕ,ಸಾಮಾಜಿಕ ಜೀವನದ ಶುರುವಾತಿನ ಕುರುಹುಗಳು ಉಳ್ಳ scriptನ ಮಜಾ ಬಹಳ….
ಒಂದು ಅವಿಭಕ್ತ ಹಳ್ಳಿಯಲ್ಲಿ,ಬೆಳಗಾವಿ ಇಂದ ಹರಿದು ಬರುವ ಹೊಸ ಹೊಸ ಕನಸುಗಳು,ಗ್ರಾಮ್ಯದ ಅಮಾಯಕತೆ….ಗುಡಸೀಕರ ಎಂಬುವ ಗ್ರಾಮಕ್ಕೆ ತರುವ “ಬ್ರಾಂದಿ”…ಸಿಗರೇಟು…ಗ್ರಾಮಕ್ಕೆ ಹೊಸದಾಗಿ ಕಾಣುವ ಪೋಲಿಸ್ ವ್ಯವಸ್ತೆ….ಕೋರ್ಟು…ಮುಂತಾದ ವಸಾಹತುಶಾಹಿ ಸಂಸ್ಥೆಗಳು….
ಇನ್ನೊಂದು ಕಡೆ ಗಾಂಧಿವಾದ ,ಅದರ ಪ್ರತಿಬಿಂಬ ಎಂಬಂತಹ ಊರಿನ ಗೌಡ,ಬ್ರಿಟಿಶ್ ಸರಕಾರ,ಚಳುವಳಿಗಳು…ಈ ಎರಡೂ ವ್ಯವಸ್ಥೆಯ ಮುಖ್ಯ ವಾಹಿನಿ “ಕರಿಮಾಯಿ” ಕಾದಂಬರಿ…ಹಳೆಯ ಹಾಗು ಹೊಸ ವ್ಯವಸ್ಥೆಯ ಪ್ರೀತಿ ಹಾಗು ಭಯಾನಕತೆಯನ್ನ….ಸತ್ಯವನ್ನ…ಐತಿಹಾಸಿಕವಾಗಿ ರೂಪಿಸಿಕೊಟ್ಟಿದ್ದಾರೆ ಕಂಬಾರರು…..ಅಂತಹ ಕನಸಿನ ಕಲ್ಪನೆಯನ್ನು ಕಟ್ಟಿಕೊಟ್ಟ ಆ ಮಹಾನುಭಾವನಿಗೆ ಧನ್ಯವಾದಗಳು….ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಿದ ನಾಟಕದ ತಂಡವೂ ರಮಣೀಯ….
ಒಳ್ಳೆ ಕಾವ್ಯವಾಚನ ನಮ್ಮದೇ Facebook ಗೋಡೆ ಇಂದ ಹಾದು ಹೋಗಿ ಕಾವ್ಯ ವಾಚನ ಮಾಡಿದ್ದ ಹಿರಿಯ ಅಣ್ಣ Beesu Suresha.. Mohan Gn, B.k. Sumathi ರಿಗೆ ಪ್ರೀತಿಯ ಧನ್ಯವಾದಗಳು….ಹಾಗೆಯೇ ಅರುಂದತಿ ನಾಗ್,ರಮೇಶ್ ಅರವಿಂದ್, ಗಾಯಕಿ ಪಲ್ಲವಿ, ನಿರ್ದೇಶಕ ಸೇತುರಾಮ್ ಇನ್ನೂ ಮುಂತಾದವರು ಆಯ್ದುಕೊಂಡ ಒಳ್ಳೆಯ ಕವಿತೆಗಳು…ಹಾಗು ನಿರೂಪಣೆಯ ಮೂಲಕ ಜೀವ ಬೆರೆಸಿದ ಅಪರ್ಣ…..
ಯಾರ್ ಯಾರನ್ನ ನೆನಯದೆ ಇರಲಿ ಹೇಳಿ….???
ಸರಿ ಹೊತ್ತಿಗೆ ನೆನಪಿಸಿ ಇವೆಲ್ಲವನ್ನೂ ಸಾಧ್ಯವಾಗಿಸಿದ Bharathi Bv and Poornima Girish…..ಒಂದು ಲೋಟ ಕಾಫೀ ಇನ್ನೊಂದು ನಾಟಕ ತೋರಿಸಿದರೆ ಮಾತ್ರ ಕೊಡ್ಸ್ತೀನಿ…..
“ಸಾವಿರದ ಶರಣವ್ವ ಕರಿಮಾಯಿ ತಾಯಿ…”
–
ಭಾನುವಾರ ರ೦ಗಶ೦ಕರದಲ್ಲಿ ಯುಗಾದಿ ಸ೦ಭ್ರಮಿಸಿದ್ದು ಹೀಗೆ
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :







kal sakre thara innoo chapparisthaa idini …
yeh tande…tande…..
Odi ‘rangashankara’ visit maadidashte khushi aitu ninna lekhana adbhuta bro