ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಂಗಾಯಣದಲ್ಲಿ ಚಿಂತನ ಚಿತ್ತಾರ..

ಈಗಲೂ ಸ್ವರ್ಗದಲ್ಲಿರುವ ಚಿಂತಕ ಡಿ. ಆರ್ . ನಾಗರಾಜ್ ಅವರು ಇಲ್ಲೇ ಇದ್ದಾಗ ಅನುವಾದಿಸಿದ

ಪುಸ್ತಕವೊಂದರ ಹೆಸರು: ವಸಂತ ಸ್ಮೃತಿ.

ಇದು ನಿಮಗೂ ತಿಳಿದಿರುವ ಹಾಗೆ ರೂಮಿ ಕವಿತೆಗಳ ಅನುವಾದ ಸಂಕಲನ. ಇದರಲ್ಲಿ ‘ದಾರಿ ತಪ್ಪಿದ

ಗಿಡುಗ’ ಎಂಬ ಹೆಸರಿನ ಕವಿತೆ ಇದೆ.

ಈ ಇಂಥಹ ಕವಿತೆಯನ್ನೇ ಬಾಳಿದ ಕಥೆಯಂತೆ ಚಿತ್ರಕಾರ ವ್ಯಾನ್ ಗೋನ ಜೀವನ ಭಾಸವಾಗುತ್ತದೆ; ಒಡಲು

ಮತ್ತು ಒಡಹುಟ್ಟಿನ ಮೂಲವನ್ನು

ಹಿಡಿದು ಅಲ್ಲಾಡಿಸುತ್ತದೆ. ಅಂದಹಾಗೆ; ಈ ಪುಸ್ತಕದ ಮರುಮುದ್ರಣ ಕನ್ನಡದಲ್ಲಿ ಕೆಲವು ತಿಂಗಳ

ಹಿಂದಷ್ಟೇ ಆಗಿದೆ (ನವಕರ್ನಾಟಕ ಪ್ರಕಾಶನ).

ಹೊಸ ತಲೆಮಾರಿನ ಹುಡುಗರು ಅದರಲ್ಲೂ ಮೈಸೂರಿನ ರಂಗಾಯಣದ ಗಾಳಿಯಲ್ಲಿ ಸುಳಿದಾಡುವವರಲ್ಲಿ ಈ

ಪುಸ್ತಕ: ನೋವಿಗದ್ದಿದ ಕುಂಚ ಹೊಸ

ಸಂಚಲನವನ್ನು ಉಂಟು ಮಾಡಿದೆ. ಈ ಕೃತಿಯ ಚರ್ಚೆ – ಸಂವಾದವು ೨೯.೦೯.೨೦೧೨ ರಂದು ರಂಗಾಯಣದ

ಶ್ರೀರಂಗದಲ್ಲಿ ಸಂಜೆ ೫ ಗಂಟೆಗೆ ಜರುಗಲಿದೆ.

ದಯವಿಟ್ಟು ನೀವು ನಿಮ್ಮ ಸ್ನೇಹಿತರು ಕೂಡಿ ಬನ್ನಿ. ಇದೇ ಸಂಧರ್ಭದಲ್ಲಿ ಈ ಸಲದ ಕಾರ್ಯಕ್ರಮದ

ಆಹ್ವಾನ ಪತ್ರಿಕೆಯನ್ನು ರೂಪಿಸಿರುವ ಮೈಸೂರಿನ ಚಿತ್ರಕಾರ ಕೆ.ಜೆ. ಸಚ್ಚಿದಾನಂದ ಅವರಿಗೆ

‘ಚಿಂತನ ಚಿತ್ತಾರ’ದ ವಂದನೆಗಳು.

‍ಲೇಖಕರು G

28 September, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading