ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮ೦ಡ್ಯ ರಮೇಶ್ ನೆನಪಿನ ’ಏಣಗಿ ನಟರಾಜ್’

ಮನಸಿನ ಪುಟಗಳ ನಡುವೆ ನೆನಪಿನ ನವಿಲುಗರಿ…!

– ಮ೦ಡ್ಯ ರಮೇಶ್
ಅವನು ನಿಜಕ್ಕೂ ‘ಪುಂಟಿಲ’ನೇ! ಸಂತೋಷ, ಹೆಮ್ಮೆ, ಪ್ರೀತಿ, ಆತ್ಮೀಯತೆ, ದ್ವೇಷ, ಹತಾಷೆ, ಸಣ್ಣತನ, ದುರಹಂಕಾರ… ಮನುಷ್ಯ ಬದುಕಿನ ಭಾವನೆಗಳೆಲ್ಲವನ್ನೂ
ಅತ್ಯಂತ ತೀವ್ರವಾಗಿ ಅನುಭವಿಸುತ್ತಿದ್ದ ನಟರಾಜ ಏಣಗಿ ‘ರಂಗ’ದಷ್ಡೇ ಜೀವನವನ್ನೂ ಅತೀನಾಟಕೀಯಗೊಳಿಸಿಬಿಟ್ಟಿದ್ದ!
ಅಂತಃಕರಣಿ ಅಪ್ಪ ಬಾಳಪ್ಪಜ್ಜ, ಮಮತೆಯ ಮೂರ್ತಿ ಅವರವ್ವ, ಅಭಿಮಾನದ ಅಣ್ಣಂದಿರು… ಅಸಂಖ್ಯ ಆರಾಧಿಸುವ ವರ್ಗ ಎಲ್ಲರೂ ಇದ್ದು
‘ಇರದುದರೆಡೆಗೆ ತುಡಿಯುವ’ ಒಂಟಿತನದ ವಿಕ್ಷಿಪ್ತತೆಯ ನಿಜದ ನೆಲೆ ಕೊನೆಯವರೆಗೂ ನನಗರ್ಥವಾಗಲೇ ಇಲ್ಲ!
ಕೈಲಾಸಂ, ಕಾಳಿಂಗರಾಯರು, ಕಾರಂತರು, ರಾಜು ಅನಂತಸ್ವಾಮಿ… ಅದ್ವಿತೀಯರೆನಿಸಿದವರೆಲ್ಲರ ಅಂತಃಮುಖಿತನದ
ಅನೂಹ್ಯ ಅವಸಾನದ ಅರ್ಥದ ಅರಿವಾಗಿರುವುದು ನೋವಿನ ಅಚ್ಚರಿಯೂ ಹೌದು.!
ಅವನ ಹತ್ತಿರವೂ ಇಲ್ಲದ ಅಪರೂಪದ ಚಿತ್ರವೊಂದನ್ನು ಅಂಟಿಸಿದ್ದೇನೆ..!
]]>

‍ಲೇಖಕರು G

22 June, 2012

3 Comments

  1. D.RAVI VARMA

    ನಿಜ ರಮೇಶ್, ಈ ರಂಗಜೀವಿ ಇರಬೇಕಾಗಿತ್ತು ,ನನಗಿನ್ನೂ ಆತನ ತದ್ರೂಪಿ ನಟನೆಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.”ಏನಾದ್ರೂ ಮಾಡಿ ನಟರಾಜ ನಿಗೊಂದು ನಮಸ್ಕಾರ ” ಕಾರ್ಯಕ್ರಮ ಹಮ್ಮಿಕೊಳ್ಳಿ ನಾನು ನಿಮ್ಮ ಜೊತೆ ಇರುವೆ .
    ರವಿ ವರ್ಮ ಹೊಸಪೇಟೆ ೯೯೦೨೫೯೬೬೧೪

  2. prabha

    nijavagiyu tumba aparupada photo…..6 salugalalli nataraj ravara
    badukanna teredittiddiri.. evathu avaru nammondige eilla,adare
    avara nenapina navilugari sada nammondhige eruthe….

  3. prasad raxidi

    ಹೌದು ರಮೇಶ್ , ಕನ್ನಡ ರಂಗಭೂಮಿಯ ಇಬ್ಬರು ರಾಜರನ್ನು ಮರೆಯುಂತೆಯೇ ಇಲ್ಲ ಇಬ್ಬರೂ ನಮ್ಮೂರಿನಲ್ಲೂ ಅಭಿನಯಿಸಿದವರೆ, ನಮ್ಮೂರಿನ ಜನ ಇಬ್ಬರ ಅಬಿನಯ- ಹಾಗೂ ಬದುಕು (ಇವರಿಬ್ಬರ ಬದುಕೂ ಒಂದು ರಂಗಕೃತಿಗೆ ಆಧಾರವಾಗುವಂತಿದೆ) ಮರೆಯಲಾರರು, ಒಬ್ಬ ಧ್ರುವರಾಜ, ಇನ್ನೊಬ್ಬ ನಟರಾಜ ಇಬ್ಬರೂ ಉತ್ತರ ಕರ್ನಾಟಕದ ಪ್ರತಿಭೆಗಳೇ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading