ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೂಲಭೂತವಾದಿಗಳಿಗೂ ಸಂಬಂಧಿಸಿದೆ…

ಭಯೋತ್ಪಾದಕರ ಉದ್ದೇಶವನ್ನು ಮಾಧ್ಯಮದವರು ಈಡೇರಿಸಿದ್ರಾ ?
ಎಂಬ ಪ್ರಶ್ನೆ ಕೇಳುತ್ತಿದ್ದಾರೆ ಲೀಲಾ ಸಂಪಿಗೆ. ಮುಬೈನಲ್ಲಿ ಉಗ್ರರ ಅಟ್ಟಹಾಸವನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ನೋಡಿದ ಲೀಲಾ ಅವರು ಈ ಪ್ರಶ್ನೆ ಎತ್ತಿದ್ದಾರೆ. ಮಾಧ್ಯಮಗಳು ಏನು ಮಾಡಬೇಕು? ಮಾಡಬಾರದು? ಎಲ್ಲಿಯವರೆಗೆ ಅದು ಆಕ್ರಮಿಸಿಕೊಳ್ಳಬೇಕು ಎಂಬ ಪ್ರಶ್ನೆ ಹಲವು ವಿಚಾರ, ಚರ್ಚೆಗೆ ಎಡೆ ಮಾಡಿ ಕೊಡುವಂತಿದೆ.
ಇದರೊಂದಿಗೆ ನಾವು ಮಾಧ್ಯಮ ಹಾಗೂ ಅದರ ಜವಾಬ್ದಾರಿಯನ್ನು ಚರ್ಚಿಸೋಣ.
ಗುರು ಅವರು ನೀಡಿದ ಮೊದಲ ಪ್ರತಿಕ್ರಿಯೆ ಇಲ್ಲಿದೆ
ದಯವಿಟ್ಟು ಪ್ರತಿಯೊಬ್ಬರೂ ಈ ಚರ್ಚೆಯಲ್ಲಿ ಭಾಗವಹಿಸಿ
120408035836cst_before
parasurama kalal
parasuram_kalal@yahoo.in | 
ಲೀಲಾ ಸಂಪಿಗೆ ಅವರು ಎತ್ತಿರುವ ಪ್ರಶ್ನೆ ಬಹಳ ಮುಖ್ಯ. ಇದು ಭಯೋತ್ಪಾದನೆಗೆ ಮಾತ್ರ ಸಂಬಂಧಿಸಿದ್ದಲ್ಲ. ಮೂಲಭೂತವಾದಿಗಳಿಗೂ ಸಂಬಂಧಿಸಿದ್ದಾಗಿದೆ ಎನ್ನುವುದು ನನ್ನ ಸೇರ್ಪಡೆ.
ಮೂಲಭೂತವಾದಿ ಸಂಘಟನೆಯ ಯಾವುದೇ ತಲೆತಿರುಕ ಏನಾದರೂ ಮಾತನಾಡಿದರೂ ಅದು ಆಲ್ ಎಡಿಸನ್ ಸುದ್ದಿಯಾಗುತ್ತದೆ. ಸೆನ್ಸೆಷನಲ್ ಎಂಬ ಹೆಸರಲ್ಲಿ ಆ ಸುದ್ದಿಗೆ ಪ್ರಾಮುಖ್ಯತೆ ಸಿಗುತ್ತದೆ.
ಸುದ್ದಿ ಮಾಧ್ಯಮದದಲ್ಲಿ ಬಹಳ ವರ್ಷಗಳ ಕಾಲ ಕೆಲಸ ಮಾಡಿದ ನನ್ನ ಅನುಭವವೆಂದರೆ ಕೆಲವೇ ಕೆಲವು ಬೆರಳೆಣಿಕೆಯ ಜನರು ನಡೆಸುವ ಇಂತಹ ಪ್ರತಿಭಟನೆಗಳಿಗೆ ಮಾಧ್ಯಮಗಳೇ ದೊಡ್ಡ ಪ್ರಚಾರ ನೀಡುತ್ತವೆ. ಮಾಧ್ಯಮದವರು ಬರುವವರಿಗೆ ಅವರು ಪ್ರತಿಭಟನೆಯನ್ನೇ ನಡೆಸುವುದಿಲ್ಲ.. ಮಾಧ್ಯಮದವರು ಬಂದ ಮೇಲೆಯೇ ಅವರು ಪ್ರತಿಭಟನೆ ನಡೆಸಿ ಬಂಧಿತರಾಗುತ್ತಾರೆ. ಹಂಪಿಯಲ್ಲಿ ಕೋಮುವಾದಿಗಳು ಇಂತಹ ಕೆಲಸ ನಡೆಸಿಯೇ ರಾಜ್ಯಾದ್ಯಾಂತ ಸುದ್ದಿಗೆ ಪಾತ್ರರಾಗಿದ್ದಾರೆ. ಹಿರೋಗಳಾಗಿ ಮೆರೆದಿದ್ದಾರೆ. ಮಾಧ್ಯಮದವರು ಯಾರು ಅಲ್ಲಿಗೆ ತೆರಳದೇ ಅದನ್ನು ಉಪೇಕ್ಷೆ ಮಾಡಿದರು ಅಂತಾ ಇಟ್ಟುಕೊಳ್ಳಿ. ಆಗ ಅವರ ಧ್ವನಿಯೇ ಉಡುಗಿ ಹೋಗುತ್ತದೆ. ಈ ಬಗೆಯಲ್ಲೂ ಚರ್ಚೆ ನಡೆಯಬೇಕು ಎನ್ನುತ್ತೇನೆ ನಾನು.
– ಪರುಶುರಾಮ ಕಲಾಲ್
+++
ನೀಲಾಂಜಲ
http://neelanjala.wordpress.com | neelanjala@gmail.com
ಏನು ಸರೀನೋ ತಪ್ಪೋ ಗೊತ್ತಿಲ್ಲ, ಆದ್ರೆ ಕಳೆದ ಮೂರು ನಾಲ್ಕು ದಿನದಿಂದ ನಾನು ಸರಿಯಾಗಿ ಪೇಪರ್ ಓದುತ್ತಾ ಇಲ್ಲ. ಸಂಬಂಧಪಟ್ಟ ಸುದ್ದಿ ನೋಡುತ್ತಿಲ್ಲ. ಟೆರರಿಸ್ಟ್ ಒಂದು ಜೀಪ್ ನಲ್ಲಿ ತಪ್ಪಿಸಿ ಕೊಂಡಿದ್ದಾರಂತೆ, ತಾಜ್ ನಲ್ಲಿ ಇದ್ದವರು hostage ಡ್ರೆಸ್ ಹಾಕ್ಕೊಂಡು ಹೊರಗೆ ಬಂದಿದ್ದಾರಂತೆ, ನಿನ್ನೆ ಅಷ್ಟೇ live RDX ಬಾಂಬ್ CSTnalli ಸಿಕ್ಕಿತಂತೆ……ಸುದ್ದಿ ಕೇಳಿ ಮನೆ ಹೊರಗೆ ಕಾಲಿಡಲೋ ಬೇಡ ಅನ್ನಿಸ್ತಿದೆ. ನಿಜವಾಗಲೂ terror ಅಂದ್ರೆ ಏನು ಅಂತ ಸ್ವಲ್ಪ ಅನುಭವ ಆಗಿದೆ. ಕಣ್ಣಿಂದ ನೋಡಿದವರು, ಅದನ್ನು ಅನುಭವಿಸಿದವರು ಈ ಟೆರರ್ ಅನ್ನು ಲೈಫ್ ಟೈಮ್ ನಲ್ಲಿ ಮರೆಯೋಲ್ಲ. ಹಾಗಂತ ಹೆದರಿಕೊಂಡು ಮನೇಲೆ ಇರೋಕೆ ಆಗುತ್ತಾ. ಲಕ್ ಚೆನ್ನಾಗಿರೋ ತನಕ ಬದುಕೋದು ಮತ್ತು ಲೈಫ್ ಎದುರಿಸೋದು.
ನೀಲಾಂಜಲ
+++

gnanadev
http://gnanadev.wordpress.com | devbolde@yahoo.co.in | 
ಮಾಧ್ಯಮದವರು ಈ ಹೇಯ ಘಟನೆಯ ವೇಳೆಗೆ ರಾಜಕಾರಣಿಗಳನ್ನು ಹೇಗೆ ಬಹಿಷ್ಕರಿಸಬೇಕು ಎ೦ದು ಹೇಳಿದ್ದರೋ ಹಾಗೆಯೇ ಮಾಧ್ಯಮದವರಿಗೂ ಬಹಿಷ್ಕಾರ ಅಗತ್ಯ. ಸ್ವಲ್ಪ ಅ೦ಕೆ, ಹಿಡಿತ ಅವಶ್ಯ. ಈ ಘಟನೆಯನ್ನು ಯಾವುದೋ ಒ೦ದು ಫಿಲ್ಮ್ ಚಿತ್ರೀಕರಣದ೦ತೆ ಮಾಡಿದ್ದನ್ನು ನಾವೆಲ್ಲರೂ ಖ೦ಡಿಸಬೇಕು. ಒ೦ದು ಮಿತಿಯಲ್ಲಿ ಇರಬೇಕು. ಎಲ್ಲರೂ ವಿವೇಕದಿ೦ದ ವರ್ತಿಸುವ ಅಗತ್ಯವಿದೆ
ಚಿತ್ರ ಕೃಪೆ: ಇಂಡಿಯಾ ಟುಡೆ

‍ಲೇಖಕರು avadhi

4 December, 2008

1 Comment

  1. dundiraj

    intha sandharbhagalalli madhyamadavarannu dooravidabeku.tv yalli kelavru mubai ghataneyannu crime story thara enjoy madthidru.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading