ಮುದ್ದಣ ಕಾವ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ
ಕಾಂತಾವರ ಕನ್ನಡ ಸಂಘವು 2014ನೆ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿಗೆ ಮುದ್ರಣಕ್ಕೆ ಸಿದ್ಧವಾಗಿರುವ ಕವನಗಳ ಸಂಗ್ರಹದ ಹಸ್ತಪ್ರತಿಯನ್ನು ಆಹ್ವಾನಿಸಿದೆ.
ಮೂವತ್ತೈದು ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಪ್ರಶಸ್ತಿಯು 10 ಸಾವಿರ ರುಪಾಯಿ ನಗದು ಮತ್ತು ಪ್ರಶಸ್ತಿಪತ್ರವನ್ನು ಒಳಗೊಂಡಿದೆ.
ಆಸಕ್ತರು ರೂ 5ರ ಅಂಚೆ ಚೀಟಿ ಹಚ್ಚಿದ ಸ್ವವಿಳಾಸವಿರುವ ಲಕೋಟೆಯನ್ನು ‘ಅಧ್ಯಕ್ಷರು, ಕಾಂತಾವರ ಕನ್ನಡ ಸಂಘ, ಅಂಚೆ: ಕಾಂತಾವರ- 574129, ಉಡುಪಿ ಜಿಲ್ಲೆ’ ಈ ವಿಳಾಸಕ್ಕೆ ಕಳುಹಿಸಿ ಜುಲೈ 30ರೊಳಗೆ ವಿವರಗಳನ್ನು ಪಡೆಯಬಹುದು.
ಹಸ್ತಪ್ರತಿ ಸ್ವೀಕಾರದ ಕೊನೆಯ ದಿನ ಆಗಸ್ಟ್ 30, 2014.
ಮೊ. 9008978366.






0 Comments