ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮುತ್ತುಪ್ಪಾಡಿ’ ಸೃಷ್ಟಿಯಾದದ್ದು ಹೀಗೆ…

ಮೂರು ದಶಕದ ಕತೆ

 

ಮೂವತ್ತು ವರ್ಷಗಳು ಕಳೆದು ಹೋದವು.`ಬದ್ದತೆಯೆಂಬುದು ಸೃಜನಶೀಲತೆಗೆ ಮೊದಲ ಶತ್ರು, ಎಂಬ ಫಲಕ ತೂಗುತ್ತಿತ್ತು. ಪಕ್ಕದಲ್ಲಿ, `ಬರಹದಿಂದ ಬದುಕು ಬದಲು ಮಾಡಲಾಗದು’ ಎಂಬ ವಾದವನ್ನು ಸುಳ್ಳು ಮಾಡುತ್ತಿದ್ದ, ಹಲವು ನಿಲುವುಗಳಿಗೆ ಬದ್ದವಾದ, ಧರ್ಮಗ್ರಂಥಗಳು ಕಣ್ಣೆದುರಿಗಿದ್ದವು. ಆದ್ದರಿಂದ, ಕೆಲವು ಸೂತ್ರಗಳಿಗೆ ಬದ್ದನಾಗಿಯೇ ನಾನು ಬರವಣಿಗೆ ಆರಂಭಿಸಿದ್ದೆ; ಯಾಕೆಂದರೆ ನನ್ನೆದುರು ಎರಡು ಗುರಿಗಳಿದ್ದವು.

 

ಕನ್ನಡದ ಓದುಗರಿಗೆ ಅಷ್ಟೇನೂ ಪರಿಚಿತವಲ್ಲದ ಜನಸಮೂಹವೊಂದನ್ನು (ಅವರನ್ನು ದ್ವೀಪವೆಂದೂ ಕರೆಯಲಾಗುತ್ತಿತ್ತು) `ಹೌದಾ, ಅವರು ಹಾಗಿಲ್ಲವಾ? ಎಂಬಂತೆ ಉಳಿದವರಿಗೆ ಪರಿಚಯಿಸುವುದು ಮೊದಲ ಗುರಿ. ಅಂತೆಯೇ, ಕನ್ನಡದ ಓದಿಗೆ ಬಹುಪಾಲು ಕರುಡಾಗಿದ್ದ ಅದೇ ಜನಸಮೂಹವನ್ನು ಓದುವಂತೆ ಪ್ರೇರೇಪಿಸಿ `ಹೌದಾ? ನಾವು ಹೀಗಿದ್ದೇವಾ?, ಎಂದು ಪ್ರಶ್ನಿಸಿಕೊಳ್ಳುವಂತೆ ಒತ್ತಾಯಿಸುವುದು ಎರಡನೆಯ ಗುರಿ. ಒಟ್ಟಿನಲ್ಲಿ ಎರಡು ದೋಣಿಗಳಲ್ಲಿ ಕಾಲಿರಿಸಿ ಹುಟ್ಟು ಹಾಕುವ ಹುಚ್ಚು ಹಂಬಲ. ಕಾಲು ಶತಮಾನದ ಸುದೀರ್ಘ ಯೋಜನೆ ಅದು. ಅದಕ್ಕಾಗಿ ಅಷ್ಟು ಕಾಲ ನಾನು ಬದುಕುಳಿಯಲೇ ಬೇಕಾಗಿತ್ತು: ಬೇರೆಯವರ ಉಸಾಬರಿ ಬೇಡವೆಂದು ನನ್ನದೇ ಆದ `ಮುತ್ತುಪ್ಪಾಡಿ’ಎಂಬ ಗ್ರಾಮವನ್ನು ಕಲ್ಪಿಸಿದೆ.

೩೦ ವರ್ಷಗಳ ಹಿಂದೆ ಬೊಳುವಾರು ಮಹಮದ್ ಕುಂಇ ದೇವರುಗಳ ರಾಜ್ಯದಲ್ಲಿ ಕಥಾ ಸಂಕಲನ ಹೊರತಂದರು. ಅಷ್ಟೆ ಅಲ್ಲ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಸಂವೇದನೆಯ ಗಾಳಿ ಬೀಸಲು ಕಾರಣರಾದರು. ಈಗ ಡಾ ಎಂ ಭೈರೇಗೌಡ ತಮ್ಮ ಪ್ರಗತಿ ಗ್ರಾಫಿಕ್ಸ್ ಮೂಲಕ ಈ ಪುಸ್ತಕ ಮತ್ತೆ ಬೆಳಕು ಕಾಣಲು ಕಾರಣರಾಗಿದ್ದಾರೆ.

ಈ ಸಂದರ್ಭದಲ್ಲಿ ಬೊಳುವಾರು ಮೆಲುಕು ಹಾಕಿದ ನೆನಪುಗಳ ಸಂಪೂರ್ಣ ಓದಿಗೆ ಭೇಟಿ ಕೊಡಿ- ಓದುಬಜಾರ್

‍ಲೇಖಕರು avadhi

28 October, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading