ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಲೆಗಳಲ್ಲಿ ಮದುಮಗಳು: ಕಾದಂಬರಿ-ರಂಗಪ್ರಯೋಗ ವಿಮರ್ಶಾ ಸ್ಪರ್ಧೆ

ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್-ಕೃಷ್ಣಾಪುರದೊಡ್ಡಿ

ನಂ. 119, 3ನೇ ತಿರುವು, 8ನೇ ಮುಖ್ಯರಸ್ರೆ, ಹಂಪಿನಗರ, ಬೆಂಗಳೂರು 560 104

ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಮೈಸೂರಿನ ರಂಗಾಯಣವು ರಂಗರೂಪಕ್ಕಿಳಿಸಿ 23.4.2010ರಿಂದ 11.5.2010ರವರೆಗೆ ಪ್ರಯೋಗಿಸಲಿದೆ. ಈ ಹಿನ್ನೆಲೆಯಲ್ಲಿ ನಾಟಕದ ವಿಮರ್ಶೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.  ಹೆಚ್ಚಿನ ವಿವರಗಳಿಗೆ ಡಾ. ಎಂ. ಬೈರೇಗೌಡ (ಕಾರ್ಯದರ್ಶಿ, ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್) ದೂರವಾಣಿ ಸಂ: 9448102158 ಸಂಪರ್ಕಿಸಬಹುದು.

ಸ್ಪರ್ಧೆಯ ವಿವರ ಹಾಗೂ ಸೂಚನೆಗಳು

1.    ಕಾದಂಬರಿಯ ಓದು ಮತ್ತು ನಾಟಕ ವೀಕ್ಷಣೆ ಕಡ್ಡಾಯ. ಬರಹ ಫುಲ್ ಸ್ಕೇಪ್ ಹಾಳೆಯ ಐದು ಪುಟಗಳಿಗೆ ಕಡಿಮೆಯಿರದಂತೆ ಒಂದೇ ಮಗ್ಗುಲಲ್ಲಿರಬೇಕು (ಕೈ ಬರಹ ಅಥವ ಮುದ್ರಿತ.)

2.    ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಆಯ್ದ ವಿಮರ್ಶಾ ಬರಹಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗುವುದು.

ಒಟ್ಟು ಆರು ನಗದು ಬಹುಮಾನಗಳಿರುತ್ತವೆ. ಬಹುಮಾನವು ಪ್ರಶಸ್ತಿ ಪತ್ರದೊಂದಿಗೆ, ಸಾಮಾನ್ಯ ವರ್ಗಕ್ಕೆ ರೂ. 5000/-ಗಳ ನಗದು, ವಿದ್ಯಾರ್ಥಿ ವಿಭಾಗದಲ್ಲಿ  ತಲಾ ರೂ. 4000/- ಎರಡು ಬಹುಮಾನಗಳು.

ಹಾಗೂ ಇದಲ್ಲದೆ ಎರಡೂ ವಿಭಾಗದಲ್ಲಿ ತಲಾ ರೂ. 2000/-ದಂತೆ ಇನ್ನೂ ಮೂರು ಬಹುಮಾನಗಳಿವೆ.

3.    ಸಾಮಾನ್ಯ ವರ್ಗದ ಸ್ಪರ್ಧಿಗಳ ವಯೋಮಿತಿ 30 ವರ್ಷಗಳ ಒಳಗಿರಬೇಕು. (ಎಸ್.ಎಸ್.ಎಲ್.ಸಿ.ಅಂಕಪಟ್ಟಿ ಲಗತ್ತಿಸಬೇಕು.) ವಿದ್ಯಾರ್ಥಿಗಳು ಕಾಲೇಜು/ವಿಶ್ವವಿದ್ಯಾಲಯದ ಪ್ರಾಂಶುಪಾಲರು ಮತ್ತು ವಿಭಾಗ ಮುಖ್ಯಸ್ಥರಿಂದ ಪ್ರಮಾಣೀಕರಿಸಿದ ಪತ್ರವನ್ನು ತಮ್ಮ ಬರಹದೊಂದಿಗೆ ಲಗತ್ತಿಸಿರಬೇಕು.)

ಬರಹಗಳನ್ನು ಕಳಿಸಲು ಕಡೆಯ ದಿನಾಂಕ:   15ನೇ ಮೇ 2010

ಬರಹಗಳನ್ನು ಕಳಿಸಬೇಕಾದ ವಿಳಾಸ : ಕಾರ್ಯದರ್ಶಿ, ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ನಂ. 119, 3ನೇ ತಿರುವು, 8ನೇ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-560 104, ಫೋ: 9448102158.

5.    ತೀರ್ಪುಗಾರರ ನಿರ್ಣಯವೇ ಅಂತಿಮ.

‍ಲೇಖಕರು avadhi

16 April, 2010

2 Comments

  1. Gajanana naik

    INTAHA PRAYOGA AGAAGA AGUTTIRALI…

  2. manjushree kadakola

    nijakku idu vibhinna prayoga agalide. basu avarige all the best. proyoga ella jillegalallu pradarshanavagli.
    -manjushree m kadakola, davangere.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading