।। ಅರಸಿ ಕಾಣದ ತನುವ ಬೆರಸಿ ಕೂಡದ ಸುಖವ ಎನಗೆ ನೀ ಕರುಣಿಸಾ, ಚೆನ್ನಮಲ್ಲಿಕಾರ್ಜುನ ।।
ಸ್ಪಂದನ ತಂಡದಿಂದ ಹೊಸ ವರ್ಷಕ್ಕೆ ಹೊಸ ನಾಟಕ ‘ನೀವು ಕಾಣಿರೇ…’ಇದೇ 6 ಮತ್ತು 7 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 6.30ಕ್ಕೆ, ಪ್ರವೇಶ ದರ 100/-. ನೀವು ಬನ್ನಿ ನಿಮ್ಮವರನ್ನು ಕರೆತನ್ನಿ!!
ಕನ್ನಡ ರಂಗಭೂಮಿಯಲ್ಲಿ ಕಳೆದ 40 ವರ್ಷಗಳಿಂದ 1,000ಕ್ಕೂ ಹೆಚ್ಚು ನಾಟಕ ಪ್ರದರ್ಶನ ಹಾಗು ಮರು ಪ್ರದರ್ಶನಗಳನ್ನು ನೀಡುವ ಮೂಲಕ ಹಲವಾರು ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಟ್ಟ ತಂಡ ‘ಸ್ಪಂದನ’. ಕೆ.ವೈ.ನಾರಾಯಣಸ್ವಾಮಿ ಅವರ ಹೊಸ ನಾಟಕ ‘ನೀವು ಕಾಣಿರೇ…’ ಬಿ.ಜಯಶ್ರೀ ಅವರ ನಿರ್ದೇಶನದಲ್ಲಿ ಮೂಡಿಬರಲಿದೆ. ಈ ನಮ್ಮ ಹೊಸ ಪ್ರಯೋಗಕ್ಕೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರೋತ್ಸಾಹಿಸಬೇಕೆಂದು ವಿನಂತಿ.
ಧನ್ಯವಾದಗಳು,
ಬಿ.ಜಯಶ್ರೀ
ಸ್ಪಂದನ







0 Comments