‘ಬಹುರೂಪಿ’ಯ ಪ್ರಕಟಣೆಗಳಾದ ರವಿಕುಮಾರ್ ಟೆಲೆಕ್ಸ್ ಅವರ ‘ನಂಜಿಲ್ಲದ ಪದಗಳು’ ಹಾಗೂ ಉಮಾ ಮುಕುಂದ್ ಅವರ ‘ಕಡೇ ನಾಲ್ಕು ಸಾಲು’ ಕೃತಿಗಳು ಹಾಸನದ ಮಾಣಿಕ್ಯ ಪ್ರಕಾಶನದ ‘ಕಾವ್ಯ ಮಾಣಿಕ್ಯ ರಾಜ್ಯ ಪ್ರಶಸ್ತಿ’ಗೆ ಆಯ್ಕೆಯಾಗಿವೆ.
ಹಾಸನದ ಮಾಣಿಕ್ಯ ಪ್ರಕಾಶನ ಪ್ರತೀ ವರ್ಷ ಆಯಾ ವರ್ಷದ ಅತ್ಯುತ್ತಮ ಮೂರು ಕೃತಿಗಳಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ.
೨೦೧೮ನೆಯ ಸಾಲಿಗೆ ಅಡಗುದಾಣ’ – ಡಾ.ಎಂ.ಡಿ.ಒಕ್ಕುಂದ (ಧಾರವಾಡ) ಪ್ರಥಮ, ‘ನಂಜಿಲ್ಲದ ಪದಗಳು’- ಎನ್.ರವಿಕುಮಾರ್ ಟೆಲೆಕ್ಸ್ (ಶಿವಮೊಗ್ಗ), ದ್ವಿತೀಯ ‘ಕಡೇ ನಾಲ್ಕು ಸಾಲು’- ಉಮಾ ಮುಕುಂದ (ಬೆಂಗಳೂರು) ತೃತೀಯ ಬಹುಮಾನಕ್ಕೆ ಆಯ್ಕೆಯಾಗಿದೆ.
೨೦೧೯ ಆಗಸ್ಟ ೦೪ ರಂದು ಹಾಸನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ತಿಳಿಸಿದ್ದಾರೆ.

'ಬಹುರೂಪಿ'ಯ ಎರಡು ಕೃತಿಗಳಿಗೆ ಬಹುಮಾನ
ನಿಮಗೆ ಇವೂ ಇಷ್ಟವಾಗಬಹುದು…





0 Comments