Dr. Geetha R Shenoy
on 21 December, 2011 at 4:57 PM
ಮಹಾಶ್ವೇತಾದೇವಿಯವರ ಸಮಗ್ರ ಕಥಾ ಸಾಹಿತ್ಯ ಕನ್ನಡದಲ್ಲಿ ಬರುತ್ತಿರುವುದು ಸಂತಸದ ಸಂಗತಿ. ಇವರು ಜ್ಞಾನಪೀಠ ಪುರಸ್ಕೃತ ಸಾಹಿತಿಯಾಗಿ ಮಾತ್ರ ಪ್ರಾಮುಖ್ಯತೆಯನ್ನು ಪಡೆಯಬೇಕಾದವರಲ್ಲ. ಬುಡಕಟ್ಟು ಜನಾಂಗದವರೊಂದಿಗೆ ಕಲೆತು ಅವರ ಹೋರಾಟಗಳಲ್ಲಿ ಭಾಗವಹಿಸಿ ವ್ಯವಸ್ಥೆಯ ಕೈಯಲ್ಲಿ ಅವರು ಅನುಭವಿಸುತ್ತಿದ್ದ ದಾರಣ ಶೋಷಣೆಯನ್ನು ಪ್ರತಿಭಟಿಸಿ ಭೌದ್ಧಿಕ ವಲಯದಲ್ಲಿ ಈ ಸಮುದಾಯದವರ ಕುರಿತು ಎಚ್ಚರವನ್ನು, ಅರಿವನ್ನು ಮೂಡಿಸಿದ ಸಮಾಜ ಕಾರ್ಯಕರ್ತೆ ಮಹಾಶ್ವೇತಾದೇವಿ. ಚಾರಿತ್ರಿಕ ಘಟನೆಯನ್ನು ಆಧರಿಸಿ ನಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಿ ಹೋರಾಟದ ಧ್ವನಿಯಾಗಿ ಗುರುತಿಸಿಕೊಳ್ಳುವ ಅಲ್ಪಸಂಖ್ಯಾತರನ್ನು ನಾಯಕ, ನಾಯಕಿಯರನ್ನಾಗಿಸಿ ಇವರು ರಚಿಸಿರುವ ಕಥೆಗಳು ಭಾರತೀಯ ಸಾಹಿತ್ಯದಲ್ಲಿಯೇ ಅನನ್ಯ ರಚನೆಗಳಾಗಿವೆ. ಈಗಾಗಲೇ ಮಹಾಶ್ವೇತಾದೇವಿಯವರ ದೌಪ್ದಿ, ಸ್ತನದಾಯಿನಿ, ಉಪ್ಪು, ಇತ್ಯಾದಿ ಸಶಕ್ತ ಕತೆಗಳನ್ನು ಸಮರ್ಥ ರೀತಿಯಲ್ಲಿ ಕನ್ನಡಕ್ಕೆ ತಂದಿರುವ ಎಚ್.ಎಸ್. ಶ್ರೀಮತಿ ಅವರು ಬೆಳಕಿಗೆ ತರುತ್ತಿರುವ ಸಮಗ್ರ ಕಥಾಸಂಕಲನಕ್ಕೆ ಶುಭ ಹಾರೈಕೆಗಳು. – ಗೀತಾ ಶೆಣೈ, ಬೆಂಗಳೂರು
ಮಹಾಶ್ವೇತಾದೇವಿಯವರ ಸಮಗ್ರ ಕಥಾ ಸಾಹಿತ್ಯ ಕನ್ನಡದಲ್ಲಿ ಬರುತ್ತಿರುವುದು ಸಂತಸದ ಸಂಗತಿ. ಇವರು ಜ್ಞಾನಪೀಠ ಪುರಸ್ಕೃತ ಸಾಹಿತಿಯಾಗಿ ಮಾತ್ರ ಪ್ರಾಮುಖ್ಯತೆಯನ್ನು ಪಡೆಯಬೇಕಾದವರಲ್ಲ. ಬುಡಕಟ್ಟು ಜನಾಂಗದವರೊಂದಿಗೆ ಕಲೆತು ಅವರ ಹೋರಾಟಗಳಲ್ಲಿ ಭಾಗವಹಿಸಿ ವ್ಯವಸ್ಥೆಯ ಕೈಯಲ್ಲಿ ಅವರು ಅನುಭವಿಸುತ್ತಿದ್ದ ದಾರಣ ಶೋಷಣೆಯನ್ನು ಪ್ರತಿಭಟಿಸಿ ಭೌದ್ಧಿಕ ವಲಯದಲ್ಲಿ ಈ ಸಮುದಾಯದವರ ಕುರಿತು ಎಚ್ಚರವನ್ನು, ಅರಿವನ್ನು ಮೂಡಿಸಿದ ಸಮಾಜ ಕಾರ್ಯಕರ್ತೆ ಮಹಾಶ್ವೇತಾದೇವಿ. ಚಾರಿತ್ರಿಕ ಘಟನೆಯನ್ನು ಆಧರಿಸಿ ನಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಿ ಹೋರಾಟದ ಧ್ವನಿಯಾಗಿ ಗುರುತಿಸಿಕೊಳ್ಳುವ ಅಲ್ಪಸಂಖ್ಯಾತರನ್ನು ನಾಯಕ, ನಾಯಕಿಯರನ್ನಾಗಿಸಿ ಇವರು ರಚಿಸಿರುವ ಕಥೆಗಳು ಭಾರತೀಯ ಸಾಹಿತ್ಯದಲ್ಲಿಯೇ ಅನನ್ಯ ರಚನೆಗಳಾಗಿವೆ. ಈಗಾಗಲೇ ಮಹಾಶ್ವೇತಾದೇವಿಯವರ ದೌಪ್ದಿ, ಸ್ತನದಾಯಿನಿ, ಉಪ್ಪು, ಇತ್ಯಾದಿ ಸಶಕ್ತ ಕತೆಗಳನ್ನು ಸಮರ್ಥ ರೀತಿಯಲ್ಲಿ ಕನ್ನಡಕ್ಕೆ ತಂದಿರುವ ಎಚ್.ಎಸ್. ಶ್ರೀಮತಿ ಅವರು ಬೆಳಕಿಗೆ ತರುತ್ತಿರುವ ಸಮಗ್ರ ಕಥಾಸಂಕಲನಕ್ಕೆ ಶುಭ ಹಾರೈಕೆಗಳು. – ಗೀತಾ ಶೆಣೈ, ಬೆಂಗಳೂರು