ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫೇಸ್ ಬುಕ್ ಪಿಕ್ : ಇಲ್ಲಿ ವಿಧವೆಯರನ್ನು ಹರಾಜು ಹಾಕುತ್ತಾರೆ..

ಉಗಮ ಶ್ರೀನಿವಾಸ್

ಇಲ್ಲಿ ವಿಧವೆಯರನ್ನು ಹರಾಜು ಹಾಕುತ್ತಾರೆ ಎಂದರೆ ನಂಬುತ್ತೀರ?. ಗಡಿ ಭಾಗದ ತುಮಕೂರು ಜಿಲ್ಲೆ ಪಾವಗಡದಲ್ಲಿ ಇಂತದ್ದೊಂದು ಅಮಾನವೀಯ ಆಚರಣೆ ಇದೆ. ಇಂತಹ ಆಚರಣೆ ವಿರುದ್ಧ ಸಿಡಿದೆದ್ದ ಮಹಿಳೆ ಹೆಸರು ಹೆಬ್ಬಂಡೆ ನಾಗಮ್ಮ. ಈಕೆ ಅಕ್ಷರದ ಗಂಧ ಗಾಳಿಯೇ ಗೊತ್ತಿಲ್ಲದ್ದವಳು. ಗಂಡ ಸತ್ತರೆ ವಿಧವೆಯನ್ನು ಆಕೆಯ ಮಾವ ಹರಾಜಿಗೆ ಇಡುತ್ತಾನೆ. ಕೂಗಿದ ಹಣ ಈಕೆಯ ಮಾವನಿಗೆ ಹೋಗುತ್ತೆ. ಈಕೆ ಜೀತಕ್ಕೆ ಇರಬೇಕಾಗುತ್ತದೆ. ಹರಾಜಿಗೆ ಕೂಗಿಕೊಂಡವರು ಇವಳನ್ನು ಕರೆದುಕೊಂಡು ಹೋಗಲು ಬಂದಾಗ ಮಚ್ಚು ಹಿಡಿದು ಎಲ್ಲರನ್ನು ಹಿಮ್ಮೆಟ್ಟಿಸಿದ್ದ ದಿಟ್ಟೆ ಈಕೆ. ಜಿಲ್ಲಾಡಳಿತ ಕೂಡ ಈಕೆಯ ಧೈಯ೯ ಮೆಚ್ಚಿ ಈಕೆಗೆ ಆಶ್ರಯ ಯೋಜನೆಯಲ್ಲಿ ಮನೆ ಕೊಡುವುದಾಗಿಯೂ ಘೋಷಿಸಿತ್ತು. ಆದರೆ ಇಲ್ಲಿಯವರೆಗೂ ಕೊಡುವ ಪ್ರಯತ್ನ ಮಾಡಿಲ್ಲ. ಹಲವಾರು ವಷ೯ಗಳಿಂದ ಇದ್ದ ಅಮಾನವೀಯ ಆಚರಣೆ ವಿರುದ್ಧ ಸಿಡಿದೆದ್ದ ಈಕೆ ಬಟ್ಟೆ ಗುಡಿಸಿಲಿನಲ್ಲಿ ಇವತ್ತಿಗೂ ವಾಸಿಸುತ್ತಿದ್ದಾಳೆ. ಮಹಿಳಾ ಸಬಲೀಕರಣದ ಬಗ್ಗೆ ಸಕಾ೯ರದ ಹೇಳಿಕೆಗಳು ಬರೀ ಹೇಳಿಕೆಯಾಗಿಯೇ ಉಳಿಯುತ್ತಿದೆ ಅನಿಸುತ್ತಿದೆ. ನಿಮಗೆ?

‍ಲೇಖಕರು avadhi

22 April, 2013

6 Comments

  1. Anjali Ramanna

    idara bagge neevE nanage hELiddiri Ugama….naavu Enu maaDabEku? guide maaDi haage maaDi nyaaya dorakisikoLLONa.

  2. mallikarjuna kalamarahalli

    priya ugama, eeke yava jatige seeridavaru? tilisi.nantara matanaduttene. m..9449974058.

  3. bharathi

    🙁

  4. prathibha nandakumar

    ishte saladu dodda write up maadi

    • ugamasrinivas

      ಪ್ರತಿಭಾ ಮೇಡಂಗೆ–
      ಕನ್ನಡಪ್ರಭ ದಲ್ಲಿ ದೊಡ್ಡ ಲೇಖನ ಮಾಡಿದ್ದೆ. ಮುಖಪುಟದಲ್ಲಿ ಕವರ್ ಆಗಿತ್ತು. ಮುರುಘಾಶರಣರು ನಾಗಮ್ಮಗೆ 15 ಸಾವಿರ ರು. ಕೊಟ್ಟು ಹೋಗಿದ್ದರು. ಆದರೆ ಆಕೆ ನಿವೇಶನ ನೀಡುವುದಾಗಿ ಬೊಬ್ಬೆ ಹೊಡೆದಿದ್ದ ಜಿಲ್ಲಾಡಳಿತ ಮಾತ್ರ ತೆಪ್ಪಗೆ ಕೂತಿದೆ.

  5. C Sam

    NamBaLaGaDu, Ee KaLaDaLlu EnThaHa HoLaSu PaDdaTi, HoLaSu JaNa EDdaRe EnDu NamBLu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading