ನೀನಾಸಂ ನೆಲದಲ್ಲಿ ನೆನಪ ಮೆರವಣಿಗೆ
ಸಂಜೆಗೆ ಶಂಕರ್ ಮೊಕಾಶಿ ಪುಣೇಕರ್ ರ ‘ನಟನಾರಾಯಣಿ’ ನಾಟಕ ತಾನೆ? ಸ್ನೇಹಿತೆಯೊಬ್ಬಳು ಹಲ್ಲುಜ್ಜುತ್ತಾ ಕೇಳಿದಳು. ತುಸು ತಡವಾಗಿಯೇ ನನಗದು ಅರ್ಥವಾಯಿತು, ಅವಳು ಬಾಯಲ್ಲಿ ಟೂತ್ಬ್ರಶ್ ಇಟ್ಟುಕೊಂಡೇ ಮಾತನಾಡಿದ್ದರಿಂದ. ನಂತರ ನಾನು ಹೌದೆಂದೆ. ಚಿಕ್ಕವಳಿದ್ದಾಗ ನೋಡುತ್ತಿದ್ದ ಕಂಪನಿ ನಾಟಕದ ನೆನಪು ಬೆನ್ನುಹತ್ತಿತು. ಹಾ
ಗೆ ಬೆನ್ನು
ಹತ್ತಿದ್ದೇ, ಮನಸಿನೊಳಗೆ ನಡೆಯುತ್ತಿದ್ದ ಮೆರವಣಿಗೆಯೊಳಗಿನ
ಪಲ್ಲಕ್ಕಿ ನಿಧಾನವಾಗಿ ಹಿಮ್ಮುಖ ಚಲಿಸಲಾರಂಭಿಸಿತು. ಹದಿನೈದಿಪ್ಪತ್ತು ವರ್ಷಗಳ ಹಿಂದಿನದೆಲ್ಲವೂ ದೃಶ್ಯಗಳಂತೆ ಕಾಣಲಾರಂಭಿಸಿದವು.
ಸಂಪೂರ್ಣ ಓದಿಗೆ ಭೇಟಿ ಕೊಡಿ : ಆಲಾಪ
+++
ಹೆಗ್ಗೋಡಿನ ಬೆಳಗಿನಲ್ಲೊಂದು ಸ್ವಗತ
ಸಾಲದ್ದಕ್ಕೆ ಹಿಂದಿನ ಸಂಜೆ ಕೊನೆಯ ಗೋಷ್ಠಿಯಲ್ಲಿ ಅನಂತಮೂರ್ತಿ ಮಾತಾಡಿ ಮಾತಾಡಿ ಇನ್ನೂ ಮಾತಾಡುತ್ತಿದ್ದಾಗ ಅವರ ಮಗಳು “ಅಪ್ಪಾ ಮಾತಾಡಿದ್ದು ಸಾಕು, ಎಲ್ಲರಿಗೂ ತಿಂಡಿಗೆ ಹೊತ್ತಾಗುತ್ತಿದೆ” ಅಂತ ಚೀಟಿ ಕಳಿಸಿ, ಅದನ್ನು ಅನಂತಮೂರ್ತಿ ಜೋರಾಗಿ ಓದಿ ನಕ್ಕು, ಆ ನಗುವಿನಲ್ಲಿ ಜ್ಞಾನಪೀಠಿಯೊಬ್ಬರ ಸಂಸಾರದ ಸುಖ ಪರವಶ ಗಳಿಗೆಯೊಂದು ಹಾದು ಹೋದಂತೆ ಕಂಡುಬಂದದ್ದು ಇನ್ನೂ ನನ್ನ ತಲೆಯಲ್ಲಿ ಕುಳಿತಿತ್ತು.
ಸಂಪೂರ್ಣ ಓದಿಗೆ ಭೇಟಿ ಕೊಡಿ : ಬೆಟ್ಟದಡಿ


0 Comments