ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ರಂಭೆಗೆ ನಿನ್ನ ಚುಟುಕಗಳ ಹುಚ್ಚು

-ದಿನಕರ ದೇಸಾಯಿ

200px-DinakaraDesai

ದಿನಕರನ ಚುಟುಕ

ಇಂದ್ರ ದೇವನ ಮೊನ್ನೆ ಮಾಡಿ ಟೆಲಿಫೋನು

ಕೇಳಿದನು:ದೇಸಾಯಿ, ಹೇಗಿದ್ದಿ ನೀನು?

ನನ್ನ ರಂಭೆಗೆ ನಿನ್ನ ಚುಟುಕಗಳ ಹುಚ್ಚು

ಪ್ರತಿ ಕಳಿಸಿ ಅದು ನನ್ನ ಲೆಕ್ಕಕ್ಕೆ ಹಚ್ಚು

ಅಂಕೋಲೆ ಹುಡುಗಿ

ಗೋಕರ್ಣದಿಂದ ಉತ್ತರಕ್ಕೆ ಅಂಕೋಲೆ

ಇಲ್ಲುಂಟು ದೇಸಾಯಿ ದಿನಕರನ ಬಾಲೆ

ಎಲ್ಲರನ್ನೂ ಕೆಣಕುವಳು ಈ ತುಂಟ ಹುಡಗಿ

ಹಿಡಿಯ ಹೋದರೆ ಕುಳಿತುಕೊಳ್ಳುವಳು ಅಡಗಿ

ಅಂಕೋಲೆ ಉಪ್ಪು

ಗೃಹಮಂತ್ರಿ ಹೇಳಿದರು: ಎಲೆ ಚುಟುಕ ಜೋಕೆ

ಅತ್ಯಂತ ಉಗ್ರವಾಗಿದೆ ನಿನ್ನ ಟೀಕೆ.

ಚುಟುಕವೆಂದಿತು: ನನಗೆ ಹಾಕುವೆನೆ ಸೊಪ್ಪು

ನಾನು ಅಂಕೋಲೆ ಸತ್ಯಾಗ್ರಹದ ಉಪ್ಪು.

ಅಹಿಂಸಾಮಯ ಯುದ್ಧ

ಲೇಖನಿಯ ಹಿಡಿದು ಸರಕಾರದ ವಿರುದ್ಧ

ಪ್ರತಿ ದಿವಸವೂ ನಾನು ಹೂಡಿದೆನು ಯುದ್ಧ.

ಬಂದೂಕುಗಳ ಬದಲು ಚುಟುಕಗಳ ಬಾಣ.

ಎಷ್ಟು ಚುಚ್ಚಿದರೇನು ? ಬಿಡಲಿಲ್ಲ ಪ್ರಾಣ!

ಅಂಬಿಕಾತನಯದತ್ತರ ಕೃತಿ

ಅಂಬಿಕಾತನಯದತ್ತರ ಕೃತಿಯನೋದು

ಭಾವನಾಲೋಕದಲಿ ಅದು ಒಂದು ಜಾದು.

ಅರಗಳಿಗೆಯಲಿ ನೀನು ಮಂಗಳಕ್ಕೆ ಹಾರಿ.

ಕುಳಿತುಕೊಳಬಹುದು ಬ್ರಹ್ಮಾಂಡಗಳನೇರಿ.

‍ಲೇಖಕರು avadhi

30 July, 2010

1 Comment

  1. Geeta Hegde

    tumba ista aaytu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading