Paraspara Bengaluru.
ಇದು ಎರಡು ವರ್ಷಗಳ ಹಿಂದೆ ನಾವು ‘ದೇಶ ಕಾಲ’ ತ್ರೈಮಾಸಿಕದ ವಿಶೇಷಾಂಕ ಬಂದ ಸಂದರ್ಭದಲ್ಲಿ ಆರಂಭಿಸಿದ ಚರ್ಚೆಯ ಸುತ್ತ ಪ್ರಕಟಗೊಂಡ ಬರಹಗಳ ಸಂಕಲನ. ಈ ಪುಸ್ತಕದ ಕುರಿತು ನಾವು ಹೆಚ್ಚು ಹೇಳಿಕೊಳ್ಳುವ ಅಗತ್ಯವಿಲ್ಲವೆಂದು ಭಾವಿಸಿದ್ದೇವೆ. ಯಾಕೆಂದರೆ ಸುಮಾರು ನಾಲ್ಕು-ಐದು ತಿಂಗಳವರೆಗೂ ನಡೆದ ಈ ವಿಷಯದ ಸುತ್ತಲಿನ ಚರ್ಚೆಯನ್ನು ಇಡೀ ಪುಸ್ತಕವೇ ಹೇಳುತ್ತಿದೆ. ’ದೇಶ ಕಾಲ’ದ ಪತ್ರಿಕೆಯ ವಿಶೇಷಾಂಕ ಒಂದು ನೆಪವಾಗಿತ್ತಷ್ಟೆ; ಅದಕ್ಕೂ ಹಿಂದಿನಿಂದಲೂ ನಮ್ಮ ಕನ್ನಡದ ಸಾಂಸ್ಕೃತಿಕ ಲೋಕವನ್ನು ಆಳುತ್ತಿದ್ದ ವಿವಿಧ ಬಗೆಯ ’ಹೆಜಮನಿ’ಗಳ ಕುರಿತು ನಾವು ಪ್ರತಿಕ್ರಿಯಿಸಬೇಕೆನ್ನಿಸಿತ್ತು. ಆ ಸಂದರ್ಭದಲ್ಲಿ ಬಂದ ’ದೇಶ ಕಾಲ’ ಪತ್ರಿಕೆಯ ವಿಶೇಷಾಂಕ ಇಂತಹ ಸಾಂಸ್ಕೃತಿಕ ’ಹೆಜಮನಿ’ಯ ಒಟ್ಟು ಮೊತ್ತವಾಗಿ ಕಾಣಿಸಿತ್ತು.
ಆ ಪತ್ರಿಕೆಯ ವಿಶೇಷಾಂಕದ ಕುರಿತು ನಾವು ಬರೆದ ಪ್ರತಿಕ್ರಿಯಾತ್ಮಕ ಬರಹಕ್ಕೆ ನಾಡಿನ ಅನೇಕ ಸೃಜನಶೀಲ ಬರಹಗಾರರು, ಚಿಂತಕರು, ಓದುಗರು ಸ್ಪಂದಿಸಿ, ಈ ಚರ್ಚೆಗೊಂದು ವಿಶಾಲತೆಯನ್ನು ದೊರಕಿಸಿಕೊಟ್ಟಿದ್ದಾರೆ. ’ಇತ್ತೀಚಿನ ದಿನಗಳಲ್ಲಿ ಒಟ್ಟು ಸಾಂಸ್ಕೃತಿಕ ರಾಜಕಾರಣದ ಸುತ್ತ ನಡೆದ ಕೆಲವೇ ಅಪ ರೂಪದ ಚರ್ಚೆಗಳಲ್ಲಿ ಇದೂ ಸಹ ಒಂದು. ಈ ಚರ್ಚೆಯ ಒಟ್ಟು ಬರಹಗಳನ್ನು ಒಂದೆಡೆ ಸಂಕಲಿಸಿ ಪುಸ್ತಕರೂಪದಲ್ಲಿ ತನ್ನಿ’ ಎಂದು ಅನೇಕ ಗೆಳೆಯರು ಒತ್ತಾಯಿಸಿದ್ದರಿಂದ ಇದೀಗ ಈ ಪುಸ್ತಕ ಪ್ರಕಟಗೊಳ್ಳುತ್ತಿದೆ. ಕೊನೆಗೂ ಈ ಕೃತಿಯ ಮೌಲ್ಯವನ್ನು, ಒಳಿತು-ಕೆಡಕುಗಳನ್ನು ನಿರ್ಧರಿಸುವವರು ಪ್ರಜ್ಞಾವಂತ ಓದುಗರೇ ಆಗಿರುವುದರಿಂದ, ಅಂತಹ ಓದುಗರೆಲ್ಲರೂ ಕೃತಿಗೆ ವಸ್ತುನಿಷ್ಠವಾಗಿ ಸ್ಪಂದಿಸಲಿ ಎಂಬುದು ನಮ್ಮ ಆಶಯ.
-Manjunath Latha & Chandrashekhar Aijoor
ಪ್ರತಿಗಳಿಗೆ ಸಂಪರ್ಕಿಸಿ:
Chandrashekhar Aijoor -chandrashekharaijoor@gmail.com
Manjunath Latha -manjunathlatha@gmail.com
Ravi Krishna R -ravikreddy@yahoo.com
K.L.Chandrashekhar Aijoor
Senior Researcher
Centre for the Study of Social Exclusion & Inclusive Policy,
National Law School of India University, Nagarabavi,
Bangalore-560 072.
Ravi Krishna Reddy
Moulyagraha Prakashana
#400, 23rd Main, BTM Lay Out 2nd Stage,
Bangalore-560 076.






Please provide contact no. for obtaining copies of Deshvidena & Kalavideiena