ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಹೇಳ್ತಾರೆ ‘ಮಿಸ್ಸಿಂಗ್ ಯು ಆಲ್’

ಬೆಂಗಳೂರೇ ಹಾಗೆ. ತಾಯಿಯಂತಲ್ಲ, ಪ್ರೇಯಸಿಯಂತಲ್ಲ, ಸಖನಂತಲ್ಲ. ತುಂಬ ದಿನ ಇಲ್ಲಿದ್ದು ಮರಳಿದ ನಂತರವೂ ನೆನಪಾಗುವುದಿಲ್ಲ. ಅದು ನೆಲೆಯಲ್ಲ, ನೆಲವಲ್ಲ. ಈ ಊರಿಗೆ ನೆನಪುಗಳನ್ನು ಸೃಷ್ಟಿಸುವ ಶಕ್ತಿಯೂ ಇಲ್ಲ. ಇದೊಂದು ಕರ್ಮಭೂಮಿ. ಇಲ್ಲಿಗೆ ಮಂದಿ ದುಡಿಯುವುದಕ್ಕೆ ಬರುತ್ತಾರೆ. ಕೈದಿಗಳಂತೆ ದುಡಿಯುತ್ತಾರೆ. ಮತ್ತೆ ತಮ್ಮೂರಿಗೆ ಮರಳಬೇಕು ಎಂದು ಹಂಬಲಿಸುತ್ತಾರೆ. ಆದರೆ, ಬೆಂಗಳೂರು ಅವರನ್ನು ಮರಳಲು ಬಿಡುವುದಿಲ್ಲ. ಅಭಿಮನ್ಯುವಿನ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಈ ಚಕ್ರವ್ಯೂಹದ ಒಳಗೆ ಹೊಕ್ಕವರು ಹೋರಾಡಿಯೇ ಮಡಿಯಬೇಕು. ಯುದ್ಧ ಗೆದ್ದ ಸುದ್ದಿ ತಿಳಿಯುವ ಮೊದಲೇ ಅಸುನೀಗಬೇಕು.

-ಒಂದು ಕಾದಂಬರಿ, ಒಂದು ಪುಟ್ಟ ಕೈಪಿಡಿ, ಒಂದೂರಿನ ಆತ್ಮಕತೆ- ಹೀಗೆ ಮೂರು ಪುಸ್ತಕಗಳ ಸಿದ್ಧತೆಯಲ್ಲಿದ್ದೇನೆ. ತನ್ಮಯತೆ, ಏಕಾಗ್ರತೆ ಮತ್ತು ಶ್ರಮ- ಮೂರೂ ಬೇಕು. ಹೀಗಾಗಿ ಕೆಲವು ದಿನಗಳ ಮಟ್ಟಿಗೆ ವಿರಾಮ. ಎಲ್ಲರಿಗೂ ಶುಭವಾಗಲಿ. ಮಿಸ್ಸಿಂಗ್ ಯು ಆಲ್.

 

‍ಲೇಖಕರು G

10 May, 2012

3 Comments

  1. Raghavendra

    olleyadagali. nimma kadambari, putta kaipidi mattu ondurina atmakategagi atyanta kutuhaladinda kaayuttene. namaskara.

  2. D.RAVI VARMA

    ವೆರಿ ಗುಡ್, ಕನ್ನಡ ಸಾಹಿತ್ಯಕ್ಕೆ ಮತ್ತೊಂದು ಮೂರು ಹೊಸಪುಸ್ತಿಕೆ , ಜೋಗಿ ನಿಮ್ಮ ಪುಸ್ತಿಕೆ ಬೇಗನೆ ಬರಲಿ ಎಂದು ಆಶಿಸುವೆ ,ನಿಮ್ಮ ಹೊಸ phose ಚೆನ್ನಾಗಿದೆ

    • ugamasrinivas

      ವ್ಹಾ ಜೋಗಿ ಅವರ ಬರೆಹವೇ ಹಾಗೆ. ಇಬ್ಬನಿಯಂತೆ, ಮಳೆ ಬಿದ್ದ ಮಣ್ಣ ವಾಸನೆಯಂತೆ, ಬಿರು ಬೇಸಿಗೆಯಲ್ಲಿ ನದಿ ಸಿಕ್ಕಂತೆ. ಬರವಣಿಗೂ ಮುನ್ನದ ಪೀಠಿಕೆಯೇ ತಂಗಾಳಿಯಂತೆ ಇದೆ. ಜೋಗಿ ನೀವು ಬರೆಯುತ್ತಲೇ ಇರಿ. ಓದುವ ಸುಖ ನಮ್ಮದಾಗಲಿ.
      ವಂದನೆಯೊಂದಿಗೆ-
      ಉಗಮ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading