
ಜೋಗಿ ದಿಢೀರನೆ ಬ್ಲಾಗ್ ಲೋಕಕ್ಕೆ ವಿದಾಯ ಹೇಳಿದ್ದಾರೆ. ಬ್ಲಾಗ್ ಲೋಕದಲ್ಲಿ ಬೆರಳೆಣಿಕೆಯ ಮಂದಿಯಿಂದ ನಡೆಯುತ್ತಿರುವ ಕೆಸರೆರಚಾಟ ಅವರನ್ನು ಸಾಕಷ್ಟು ನೋಯಿಸಿದೆ. ಬ್ಲಾಗ್ ಲೋಕದ ಕೆಟ್ಟ ಬೆಳವಣಿಗೆಗಳು ಬರೆಯಲೂ ಉತ್ಸಾಹ ನೀಡುತ್ತಿಲ್ಲ, ಓದಲೂ ಹಚ್ಚುತ್ತಿಲ್ಲ . ಹಾಗಾಗಿ ಬ್ಲಾಗ್ ಲೋಕದಿಂದ ಹಿಂದೆ ಸರಿಯುತ್ತಿದ್ದೇನೆ ಎಂದಿದ್ದಾರೆ.
ಜೋಗಿ ಬ್ಲಾಗ್ ಲೋಕಕ್ಕೆ ಕೊಟ್ಟ ಕಾಣಿಕೆ ದೊಡ್ಡದು. ಜೋಗಿ ಅವರ ಅಪಾರ ಓದುಗರನ್ನು ಬ್ಲಾಗ್ ಲೋಕಕ್ಕೂ ಎಳೆದು ತಂದರು. ಅಷ್ಟೇ ಅಲ್ಲ ಅವರನ್ನು ಬ್ಲಾಗಿಗರನ್ನಾಗಿ ಮಾಡಿದರು. ಎಷ್ಟೋ ಬ್ಲಾಗಿಗರ ಬಗ್ಗೆ ಬರೆದು ಹುರಿದುಂಬಿಸಿದರು. ‘ಕನ್ನಡಪ್ರಭ’ ಸಾಪ್ತಾಹಿಕ ದಲ್ಲಿ ‘ಬ್ಲಾಗ್ ಬುಟ್ಟಿ’ ಅಂಕಣ ಆರಂಭಿಸಿ ಎಲೆಮರೆಯಲ್ಲಿದ್ದ ಎಷ್ಟೊಂದು ಬ್ಲಾಗಿಗರಿಗೆ ಬೆಳಕು ನೀಡಿದರು. ಆದರೆ ಅಂತಹ ಜೋಗಿಯೇ ಈಗ ಬ್ಲಾಗ್ ಲೋಕದಿಂದ ಎದ್ದು ನಡೆದಿದ್ದಾರೆ. ಆದರೆ ಅವರು ಎದ್ದು ನಡೆದಿರುವುದು ಅಪಾರ ಬೇಸರದಿಂದ. ನೀವೇ ಹೇಳಿ. ಜೋಗಿ ಹಾಗೆ ಬ್ಲಾಗ್ ಲೋಕದಿಂದ ಎದ್ದು ಹೋಗಲು ನಾವು ಬಿಡಬೇಕೇ?
ಜೋಗಿ ಬ್ಲಾಗ್ ಬರಹ ನಿಲ್ಲಿಸದಂತೆ ‘ಅವಧಿ’ ಬೆಂಬತ್ತಿದೆ. ನೀವೂ ಒಂದು ಮೇಲ್ ಕಳಿಸಿ
ಅವರ ದುಗುಡದ ಪತ್ರ ಇಲ್ಲಿದೆ–

ನಮಸ್ಕಾರ, ಮತ್ತೆ ಭೇಟಿಯಾಗೋಣ
ಹಂದಿಜ್ವರ ದೇಹಕ್ಕಷ್ಟೇ ಅಲ್ಲ, ಮನಸ್ಸಿಗೂ ಬಂದಂತಿದೆ. ಬಹುತೇಕ ಮಂದಿ ಮಾಸ್ಕ್ ಹಾಕಿಕೊಂಡೇ ಬರೆಯುತ್ತಿದ್ದಾರೆ.ಮುಖವಾಡ ಹಾಕಿಕೊಂಡೇ ಕಾಮೆಂಟೂ ಮಾಡುತ್ತಾರೆ. ಹಾಗೆ ಮಾಡುವುದರಿಂದ ಬರೆಯುವವನು ಸ್ಪೂರ್ತಿಕೆಡಬಾರದು. ಧೈರ್ಯವಾಗಿ ಬರೆಯುತ್ತಲೇ ಇರಬೇಕು ಎನ್ನುವವರೂ ಇದ್ದಾರೆ.
ಹಾಗಿರುವುದು ಕಷ್ಟ. ಸುಮ್ಮನೆ ಬ್ಲಾಗುಗಳನ್ನು ನೋಡುತ್ತಾ ಹೋದಾಗ, ಅಲ್ಲಿರುವ ಕಾಮೆಂಟುಗಳನ್ನು ಓದಿದಾಗ, ಬರೆಯುವ ಕೈ ನಿಂತುಹೋಗುತ್ತದೆ. ಯಾವ ಬ್ಲಾಗುಗಳೂ ಇಲ್ಲದಿದ್ದಾಗಲೂ, ಯಾರೂ ಪ್ರಕಟಿಸುವವರು ಇಲ್ಲದಾಗಲೂ ನಾನು ದಿನಕ್ಕೊಂದಷ್ಟು ಪುಟ ಬರೆಯುತ್ತಿದ್ದೆ. ಕುಂಟಿನಿಯೂ ಬರೆಯುತ್ತಿದ್ದ. ನಾನೂ ಮತ್ತು ಗೆಳೆಯ ಕುಂಟಿನಿ ಅದನ್ನು ಪರಸ್ಪರ ಬದಲಾಯಿಸಿಕೊಂಡು ಓದುತ್ತಿದ್ದೆವು.
ಅಂಥದ್ದೇ ಸಂತೋಷವನ್ನು ಬ್ಲಾಗು ಕೂಡ ಕೊಡುತ್ತದೆ ಅಂದುಕೊಂಡಿದ್ದೆ.
ನಮಸ್ಕಾರ.
ಜೋಗಿ


ನಮ್ಮ ಹಳ್ಳಿಯ ಕಡೆ ಒಂದು ಗಾದೆಯಿದೆ. ‘ನಾಯಿ ಸೇರುಗಲ್ಲಿನ (ತೂಕದ ಕಲ್ಲು) ಮೇಲೆ ಉಚ್ಚೆ ಹುಯ್ದರೆ ಅದರ ತೂಕ ಕಡಿಮೆಯಾಗುತ್ತದೆಯೇ?’ ಎಂದು. ಹಾಗೇ ಇನ್ನೊಂದು ‘ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತದೆಯೇ’ ಎಂಬುದು. ಯಾರೋ ಮುಖಹೇಡಿಗಳು ಬೊಗಳುತ್ತಾರೆ ಎಂದು ಪಲಾಯನವಾದಿಯಾಗುವುದು ಸರಿಯಲ್ಲ; ಎಂದಷ್ಟೇ ಹೇಳಬಹುದು.
ಕರ್ಮಣ್ಯೆ ವಾಧಿಕಾರಸ್ತೆ ಮಾ ಫಲೆಷು ಕದಾಚನ…..
ಪ್ರಿಯ ಅಕ್ಷರಮಿತ್ರ ಜೋಗಿ,
ನಿಮ್ಮ ಸಂತೋಷಕ್ಕೆ ಬರೆಯಿರಿ; ಹಾಗೆ ಬರೆದದ್ದನ್ನು ನಮ್ಮ ಸಂತೋಷಕ್ಕಾಗಿ ಬ್ಲಾಗ್ನಲ್ಲಿ ಪ್ರಕಟಿಸಿಬಿಡಿ, ಪ್ಲೀಸ್.
ಮುಖವಾಡದೊಳಗಿನ ನಾಯಿ ಕಮೆಂಟ್ ಬೊಗಳುವುದರಿಂದ ಸರಸ್ವತೀದೇವಿಯ ಲೋಕ ಹಾಳಾಗುವುದಿಲ್ಲ.
ನಿಮಗೆ ಪ್ರತ್ಯೇಕ ಮಿಂಚಂಚೆ ಕೂಡ ಕಳಿಸುತ್ತಿದ್ದೇನೆ.
ಪ್ರಿಯ ಅಕ್ಷರಮಿತ್ರ ಜೋಗಿ,
ನಿಮ್ಮ ಸಂತೋಷಕ್ಕೆ ಬರೆಯಿರಿ; ಹಾಗೆ ಬರೆದದ್ದನ್ನು ನಮ್ಮ ಸಂತೋಷಕ್ಕಾಗಿ ಬ್ಲಾಗ್ನಲ್ಲಿ ಪ್ರಕಟಿಸಿಬಿಡಿ, ಪ್ಲೀಸ್.
ಮುಖವಾಡದೊಳಗಿನ ನಾಯಿ ಕಮೆಂಟ್ ಬೊಗಳುವುದರಿಂದ ಸರಸ್ವತೀದೇವಿಯ ಲೋಕ ಹಾಳಾಗುವುದಿಲ್ಲ.
ನಿಮಗೆ ಪ್ರತ್ಯೇಕ ಮಿಂಚಂಚೆ ಕೂಡ ಕಳಿಸುತ್ತಿದ್ದೇನೆ.
ಪ್ರಿಯ ಅಕ್ಷರಮಿತ್ರ ಜೋಗಿ,
ನಿಮ್ಮ ಸಂತೋಷಕ್ಕೆ ಬರೆಯಿರಿ; ಹಾಗೆ ಬರೆದದ್ದನ್ನು ನಮ್ಮ ಸಂತೋಷಕ್ಕಾಗಿ ಬ್ಲಾಗ್ನಲ್ಲಿ ಪ್ರಕಟಿಸಿಬಿಡಿ, ಪ್ಲೀಸ್.
ಮುಖವಾಡದೊಳಗಿನ ನಾಯಿ ಕಮೆಂಟ್ ಬೊಗಳುವುದರಿಂದ ಸರಸ್ವತೀದೇವಿಯ ಲೋಕ ಹಾಳಾಗುವುದಿಲ್ಲ.
ನಿಮಗೆ ಪ್ರತ್ಯೇಕ ಮಿಂಚಂಚೆ ಕೂಡ ಕಳಿಸುತ್ತಿದ್ದೇನೆ.
ಪ್ರಿಯ ಅಕ್ಷರಮಿತ್ರ ಜೋಗಿ,
ನಿಮ್ಮ ಸಂತೋಷಕ್ಕೆ ಬರೆಯಿರಿ; ಹಾಗೆ ಬರೆದದ್ದನ್ನು ನಮ್ಮ ಸಂತೋಷಕ್ಕಾಗಿ ಬ್ಲಾಗ್ನಲ್ಲಿ ಪ್ರಕಟಿಸಿಬಿಡಿ, ಪ್ಲೀಸ್.
ಮುಖವಾಡದೊಳಗಿನ ನಾಯಿ ಕಮೆಂಟ್ ಬೊಗಳುವುದರಿಂದ ಸರಸ್ವತೀದೇವಿಯ ಲೋಕ ಹಾಳಾಗುವುದಿಲ್ಲ.
ನಿಮಗೆ ಪ್ರತ್ಯೇಕ ಮಿಂಚಂಚೆ ಕೂಡ ಕಳಿಸುತ್ತಿದ್ದೇನೆ.
ಬ್ಲಾಗ್ಲೋಕದ “ಹೂಳಿ”ನಿಂದ ಶುರುವಾದ ವಿಷಯ ಈಗ “ಹಂದಿ”ವರೆಗೂ ತಲುಪಿದೆಯೆಂದೆನಿಸುತ್ತದೆ. ಎನಾನಿಮಸ್ ಕಾಮೆಂಟ್ಗಳು ‘ಹಂದಿಜ್ವರ’ ಇದ್ದಂತೆ ಎಂದು ಜೋಗಿ ಹೇಳಿದ್ದಾರೆ; ‘ಹಂದಿಯ ಜೊತೆ ಕೊಚ್ಚೆಯಲ್ಲಿ ಹೋರಾಟಕ್ಕಿಳಿದರೆ ಸಂತೋಷವಾಗುವುದು ಹಂದಿಗೇ ಹೊರತು ನಮಗಲ್ಲವಲ್ಲ…..’ ಎಂದು ಇನ್ನೊಬ್ಬ ಮಿತ್ರ ಸುಘೋಷ್ ಅವರೆಂದಿದ್ದಾರೆ. ಇದೇ ಸಂದರ್ಭಕ್ಕೆ ಸರಿಯಾಗಿ ಇನ್ನೊಂದು ಹಂದಿ ಕೋಟು (i mean quote) ನೆನಪಾಗುತ್ತಿದೆ. ಮಾರ್ಕ್ ಟ್ವೈನ್ ಹೇಳಿದ್ದೆನ್ನಲಾದ ಅದು ಹೀಗಿದೆ- “Never try to teach a pig to sing. It wastes your time and annoys the pig.”
🙂
ಹಲೋ ಸರ್ ,
ನೀವು ಬ್ಲಾಗ್ ಲೋಕಕ್ಕೆ ವಿದಾಯ ಹೇಳಿದ್ದಿರಿ ಅಂತ ಮೋಹನ್ ಅವರ ‘ಮೀಡಿಯಾ ಮಿರ್ಚಿ’ ಓದಿದಾಗ ಅಚ್ಚರಿಯಾಯ್ತು .ನಿಮ್ಮ ನಿರ್ಧಾರ ಸರಿಯಲ್ಲ ಅನ್ನೋದು ನನ್ನ ಭಾವನೆ. . ಮುಖವಾಡ ಹಾಕಿ ಕಾಮೆಂಟ್ ಬರೆಯುವವರನ್ನು ಹುರಿದುಂಬಿಸಿದಂತಾಗುದಿಲ್ಲವೇ ? ನೀವು ಇಷ್ಟಕ್ಕೆಲ್ಲ ಹೆದರಿ ಓಡಿದರೆ ಅರ್ಥವಿದೆಯಾ ,ಜಾಣ ಕುರುಡನ ತರ ಇರುವುದು ಉತ್ತಮ ಅಂತ ನನ್ನ ಅಭಿಪ್ರಾಯ ಏನಂತೀರಿ?
ಶಶಿ
ಹಾಗಾದ್ರೆ… ಅಂತಿಮ ವಿಜಯ ಕೆಟ್ಟದ್ದಕ್ಕೆ ಅಂತಾಯ್ತು!
swine flu is being treated with great concern.blog flu is also to be treated.always keep on moving forward never quit
ಜೋಗಿ,
ನೀವು ದಿನಕ್ಕೊಂದು ಪುಟ ಬ್ಲಾಗು ಬರೆಯುತ್ತಿದ್ದಾಗ ಅದು ನಿಮಗಷ್ಟೇ ಸಂತೋಷ ಕೊಡುತ್ತಿರಲಿಲ್ಲ, ನಮ್ಮಂಥ ಓದುಗರಿಗೂ ಮುದ ನೀಡುತ್ತಿತ್ತು.
ಸುಮ್ಮನೆ ಬ್ಲಾಗುಗಳನ್ನು ಓದಿ, ಕಮೆಂಟುಗಳ ಬಗ್ಗೆ ಜಾಣ-ಕುರುಡು ಪ್ರದರ್ಶಿಸಿ.
‘ಜೋಗಿಯನ್ನು ಬ್ಲಾಗ್ ಲೋಕದಿಂದ ಹೇಗೆ ಓಡಿಸಿದೆ ನೋಡು” ಎಂಬ (ವಿಕೃತ)ಖುಷಿಯನ್ನು ‘ಅವರಿಗೇಕೆ’ ಕೊಡುತ್ತೀರಿ?
ಜೋಗಿ ಸರ್,
ಎಷ್ಟೋ ವರ್ಷದಿಂದ ಬರ್ದಿದೀರಿ, ಹೊಗಳಿಗೆ ಟೀಕೆ ಎರಡನ್ನೂ ನೋಡಿರ್ತೀರಿ, ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿರುವವರು, ಎಷ್ಟೋ ಜನರಿಗೆ ಹಾಗಲ್ಲ ಹೀಗೆ ಅಂತ ಹೇಳೋರು, ತಾವೇ ಇಂಥ ನಿರ್ಧಾರ ತಗೊಂಡ್ರೆ ಹೇಗೆ?
ದಯವಿಟ್ಟು ಇನ್ನೊಮ್ಮೆ ಯೋಚಿಸಿ.
ಸುನಿಲ್.
Sir, just i read this blog. i shocked. Dont stop. contunee your writup. Blog became Majoer part for every writer of Karnataka. u gave new shape to blog.
i hope you contunue to writing in bolg.
mahendra kumar H M
Bellary – 94490 68333
ಖಂಡಿತ ಜೋಗಿ ಅವರ ನಿರ್ಧಾರ ಸ್ವಾಗತಾರ್ಹವಲ್ಲ. ನಾನಂತೂ ಸ್ವಾಗತಿಸುವುದಿಲ್ಲ. ಅಕ್ಕಪಕ್ಕ ಎಲ್ಲರೂ ಕೆಟ್ಟವರೆಂದು ಊಟ ಬಿಡಲು ಸಾದ್ಯವೇ? ಒಳ್ಳೆಯವರೂ ಇದ್ದಾರೆ ಎನ್ನುವುದನ್ನು ಜೋಗಿ ಒಪ್ಪಿಕೊಳ್ಳುತ್ತಾರೆ ಎಂದಾದರೆ ಅವರು ಈ ನಿರ್ಧಾರದಿಂದ ಹಿಂದೆ ಸರಿಯುತ್ತಾರೆ.
ನಾನು ‘ಅಗ್ನಿಪ್ರಪಂಚ’ ಆರಂಭಿಸಿ ಮೂರು ವರ್ಷಕ್ಕೆ ಬಂತು. ಅಂದಿನಿಂದ ಬ್ಲಾಗ್ ಬರಹಗಳನ್ನು ಓದುತ್ತಿದ್ದೇನೆ. ಹಾಗೇ ಜೋಗಿ ಅವರ ಸಾಕಸ್ಟು ಬರಹಗಳನ್ನು ಓದಿದ್ದೇನೆ. ಅವರ ಬರಹಕ್ಕೆ ಅಂಟಿಕೊಂಡವರಲ್ಲಿ ನಾನೂ ಒಬ್ಬ. ಹಾಗಂತ ಎಂದೂ ಪ್ರತಿಕ್ರಿಯಿಸಿರಲಿಲ್ಲ. ಪ್ರತಿ ದಿನ ಕಣ್ಣೆದುರೇ ಕಂಡರೂ ನಾನು ನಿಮ್ಮ ಅಭಿಮಾನಿ ಎಂದು ಹೇಳಿಕೊಂಡಿದ್ದೂ ಇಲ್ಲ.
ಆದರೆ ಈಗ ಬ್ಲಾಗಿಂಗ್ ನಿಲ್ಲಿಸುವ ನಿರ್ಧಾರಕ್ಕೆ ಬರುತ್ತಾರೆ ಎಂದಾದರೆ ಅವರಿಗೆ ನನ್ನದು ಒಂದಿಸ್ಟು ಪ್ರಶ್ನೆ.
೧. ನಿಮ್ಮ ಬರಹದ ಅಭಿಮಾನಿಗಳಿಗೆ ನಿಲ್ಲಿಸುವ ಕುರಿತು ನಿಮ್ಮ ಉತ್ತರ?
೨. ಕಾಮೆಂಟ್ ಮಾಡಿದವರಸ್ಟೇ ನಿಮ್ಮ ಬರಹದ ಓದುಗರು ಅಂದುಕೊಂಡಿರಾ?
೩. ಜೋಗಿಮನೆಯಲ್ಲಿ ಬಹಳ ದಿನಗಳಿಂದ ಬರೆಯುತ್ತಿರಲಿಲ್ಲ ಯಾಕೆ?
೩. ಕೆಲದಿನಗಳಿಂದ ‘ಅವಧಿ’ಯಸ್ಟೇ ನಿಮ್ಮ ಬರಹಕ್ಕೆ ವೇದಿಕೆಯಾಗಿತ್ತು… ಅದನ್ನೇ ಜೋಗಿಮನೆಯಲ್ಲಿ ಬರೆಯಬಹುದಿತ್ತಲ್ಲ…
೪. ನಮ್ಮಂತ ಓದುಗರಿಗಾದರೂ ಬರೆಯಬಹುದಲ್ಲವೇ…
ಜೋಗಿ ಗುರುಗಳೇ,
ದಾಸರೇ ಹೇಳಿದ್ದಾರಲ್ಲ,
”ನಿಂದಕರಿರಬೇಕು..ಹಂದಿಯ ಹಾಗೆ!”
ಸುಮ್ಮನೇ ಅತ್ಲಾಗೆ ಝಾಡಿಸಿ ಮಾರಾಯ್ರೆ..
-ರಾಘವೇಂದ್ರ ಜೋಶಿ.
ಯಾರೋ ಮುಖವಿಲ್ಲದವರು ಬೊಗಳುತ್ತಾರೆಂದು …
ಬ್ಲಾಗ್ ನಿಲ್ಲಿಸುವಷ್ಟು ಹೇಡಿಯಾ ನಮ್ಮ ಜೋಗಿ…?
ಛೇ… ಹಾಗಿರಲಿಕ್ಕಿಲ್ಲ….
ನೀವು ಬರೆದದುದ್ದನ್ನು ಅಭಿಮಾನದಿಂದ ಓದುವವರು ಬಹಳ ಜನರಿದ್ದಾರೆ…
ಅವರಿಗೆ ನಿರಾಸೆ ಆಗುತ್ತದಲ್ಲ….
Hi Girish,
Please note that for every person who wants to
criticise you, there are tens of us who wants to read you.
So please dont stop. I love your writings and short poems too. Hope to see u soon.
eÉÆÃV ¸Ágï
PÀ£À¹£À ¸ÁUÀgÀzÀ°è ¤ªÀÄä CPÀëgÀUÀ¼À zÉÆÃt PÀnÖPÉÆAqÀÄ «ºÀj¸ÀÄwÛzÀÝ £ÀªÀÄUÉ ¸ÁUÀgÀzÀ ªÀÄzÉå PÉÊ ©lÄÖ ªÀÄļÀÄV¸À¨ÉÃr ªÀiÁgÀAiÉÄæÃ…….. EzÉAxÁ ²PÉë
dear jogi,you are giving new hope to us all.please dont stop writing blog.-krishna murty hebbar
ಜೋಗಿ ಸರ್,
ನೀವು ಬ್ಲಾಗ್ ಬರವಣಿಗೆ ನಿಲ್ಲಿಸೋದಕ್ಕೆ ಇಷ್ಟು ಕ್ಷುಲ್ಲಕ ಕಾರಣವನ್ನು ಎದುರುಮಾಡ್ತೀರಿ ಅಂದುಕೊಂಡಿರಲಿಲ್ಲ. ಮುಖವಾಡಗಳಿಗಿಂತಲೂ ನೀವು ಮತ್ತು ನಿಮ್ಮ ಓದುಗ ವರ್ಗ ಎಷ್ಟೋ ಎತ್ತರ, ಗಟ್ಟಿ. ನಿಮ್ಮ ಅಕ್ಷರಗಳಿಗೆ ಆ ಹಂದಿಗಳ ವೈರಸ್ ಹತ್ತಗೊಡಬೇಡಿ. ಬರೀರಿ, ಪ್ಲೀಸ್.