ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚ ಹ ರಘುನಾಥ್, ರೇಣುಕಾ ರಮಾನಂದ, ಕನಕರಾಜ್ ಗೆ ಕಥಾ ಪ್ರಶಸ್ತಿ

ಕಲಬುರ್ಗಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ರಾಜ್ಯಮಟ್ಟದ ಕನ್ನಡ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ.

ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ಕಥಾ ಸ್ಪರ್ಧೆಯಲ್ಲಿ ‘ಸುಧಾ’ ವಾರಪತ್ರಿಕೆಯ ಸಂಪಾದಕರಾದ ಚ ಹ ರಘುನಾಥ್ ಅವರಿಗೆ ಚಿನ್ನದ ಪದಕವನ್ನು ಘೋಷಿಸಲಾಗಿದೆ.

‘ಅವಧಿ’ಯ ಅಂಕಣಕಾರರಾದ ರೇಣುಕಾ ರಮಾನಂದ ಅವರಿಗೆ ಬೆಳ್ಳಿ ಪದಕ ಹಾಗೂ ಉಪನ್ಯಾಸಕ ಕನಕರಾಜ ಆರನಕಟ್ಟೆ ಅವರು ಕಂಚಿನ ಪದಕ ವಿಜೇತರಾಗಿದ್ದಾರೆ ಎಂದು ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಎಚ್ ಟಿ ಪೋತೆ ಅವರು ತಿಳಿಸಿದ್ದಾರೆ.

ಚ ಹ ರಘುನಾಥ ಅವರ ‘ಗೋರಿ’ ಕಥೆ, ರೇಣುಕಾ ರಮಾನಂದ ಅವರ ‘ಬಾಳ ಪಯಣ’ ಹಾಗೂ ಕನಕರಾಜ ಆರನಕಟ್ಟೆ ಅವರ ‘ಸ್ಟ್ಯಾಚ್ಯು ಆಫ್ ಲಿಬರ್ಟಿ’ ಪ್ರಶಸ್ತಿ ವಿಜೇತ ಕಥೆಗಳು.

ಪ್ರಶಸ್ತಿ ವಿಜೇತರಿಗೆ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕದೊಂದಿಗೆ ಕ್ರಮವಾಗಿ ತಲಾ 5000/- 3,000/- ಹಾಗೂ 2,000/- ರೂಪಾಯಿ ಗೌರವಧನ ಹಾಗೂ ಸ್ಮರಣಿಕೆ ಕೊಡಲಾಗುವುದು.

‍ಲೇಖಕರು avadhi

29 October, 2020

2 Comments

  1. Vasudeva Sharma

    ಬಹಳ ಸಂತೋಷ. ಅಭಿನಂದನೆಗಳು

  2. ಗೀತಾ ಎನ್ ಸ್ವಾಮಿ

    ಅಭಿನಂದನೆಗಳು ಪ್ರಶಸ್ತಿ ಪಡೆದ ಎಲ್ಲಾ ಗೌರವಾನ್ವಿತರಿಗೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading