ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದನ ಕುಮಾರ್ ಕೊಳಲು ವಾದನ

ನಾದಜ್ಯೋತಿ ಸಂಗೀತೋತ್ಸವದಲ್ಲಿ ಚಂದನ ಕುಮಾರ್ ಕೊಳಲು ವಾದನ ನಾದಜ್ಯೋತಿ ಶ್ರೀ ತ್ಯಾಗರಾಜಸ್ವಾಮಿ ಭಜನ ಸಭಾ ಹಾಗೂ ಮಲ್ಲೇಶ್ವರಂ ಆರ್ಯವೈಶ್ಯ ಸಂಘದ ಜಂಟಿ ಸಹಯೋಗದಲ್ಲಿ ‘೪೬ನೇ ನಾದಜ್ಯೋತಿ ಸಂಗೀತೋತ್ಸವ-೨೦೧೧’ ಇಂದಿನಿಂದ (jan 29) ಪ್ರಾರಂಭವಾಗುತ್ತಿದೆ. ಈ ಒಂಬತ್ತು ದಿನಗಳ ಸಂಗೀತೋತ್ಸವದಲ್ಲಿ ಮೊದಲ ದಿನ ಕಾರ್ಯಕ್ರಮ ನೀಡುವವರು ಸಂಗೀತರತ್ನ ಟಿ.ಚೌಡಯ್ಯ ಅವರ ಮೊಮ್ಮಗ ಮೈಸೂರು ಎ.ಚಂದನ ಕುಮಾರ್. ಇವರ ಕೊಳಲು ವಾದನಕ್ಕೆ ಎಸ್.ಶೇಷಗಿರಿ ರಾವ್ (ಪಿಟೀಲು), ಎ.ವಿ.ಆನಂದ್ (ಮೃದಂಗ), ಎಂ.ಎ.ಕೃಷ್ಣಮೂರ್ತಿ (ಘಟ), ಎಂ.ಗುರುರಾಜ್ (ಮೋರ್ಚಿಂಗ್) ಸಹಕರಿಸಲಿದ್ದಾರೆ. ಈ ಯುವ ಕಲಾವಿದನ ಕೊಳಲ ನಾದದ ಆಸ್ವಾದವನ್ನು ಮಿಸ್ ಮಾಡಿಕೊಳ್ಳಬೇಡಿ. ಸ್ಥಳ: ಆರ್.ಪಿ.ರವಿಶಂಕರ್ ಸಭಾಂಗಣ, ೮ನೇ ಕ್ರಾಸ್, ಮಲ್ಲೇಶ್ವರಂ. ಸಮಯ: ಸಂಜೆ ೭ ಗಂಟೆ  ]]>

‍ಲೇಖಕರು G

29 January, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading