ನಾದಜ್ಯೋತಿ ಸಂಗೀತೋತ್ಸವದಲ್ಲಿ ಚಂದನ ಕುಮಾರ್ ಕೊಳಲು ವಾದನ
ನಾದಜ್ಯೋತಿ ಶ್ರೀ ತ್ಯಾಗರಾಜಸ್ವಾಮಿ ಭಜನ ಸಭಾ ಹಾಗೂ ಮಲ್ಲೇಶ್ವರಂ ಆರ್ಯವೈಶ್ಯ ಸಂಘದ ಜಂಟಿ ಸಹಯೋಗದಲ್ಲಿ ‘೪೬ನೇ ನಾದಜ್ಯೋತಿ ಸಂಗೀತೋತ್ಸವ-೨೦೧೧’ ಇಂದಿನಿಂದ (jan 29) ಪ್ರಾರಂಭವಾಗುತ್ತಿದೆ. ಈ ಒಂಬತ್ತು ದಿನಗಳ ಸಂಗೀತೋತ್ಸವದಲ್ಲಿ ಮೊದಲ ದಿನ ಕಾರ್ಯಕ್ರಮ ನೀಡುವವರು ಸಂಗೀತರತ್ನ ಟಿ.ಚೌಡಯ್ಯ ಅವರ ಮೊಮ್ಮಗ ಮೈಸೂರು ಎ.ಚಂದನ ಕುಮಾರ್.
ಇವರ ಕೊಳಲು ವಾದನಕ್ಕೆ ಎಸ್.ಶೇಷಗಿರಿ ರಾವ್ (ಪಿಟೀಲು), ಎ.ವಿ.ಆನಂದ್ (ಮೃದಂಗ), ಎಂ.ಎ.ಕೃಷ್ಣಮೂರ್ತಿ (ಘಟ), ಎಂ.ಗುರುರಾಜ್ (ಮೋರ್ಚಿಂಗ್) ಸಹಕರಿಸಲಿದ್ದಾರೆ. ಈ ಯುವ ಕಲಾವಿದನ ಕೊಳಲ ನಾದದ ಆಸ್ವಾದವನ್ನು ಮಿಸ್ ಮಾಡಿಕೊಳ್ಳಬೇಡಿ.
ಸ್ಥಳ: ಆರ್.ಪಿ.ರವಿಶಂಕರ್ ಸಭಾಂಗಣ, ೮ನೇ ಕ್ರಾಸ್, ಮಲ್ಲೇಶ್ವರಂ. ಸಮಯ: ಸಂಜೆ ೭ ಗಂಟೆ
]]>
ಚಂದನ ಕುಮಾರ್ ಕೊಳಲು ವಾದನ
ನಿಮಗೆ ಇವೂ ಇಷ್ಟವಾಗಬಹುದು…




0 Comments