ಚ ಹ ರಘುನಾಥ್, ರೇಣುಕಾ ರಮಾನಂದ, ವಿಜಯಭಾಸ್ಕರ್ ಅವರಿಗೆ ವಿವಿಧ ಬಹುಮಾನ
ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಂದು ಜರುಗಿತು.
2019 ನೇ ಸಾಲಿನ ಪುಸ್ತಕ ಪ್ರಶಸ್ತಿ, ದಿ. ಜಯತೀರ್ಥ ರಾಜಪುರೋಹಿತ ದತ್ತಿ ಕಥಾ ಪ್ರಶಸ್ತಿ ವಿತರಿಸಲಾಯಿತು.
ಪ್ರಸಾರಾಂಗ ದ ನಿರ್ದೇಶಕರಾದ ಪ್ರೊ ಎಚ್ ಟಿ ಪೋತೆ ಅವರು ಪ್ರಶಸ್ತಿ ಕುರಿತು ಮಾತನಾಡಿ ಗುಲಬರ್ಗಾ ವಿಶ್ವವಿದ್ಯಾಲಯದ ಎರಡನೆಯ ಕುಲಪತಿಯಾಗಿದ್ದ ಸಾಹಿತಿ ಹಾ ಮಾ ನಾಯಕ ಅವರು ಕಲ್ಯಾಣ ಕರ್ನಾಟಕ ಪ್ರದೇಶದ ಲೇಖಕರನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಯೋಜನೆ ಜಾರಿಗೆ ತಂದರು. ಇದರೊಂದಿಗೆ ರಾಜ್ಯ ಮಟ್ಟದ ಕಥಾ ಪ್ರಶಸ್ತಿಯನ್ನು ಸಹಾ ವಿವಿ ನೀಡುತ್ತಾ ಬಂದಿದೆ ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿ ವಿ ವಸಂತಕುಮಾರ್ ಮಾತನಾಡಿ ತಮ್ಮ ಹಾಗೂ ಕಲಬುರ್ಗಿಯ ನಂಟನ್ನು ಸ್ಮರಿಸಿದರು.
ಸಮಾರಂಭದ ಫೋಟೋ ಆಲ್ಬಂ ಇಲ್ಲಿದೆ.
ವರದಿ-ಚಿತ್ರಗಳು: ಶ್ರೀಶೈಲ ನಾಗರಾಳ


















ಪ್ರಶಸ್ತಿ ಪುರಸ್ಕೃತರೆಲ್ಲರಿಗೂ ಅಭಿನಂದನೆಗಳು.