
ಎಚ್ ಎಂ ಶಿವಪ್ರಕಾಶ್
ಮನುಜ..
ಸರಿಯಾಗಿ ನೋಡು…
ಹಣವಿಲ್ಲದೆ ನಿನಗೆ ಸಿಕ್ಕಿಹ…
ಬೆಲೆಕಟ್ಟಲಾಗದ ಅತ್ಯಮೂಲ್ಯ ಕೊಡುಗೆ ಇಲ್ಲಿದೆ…
ಇಲ್ಲಿ…
ಗಾಳಿಯಿದೆ…
ನೀರಿದೆ…
ಹಾಗು ಬೆಳಕಿದೆ…
ಬೆಳಕಿಲ್ಲದೆ ಬದುಕಿಲ್ಲ…
ಗಾಳಿಯಿಲ್ಲದೆ ಉಸಿರಿಲ್ಲ…
ನೀರಿಲ್ಲದೆ ನೀನೇ ಇಲ್ಲ..
ಉಚಿತವಾಗಿ ಸಿಕ್ಕಿದೆಯೆಂದು…
ಹಾಳು ಮಾಡಬೇಡ…
ಕಾಲಮೀರಿದೊಡೆ… ಪರಿತಪಿಸಿದರೂ…
ನಿನಗೆ ಕ್ಷಮೆಯಿಲ್ಲ…
ಅಂಬಿಗನಿರದ ಈ ದೋಣಿಗೆ,
ನೀನೆ ಅಂಬಿಗ…
ಇಲ್ಲಿ ಕಿಚ್ಚಿದೆ… ನೀರೂ ಇದೆ…
ಕಿಚ್ಚು ಹಚ್ಚಿದ್ದು ನೀನು…
ಆರಿಸಬೇಕಾಗಿರುವುದು ನೀನೇ…!!!
ಎಚ್ಚೆತ್ತುಕೊ…
ಈಗಾಗಲೇ ಬಹಳ ತಡವಾಗಿದೆ…
ಬಹಳ ತೆರಿಗೆ ಕಟ್ಟಿ ಕೊಳ್ಳುವ ದಿನ ಬಲುದೂರವಿಲ್ಲ…
ಆ ದುರಂತಕ್ಕಾಗಿ ಕಾಯಬೇಡ…
ನೀರಿನಾಳ ಅರಿಯದ…
ಈ ಕಾಗದದ ದೋಣಿಗೆ,
ಬುದ್ಧಿಯಂಬ ಕಿಚ್ಚು ಹಚ್ಚಿ….
ಕಾಪಾಡು…
ಬಳಸು…
ಬೆಳಸು…
ನಾಳಿನವರಿಗೂ ಕಾಪಾಡು…
ನಾ ಸುಟ್ಟು ಬೂದಿಯಾಗುವ ಮೊದಲು..





0 Comments