
ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ವಿಭಾಗವು ಡಿಸೆಂಬರ್ 29ರಿಂದ 31ರವರೆಗೆ, ಕುಪ್ಪಳಿಯಲ್ಲಿ `ಕನ್ನಡ ಕಮ್ಮಟ’ವನ್ನು ನಡೆಸುತ್ತಿದೆ. ಊಟ, ವಸತಿ ಉಚಿತವಿರುತ್ತದೆ. ಇದರಲ್ಲಿ ಕುವೆಂಪು ಆಯ್ದ ಬರಹಗಳನ್ನು ಕುರಿತು ಸಂವಾದ ನಡೆಸಲಾಗುವುದು.
ಪದವಿ, ಸ್ನಾತಕೋತ್ತರ ಪದವಿ ಮತ್ತು 30 ವರ್ಷ ಒಳಗಿನ ಸಾಹಿತ್ಯಾಸಕ್ತರು ಡಿಸೆಂಬರ್ 5ರ ಒಳಗೆ ಸ್ವವಿವರದೊಂದಿಗೆ ಅರ್ಜಿ ಸಲ್ಲಿಸಲು ಕೋರಿದೆ. ಆಯ್ಕೆಯಾದವರು 100 ರೂ. ಶುಲ್ಕದೊಂದಿಗೆ ಕಮ್ಮಟಕ್ಕೆ ಹಾಜರಾಗಬಹುದು.
ಸ್ವವಿವರದ ಅರ್ಜಿಗಳನ್ನು ಡಾ. ಬಿ.ಎಂ. ಪುಟ್ಟಯ್ಯ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ಅಂಚೆ, ಹೊಸಪೇಟೆ, 583 276- ಈ ವಿಳಾಸಕ್ಕೆ ಕಳಿಸಲು ಕೋರಿದೆ. ಅಥವಾ drbmputtaiah@gmail.com ಈ ವಿಳಾಸಕ್ಕೆ ಮೆಯಿಲ್ ಮಾಡಬಹುದು.
ಕುಪ್ಪಳಿಯಲ್ಲಿ ’ಕನ್ನಡ ಕಮ್ಮಟ’ಕ್ಕೆ ಸ್ವಾಗತ
ನಿಮಗೆ ಇವೂ ಇಷ್ಟವಾಗಬಹುದು…




ತುಂಬಾ ಅರ್ಥಪೂರ್ಣ ಕಾರ್ಯಕ್ರಮ..aadare ಇದಕ್ಕೆ ವಯಸ್ಸು ನಿರ್ಬಂಧನೆ ಏಕೆ ? ಕುವೆಂಪು ಅವರನ್ನು ಅರ್ಥೈಸಿ ಕೊಳ್ಳ ಬೇಕಾದ ಸಾಮಾಜಿಕ ಅನಿವಾರ್ಯತೆ ಇಂದು ಈ ಸಮಾಜಕ್ಕೆ ಇದೆ.. ಅವರ ಸಾಹಿತ್ಯ ,ಚಿಂತನೆ ,ಬದುಕು ,ಬರಹ,ಜೀವನ ಶೈಲಿ ,ಹೀಗೆ ಹೀಗೆ ಎಲ್ಲವನ್ನು ಘಂಬೀರ ವಾಗಿ ಅಡ್ಯನ ಮಾಡಬೇಕಾದ ,ಅರಿಯಬೇಕಾದ ,ಅನಿವಾರ್ಯತೆ ,ಹಾಗು ಅಗತ್ಯತೆ ಇಂದು ನಮ್ಮ ಸಮಾಜಕ್ಕೆ ಇದೆ,, ಹೀಗಿರುವಾಗ ಅದಕ್ಕೆ ವಯೋಮಿತಿ ಕಡಿವಾಣ ಹಾಕೋದು ಸರಿಯೇ .ಒನ್ದು ಹೇಳಿಕೆ ಪ್ರಕಾರ ಮನುಷ್ಯ ಕೊನೆ ಉಸಿರು ಇರೋವರೆಗೂ ಅಥವಾ ಉಸಿರು ಬಿದೊವರೆಗೂ ಕಲಿಯಬೇಕಂತೆ ,,ಅದೇನು ಅಕೆಡೆಮಿಕ್ ಕಲಿಕೆಯೇ ..ಕುವೆಮ್ಪು ನಾವು ಬದುಕಿರೋವರೆಗೂ ಅದ್ಯಯನ ಮಾಡಿದರು ಅರ್ಥೈಸಿ ಕೊಳ್ಳಲಾರದಸ್ತು.. ಒಂದು ದೊಡ್ಡ ನಿಘಂಟು …
ಆ ಬಗ್ಗೆ ಯೊಚಿಸಿ…
ವಯಸ್ಸಿನ ನಿರ್ಬಂಧ ಇಲ್ಲದಿದ್ದರೆ ನನಗೂ ನೆಚ್ಚಿನ ಕವಿ ಕುವೆಂಪು ಕುರಿತ “ಕನ್ನಡ ಕಮ್ಮಟ”ದಲ್ಲಿ ಭಾಗವಹಿಸುವ ಇಚ್ಚೆ ಇದೆ. ಶ್ರೀ ಡಿ. ರವಿವರ್ಮ ಅವರ ಮಾತುಗಳನ್ನು ನಾನೂ ಅನುಮೋದಿಸುತ್ತೇನೆ.
ಕುವೆ೦ಪು ಅಧ್ಯಯನ ಅನ್ನೊದು ಇ೦ತಿಷ್ಟ ವಯೊಮಿತಿಗೆ ಮಾತ್ರ ಸೀಮಿತವಾದುದು ಅ೦ತಾ ಗೆರೆ ಹಾಕೊದು ನನಗೆನೊ ಸರಿಯಾಗಿ ಕಾಣಲಿಲ್ಲ ಆಯೊಜಕರು ಇದರ ಬಗೆಗೆ ಇನ್ನಷ್ಟು ಆಲೊಚನೆ ಮಾಡೊದು ಒಳಿತು ಅ೦ತಾ ನನ್ನ ಅನಿಸಿಕೆ
ಬಸವಣ್ಣೆಪ್ಪ.ಕ೦ಬಾರ