
ಕಿರಣ್ ಭಟ್ ಹೊನ್ನಾವರ
ಕಲಬುರ್ಗಿಯಲ್ಲಿದ್ದಾಗ ರಂಗಾಯಣ ಕ್ಕೆ ಭೆಟ್ಟಿಕೊಟ್ಟೆ. ನಿರ್ದೇಶಕ ಪ್ರಭಾಕರ ಜೋಶಿ ಯವರ ನೇತೃತ್ವದಲ್ಲಿ ರಂಗಾಯಣದಲ್ಲಿ ನಿರಂತರ ಚಟುವಟಿಕೆಗಳು ನಡೆದಿವೆ. ಕೋವಿಡ್ ಕಾಲದಲ್ಲೂ ಶ್ರೀನಿವಾಸ ವೈದ್ಯರ ನಾಟಕದ ಸಿದ್ಧತೆ ನಡೆದಿದೆ. ಆ ವಾರವನ್ನು ಚೆಂದಗೊಳಿಸಲಾಗುತ್ತಿದೆ.
ಶಿಲ್ಪಕಲಾ ಅಕಾಡೆಮಿಯ ಸಹಯೋಗದೊಂದಿಗೆ ಶಿಲ್ಪಗಳು ಸಿದ್ಧವಾಗುತ್ತಿವೆ. ಗುಬ್ಬಿ ವೀರಣ್ಣ, ಬಿ ವಿ ಕಾರಂತ, ಸಿದ್ಧಯ್ಯ ಪುರಾಣಿಕ, ಗೀತಾ ನಾಗಭೂಷಣ, ಸೊಲಬಕ್ಕನವರ್ ಹೀಗೆ ರಂಗಭೂಮಿ, ಸಾಹಿತ್ಯ, ಕಲಾ ಪ್ರಪಂಚದ ಹಿರಿಯರ ಬಸ್ಟ್ ಗಳು, ನಾಟಕದ ದೃಶ್ಯ ಗಳ ಶಿಲ್ಪಗಳು ಸಿದ್ಧವಾಗುತ್ತಿವೆ. ಎಲ್ಲ ಮುಗಿದ ಮೇಲೆ ಕಲಬುರ್ಗಿ ರಂಗಾಯಣದ ಆ ವಾರಕ್ಕೆ ಹೊಸ ಖದರು ಬರಲಿದೆ.
















0 Comments