2014ನೇ ಸಾಲಿನ ನಾಡಿನ ಪ್ರತಿಷ್ಠಿತ “ಮಾಸ್ತಿ ಪ್ರಶಸ್ತಿ’ ಘೋಷಣೆ ಆಗಿದೆ
ಹಿರಿಯ ಲೇಖಕ ಹಾಗು ವಿಮರ್ಶಕರಾದ ಎಸ್ ದಿವಾಕರ್, ಡಾ ಕೆ ಸತ್ಯನಾರಾಯಣ ಮತ್ತು ಬಿ ಆರ್ ಲಕ್ಷ್ಮಣ್ರಾವ್ ಅವರು ಆಯ್ಕೆಯಾಗಿದ್ದಾರೆ

ಡಾ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ ಸಮಿತಿ ಪ್ರತಿವರ್ಷ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಲೇಖಕರುಗಳಿಗೆ “ಮಾಸ್ತಿ ಪ್ರಶಸ್ತಿ’ ನೀಡುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ನಾಡಿನ ಹಿರಿಯ ಲೇಖಕ, ಅನುವಾದಕ, ವಿಮರ್ಶಕ ಎಸ್ ದಿವಾಕರ್ ಅವರ ಸಣ್ಣ ಕತೆಗಳು, ಡಾ ಕೆ ಸತ್ಯನಾರಾಯಣ ಅವರ ಸಣ್ಣಕತೆಗಳು ಹಾಗೂ ಹಿರಿಯ ಕವಿ ಬಿ ಆರ್ ಲಕ್ಷ್ಮಣ್ರಾವ್ ಅವರ ಕಾವ್ಯಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಜೂನ್ನಲ್ಲಿ ಮೂವರು ಸಾಧಕರಿಗೆ ಮಾಸ್ತಿ ಪ್ರಶಸ್ತಿ ಫಲಕ, ಸನ್ಮಾನದೊಂದಿಗೆ ತಲಾ ಇಪ್ಪತ್ತೈದು ಸಾವಿರ ರೂ. ಪ್ರದಾನ ಮಾಡಲಾಗುವುದು
ಎಂದು ಪ್ರಶಸ್ತಿ ಸಮಿತಿ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ತಿಳಿಸಿದ್ದಾರೆ.






hardika abhinandanegaLu..
ಎಂತಹ ಖುಷಿಯ ವಿಷಯ! ಮೂವರಿಗೂ ಅಭಿನಂದನೆಗಳು.
ಮೂವರಿಗೂ ಹಾರ್ದಿಕ ಅಭಿನಂದನೆಗಳು
ಈ ಮೂವರೂ ಪ್ರಶಸ್ತಿಗೇ ಹೆಮ್ಮೆ ತರುವಂಥಹವರು, ಅಭಿನಂದನೆಗಳು.
Ellarigoo thumbaa thumbaa thanks.