ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎನ್ ರವಿಕುಮಾರ್ ಗೆ ವಿಭಾ ಸಾಹಿತ್ಯ ಪ್ರಶಸ್ತಿ

2018 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಶಿವಮೊಗ್ಗದ ಎನ್ ರವಿಕುಮಾರ್ (ಟೆಲೆಕ್ಸ್ ರವಿ) ಆಯ್ಕೆಯಾಗಿದ್ದಾರೆ . ಇವರ  ‘ರವಿಕುಮಾರ ಕವನಗಳು’ ಹಸ್ತಪ್ರತಿ ಈ ಪ್ರಶಸ್ತಿ ದೊರೆತಿದೆ.

ಈ ಪ್ರಶಸ್ತಿಯು 10 ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಕೆ ವೈ ನಾರಾಯಣಸ್ವಾಮಿ ಮತ್ತು ಸಬಿತಾ ಬನ್ನಾಡಿ ಅವರನ್ನೊಳಗೊಂಡ ಸಮಿತಿ ಈ ಆಯ್ಕೆಯನ್ನು ಮಾಡಿದೆ.

ಅಂತಿಮ ಹಂತಕ್ಕೆ ಆಯ್ಕೆ ೧೦ ಹಸ್ತಪ್ರತಿಗಳು ಸ್ಪರ್ಧೆಯಲ್ಲಿದ್ದವು.

ಅದರ ವಿವರ –

1. ಆಕರ್ಷ ಕಮಲ – ಕವಿತೆಯಾಗದ ಮಳೆ

2. ಎನ್. ರವಿಕುಮಾರ್- ರವಿಕುಮಾರ್ ಕವಿತೆಗಳು

3. ಶಿ.ಜು ಪಾಶ- ಕದದ ಕಣ್ಣು

4. ಆನಂದ ಋಗ್ವೇದಿ – ಕಣ್ಣೆಂಬುದು ರೆಪ್ಪೆಯೊಳಗಿನ ಹಣ್ಣು

5. ಕೆ.ಪಿ ನಟರಾಜ – ಮೃತ್ತಿಕೆಯ ಕಣ್ಣುಗಳು

6. ಲಕ್ಷ್ಮಣ ವಿ.ಎ – ಲಕ್ಷ್ಮಣ ಕವಿತೆಗಳು

7. ಸಚಿನ ಅಂಕೋಲಾ – ಗುಬ್ಬಚ್ಚಿ ಕನಸು

8. ಸ್ಮಿತಾ ಅಮೃತರಾಜ ಸಂಪಾಜೆ – ಮಾತು ಮೀಟಿ ಹೋಗುವ ಹೊತ್ತು

9. ದುಡ್ಡನಹಳ್ಳಿ ಮಂಜುನಾಥ – ಹಿಂದಿನ ಮೆನುವಿಗೆ ನಾಲ್ಕನ್ನು ಒತ್ತಿ

10. ಚ. ಲಿಂಗರಾಜ ಸೊಟ್ಟಪ್ಪನವರ – ಕ್ಯಾಕ್ಟಸ್ ಮತ್ತೆ ಅದರ ರುಚಿ

‍ಲೇಖಕರು avadhi

22 October, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading