ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಶಾನ್ಯೆ ಬರೆಯುತ್ತಾರೆ..

ಮೂರನೆಯ ದಿನ – ಫಕ್ದಿಂಗ್ ವರೆಗೆ

agni-air-to-lukla

ನಮ್ಮ ಲೀಡರ್ ವಸುಮತಿ. ಅವರ ಬಗ್ಗೆ ಬರೆಯದೆ ಇರುವುದು ಅನ್ಯಾಯ. ನಮ್ಮ ಗುಂಪಿನಲ್ಲಿ ಅವರ ಮಗಳು ಸ್ಮಿತ, ಮಗ ಶರತ್ ಮತ್ತು ಅವರ ಸೋದರನ ಮಗಳು ತನ್ವಿ, ಮೂರೂ ಜನರಿದ್ದರು. ಎಲ್ಲರೂ ಮಜಾ ಮಾಡುವವರು ಹಾಗೂ ಒಳ್ಳೆಯ ಜನರು. ಆದರೆ ವಸುಮತಿಯವರು ಸಿಕ್ಕಾಪಟ್ಟೆ ಕಟ್ಟುನಿಟ್ಟಿನ ವ್ಯಕ್ತಿ. ಇದರಿಂದಾಗಿಯೇ ಅವರಿಗೆ ತುಂಬ ಹಗೆಗಳು. ಸೈನ್ಯದಲ್ಲಿದ್ದ ಅವರ ಗಂಡ ಹೇಳುವಂತೆ ’ನನಗೇ ಒಂದೊಂದು ಸಲ, ನಾನಲ್ಲ ಇವಳೇ ಸೈನ್ಯದಲ್ಲಿ ಇದ್ದಿದ್ದು ಅನ್ನಿಸುತ್ತದೆ’ ಎಂಬಂತಹ ಶಿಸ್ತಿನ ಸಿಪಾಯಿ. ಇದರಿಂದ ಬಹಳ ಸಲ ಗುಂಪಿನಲ್ಲಿ ಕಸಿವಿಸಿ ನಡೆಯುತ್ತಿತ್ತು. ಆದರೆ, ಅಂತಹದವರೊಬ್ಬರಿದ್ದರೆ, ಈ ರೀತಿಒಂದು ಟ್ರೆಕ್ ಸುಲಭಸಾಧ್ಯ. ವಸುಮತಿಯವರು ನಮಗೆ ಸಮಯಪಾಲನೆ ಬಗ್ಗೆ ಯಾವಾಗಲೂ ಹೇಳುತ್ತಲೇ ಇರುತ್ತಿದ್ದರು. ಯಾರಾದರೂ ತಡ ಮಾಡಿದರೆ ನಾನು ಅವರನ್ನು ಹಿಂತಿರುಗಿ ಕಳುಹಿಸುತ್ತೇನೆ ಎಂದೇ ಹೇಳುತ್ತಿದ್ದರು. ಆವರು ಹೀಗೆ ಹೇಳಿದಾಗಲೆಲ್ಲಾ, ’ಅದು ನನಗಲ್ಲ’ ಎಂದೇ ಎಣಿಸುತ್ತಿದ್ದೆ.

ಸಂಪೂರ್ಣ ಓದಿಗೆ ಭೇಟಿ ಕೊಡಿ: ಜೀವ ಜಾಲ

+++

 

ಜರ್ನಿ ಟು ಹಂಪಿ

raviajjipura_mode
ಅವತ್ತು ಶುಕ್ರವಾರ. ಸಮಯ ರಾತ್ರಿ ಹತ್ತೂವರೆ.
ಹನ್ನೊಂದು ಜನರ ಪುಂಡ ಪಡೆಯನ್ನು ತುಂಬಿಕೊಂಡ ಹಂಪಿ ಎಕ್ಸ್ಪ್ರೆಸ್ ಹೊಸಪೇಟೆಯೆಡೆಗೆ ಶಿಳ್ಳೆ ಹಾಕುತ್ತಾ ಸಾಗಿತ್ತು. ನಮ್ಮ ಮೈಮನದ ತುಂಬೆಲ್ಲ ಜೋಷ್ ಜೋಷ್ ಮತ್ತು ಸಿಫರ್್ ಜೋಷ್. ಬೆನ್ನಿಗಿದ್ದ ಬ್ಯಾಗುಗಳನ್ನು ಒಗೆದು ಎಲ್ಲರಂತೆ ಬತರ್್ ಹತ್ತಿ ಮಲಗಿ ಗೊರಕೆ ಹೊಡೆಯಲಿಲ್ಲ. ರಾತ್ರಿ ಒಂದರ ತನಕ ಹರಟೆ, ಜೋಕು, ಅಂತ್ಯಾಕ್ಷರಿ ಎಲ್ಲಾ ನಿರಾತಂಕವಾಗಿ ಸಾಗಿತ್ತು. ಯಾರೋ ರಿಟೈಡರ್್ ಆಫೀಸರ್ ಒಬ್ಬರು ನಮ್ಮ ನಡುವೆ ತಗಲಿಹಾಕಿಕೊಂಡ್ರು. ತೋಳಗಳ ನಡುವೆ ಕುರಿ ತಗಲಿಬಿದ್ದಂಗಾಗಿತ್ತು ಅವರ ಸ್ಥಿತಿ. ಅವರೇನೂ ಕಡಿಮೆ ಇಲ್ಲ ಬಿಡಿ. ಮಾತು ಅಂದ್ರೆ ಸಾಕು ಸೇರಿಗೆ ಸವ್ವಾ ಸೇರು ಅಂತಾರಲ್ಲ ಅಂಥವರು. ಕೊನೆಗೆ ನಮ್ಮ ಚೀಕಲಾ, ಸರ್ ಮಲಗಿ ನೀವು. ವಯಸ್ಸಾಗಿದೆ. ಜಾಸ್ತಿ ಮಾತಾಡಿದ್ರೆ ಹೃದಯ ಬೇರೆ ನಿಮಗೆ ಇರೋದ್ರಿಂದ ತೊಂದ್ರೆ ಆದೀತು ಅಂತ ಮಲಗಿಸಿದಳು. ಅವರು ಆಗಲೂ ನೀವೆಲ್ಲ ಜರ್ನಲಿಸ್ಟ್ ಅಂದ್ರಲ್ಲ ಪಗಾರ ಜೋರೈತೇನು ಅಂದ್ರು. ಭಾಳ ಕೊಡ್ತೇವಿ ಅಂದ್ರು. ನಾವೇ ಸ್ವಲ್ಪ ಕಡಿಮೆ ಇಸಿಕೊಂತಾ ಇದೀವಿ ಅಂದ್ವಿ. 
ಸಂಪೂರ್ಣ ಓದಿಗೆ ಭೇಟಿ ಕೊಡಿ: ನದಿ ಪ್ರೀತಿ 

‍ಲೇಖಕರು avadhi

27 November, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading