ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ತೇಜಸ್ವಿಯವರ “ಮಾಯಾಮೃಗ” ನಾಟಕ

ವಟಿ ಕುಟೀರ ಪ್ರಸ್ತುತ ಪಡಿಸುವ ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ಸಣ್ಣ ಕಥೆ ಆಧಾರಿತ ನಾಟಕ “ಮಾಯಾಮೃಗ” 

ಕೆ. ಹೆಚ್. ಕಲಾಸೌಧ, ಹನುಮಂತನಗರ, ಬೆಂಗಳೂರು.

Sept. 8, Thursday

ಸಂಜೆ 7.30 ಕ್ಕೆ ಸರಿಯಾಗಿ

ರಂಗ ವಿನ್ಯಾಸ, ನಿರ್ದೇಶನ : ಪೃಥ್ವಿ ಆರಾಧ್ಯ

ಸಹಕಾರ : ವಿಶ್ವಕನ್ನಡಿಗರ ಕೂಟ , ಅವಿರತ

ಟಿಕೆಟ್ ಬುಕ್ಕಿಂಗ್ ಗೆ ಕರೆ ಮಾಡಿ : ಟಿಕೆಟ್ ದರ : 100 ರೂಪಾಯಿ

9901030256 ಪ್ರಸಾದ್ ಹಾಸನ್

—————————————————————————————–
‘ಮಾಯಾಮೃಗ ಹೆಸರೇ ಸೂಚಿಸುವಂತೆ ಒಂದು ಮಾಯೆಯ ಪ್ರಾಣಿ, ತೇಜಸ್ವಿ ಮತ್ತು ಅವರ ಸ್ನೇಹಿತರು ಒಂದು ಸ್ಮಶಾನದಲಲಿ ದೆವ್ವವನ್ನು ಹುಡುಕಿಕೊಂಡು ಹೊರಟ ಕಥೆ ಇದಾಗಿದೆ. ದಾರಿಯಲ್ಲಿ ಅವರು ಕಂಡ ‘ಗಜ್ಜಿ ಹಿಡಿದ ನಾಯಿಮರಿ ಅವರಿಗೆ ಒಂದು ದೆವ್ವವಾಗಿ ಕಂಡಂತಾಗುತ್ತದೆ. ಇಂಥಹ ಹಲವಾರು ಜೀವನದ ಘಟನೆಗಳ ಸರಮಾಲೆಯೇ ಹಾಸ್ಯಭರಿತ ನಾಟಕವಾಗಿ ಪ್ರಸ್ತುತವಾಗುತ್ತಿದೆ.

ಈ ನಾಟಕದ ಮೂಲಕ ಪ್ರೇಕ್ಷಕರಿಗೆ ಯಾವುದೇ ತತ್ವ ಸಿದ್ಧಾಂತಗಳನ್ನು ಹುಟ್…ಟುಹಾಕುವುದಾಗಲೀ ಅಥವಾ ತೋರಿಸುವುದಾಗಲೀ ನಮ್ಮ ಉದ್ಧೇಶವಲ್ಲ ಎಂದು ನಿರ್ದೇಶಕರು ತಿಳಿಸಿದ್ದಾರೆ. ತೇಜಸ್ವಿಯವರ ಜೀವನದ ಘಟನೆಗಳನ್ನು ರಂಗದಮೇಲೆ ತೋರಿಸುವುದಷ್ಟೇ ನಮ್ಮ ಕೆಲಸ. ನಾಟಕದಲ್ಲಿ ರಂಗವಿನ್ಯಾಸ, ಬೆಳಕು ಮತ್ತು ಸಂಗೀತದ ಮೂಲಕ ಪ್ರೇಕ್ಷಕರಿಗೆ ವಿಚಿತ್ರ ಅನುಭವಗಳು ಸಿಗುವಂತೆ ಮಾಡುವ ಪ್ರಯತ್ನ ಮಾಡಿದ್ದೇವೆ.

ಹಾಸ್ಯಭರಿತವಾದ ಸಂಭಾಷಣೆಯೊಂದಿಗೆ ಮಾನವನ ಹುಚ್ಚು ಕಲ್ಪನೆಯ ವ್ಯೆಂಗ್ಯಗಳು ತೇಜಸ್ವಿಯವರ ಈ ಸಣ್ಣಕಥೆಯಲ್ಲಿ ಇದೆ.

‍ಲೇಖಕರು avadhi

8 September, 2011

1 Comment

  1. D.RAVIVARMA

    tejaswiyavaru ee nadu kanda obba visista barahagara,avara pustike oduvude ondu aalavada anubhava tejaswi avara baraha,baduku,chintanegalannu namma yuvajanangakke talupisabekagide,aa nittinalli,samvada,charche,nadeyabekagide,nimma mayamruga ee nittinalli ondu hejje,nimage abinandanegalu d,ravi varma hospet

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading