ಎಂ ಗಣೇಶ್
ನಿರ್ದೇಶಕರು ರಂಗಾಯಣ ಶಿವಮೊಗ್ಗ
ನೀವು ಇನ್ನು ಅಕ್ಕ ಸಮ್ಮೇಳನಕ್ಕೆ ಹೋಗಿಲ್ಲವಾ…..?
ಅಂತ ಒಬ್ಬರು ಇತ್ತೀಚೆಗೆ ಆಶ್ಚರ್ಯದಿಂದ ಕೇಳಿದರು
ಅವರ ಅರ್ಥದಲ್ಲಿ ಅಕ್ಕ ಸಮ್ಮೇಳನಕ್ಕಿಂತ ಮಿಗಿಲಾದದ್ದು ಈ ಭೂಮಿಯ ಮೇಲೆ ಯಾವುದು ಇಲ್ಲಾ ಅಂತಿರಬೇಕು. ಅವರ ಮಾತಿನಿಂದ ನನಗೆ ಯಾವ ಮುಜಗರವು ಆಗಲಿಲ್ಲ.
ಯಾಕೆಂದರೆ ಆಧುನಿಕ ರಂಗಭೂಮಿಯ ಪರಿಚಯವಿಲ್ಲದ ಎಷ್ಟೋ ಊರುಗಳು ಕರ್ನಾಟಕದಲ್ಲಿವೆ, ಅವುಗಳನ್ನು ಮುಟ್ಟುವುದು ನಮ್ಮ ಆದ್ಯ ಕರ್ತವ್ಯ.
ಶಿವಮೊಗ್ಗ ರಂಗಾಯಣದ ‘ರಂಗತೇರು’ ತನ್ನ ಮೂರು ನಾಟಕಗಳ ಮೂಲಕ ಏಳು ಜಿಲ್ಲೆಗಳಲ್ಲಿ ಸಂಚಾರ ಮಾಡುತ್ತ ಇಲ್ಲಿನ ನಮ್ಮ ಅಕ್ಕ-ತಂಗಿಯರನ್ನು, ಅಣ್ಣ-ತಮ್ಮಂದಿರನ್ನು ತಲಪುವ ಕೆಲಸ ಮಾಡುತ್ತಿದೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ ಅಭಿಮಾನವಿದೆ.
ಆ ಅಮೇರಿಕಾದ ಅಕ್ಕನಿಗಿಂತ ಇಲ್ಲಿನ ಅಕ್ಕಂದಿರೆ ನಮಗೆ ಮುಖ್ಯ. ಅವರ ಬದುಕು ಹಸನಾಗುವುದು ಇನ್ನು ಮುಖ್ಯ.








0 Comments