‘ಆದಿಮ ಬಳಗ’ ದಲಿತ-ದಮನಿತರ ಹಾಡು-ಪಾಡು (adimabalaga.wordpress.com) ಸಮಾನಮನಸ್ಕ ಸ್ನೇಹಿತರು ಒಟ್ಟಾಗಿ ರೂಪಿಸಿರುವ ಹೊಸ weblog ಇದು.
ದಲಿತ – ದಮನಿತರ ಬದುಕು ಬವಣೆ, ಸಾಹಿತ್ಯ ಸಂಸ್ಕೃತಿಯನ್ನು ಪರಿಚಯಿಸುವ ಬರಹ, ಪದ್ಯ, ಗದ್ಯ, ಹಾಡು-ಹಸೆ, ಚಿತ್ರ, ಸಂವಾದಗಳನ್ನು ಈ ಮೂಲಕ ಪ್ರಕಟಿಸುವ ಮತ್ತು ಚರ್ಚೆಗಳನ್ನು ಆಹ್ವಾನಿಸುವ ಉದ್ದೇಶದಿಂದ ಇದನ್ನು ರೂಪಿಸಲಾಗಿದೆ.
ಆಸಕ್ತರು ಮೇಲಿನ ಲಿಂಕ್ ಮೂಲಕ ಇದನ್ನು ವೀಕ್ಷಿಸಬಹುದು.
ವೆಬ್ಲಾಗ್ನಲ್ಲಿರುವ ಪೋಸ್ಟ್ ಗಳಿಗೆ ಅಲ್ಲಿಯೇ ಕಮೆಂಟ್ ಮಾಡಿ. ಈ ಕುರಿತಂತೆ ನಿಮ್ಮ ಬರಹಗಳಿಗೂ ಆಹ್ವಾನವಿದೆ.
ದಲಿತ ದಮನಿತರ ಬದುಕು, ಸಾಹಿತ್ಯ, ಸಂಸ್ಕೃತಿ, ಸಮಸ್ಯೆಗಳನ್ನು ಕುರಿತ ನಿಮ್ಮ ಪದ್ಯ, ಗದ್ಯ, ಹಾಡು, ಚಿತ್ರಗಳನ್ನು ಈ ವಿಳಾಸಕ್ಕೆ ಕಳುಹಿಸಿ : [email protected]
ನಿಮ್ಮೆಲ್ಲರ ಸಹಭಾಗಿತ್ವ ‘ಆದಿಮ ಬಳಗ’ದೊಂದಿಗಿರಲಿ. ಶಶಿಕಲಾ ರವಿಚಂದ್ರ ಗುರುಪ್ರಸಾದ್ ಕಂಟಲಗೆರೆ ವಡ್ಡಗೆರೆ ನಾಗರಾಜಯ್ಯ ಹುಚ್ಚಂಗಿ ಪ್ರಸಾದ್ ಅವರ ಪದ್ಯ/ಬರಹಗಳು ಈ ಬ್ಲಾಗ್ನಲ್ಲಿ ಪ್ರಕಟಗೊಂಡಿವೆ. ಗಮನಿಸಿ
0 ಪ್ರತಿಕ್ರಿಯೆಗಳು