ಹೀಗೊಂದು ಅರಿಕೆ, ‘ಸಹಗಮನ’ ನಾಟಕದಲ್ಲಿ ಮಹಾಭಾರತ ಮಹಾಕಾವ್ಯದ ಆದಿಪರ್ವದಲ್ಲಿ ನಿಮಿತ್ತಮಾತ್ರ ಬಂದು ಹೋಗಿಬಿಡುವ ಮಾದ್ರಿಯ ಒಳಗುದಿಯನ್ನು ‘ಅನಲ’ ಅಭಿವ್ಯಕ್ತಿಸುವ ಪ್ರಯತ್ನ ಮಾಡುತ್ತಿದೆ.
ಇದಕ್ಕೆ ಮುಖ್ಯ ಪ್ರೇರಣೆ 2 ವರ್ಷಗಳ ಹಿಂದೆ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಸಂಸ್ಕೃತಿ ಚಿಂತಕ, ವಿದ್ವಾಂಸರಾದ ಶ್ರೀ ಲಕ್ಷ್ಮೀಶ ತೋಳ್ಪಾಡಿ ಅವರ ಮಹಾಭಾರತ ಕುರಿತ ಲೇಖನ ಮಾಲೆ, ಹಾಗೆಯೇ ಖ್ಯಾತ ಸಾಹಿತಿ ದಿವಂಗತ ಕಡೆಂಗೋಡ್ಲು ಶಂಕರಭಟ್ಟರ ‘ ಮಾದ್ರಿಯ ಚಿತೆ’ ಕಾವ್ಯ ಭಾಗ.
-ಶಶಿಧರ ಭಾರಿಘಾಟ್.







0 Comments